ADVERTISEMENT
Tuesday, March 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನ್ನನ್ನು ಪ್ರಿಯಾಂಕಾ ಎನ್ನುತ್ತಾ ಲಿಂಗವನ್ನೇ ಬದಲಿಸಿದ್ದಾರೆ: ವಿಧಾನಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಸಚಿವ ಪ್ರಿಯಾಂಕ್ ಖರ್ಗೆ

They changed my gender by calling me Priyanka: Minister Priyank Kharge makes the assembly laugh

Shwetha by Shwetha
December 11, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ವಿಧಾನಸಭೆಯ ಕಲಾಪ ಅಂದರೆ ಸಾಮಾನ್ಯವಾಗಿ ಗಂಭೀರ ಚರ್ಚೆ, ಆರೋಪ-ಪ್ರತ್ಯಾರೋಪ, ಏರಿದ ದನಿ ಮತ್ತು ಪ್ರತಿಭಟನೆಗಳು ಸಾಮಾನ್ಯ. ಆದರೆ ಬುಧವಾರದ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ಇದಕ್ಕೆ ತದ್ವಿರುದ್ಧವಾಗಿತ್ತು. ಹೆಸರಿನ ಉಚ್ಚಾರಣೆಯಲ್ಲಿ ಆದ ಸಣ್ಣ ಎಡವಟ್ಟು ಸದನದಲ್ಲಿ ನಗೆಯ ಅಲೆ ಎಬ್ಬಿಸಿತು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹೆಸರಿನ ಕುರಿತು ನೀಡಿದ ಸ್ವಾರಸ್ಯಕರ ಹೇಳಿಕೆ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಹೆಸರು ಬದಲಾವಣೆ ಮತ್ತು ಗೊಂದಲದ ಕುರಿತು ಮಾತನಾಡುತ್ತಾ, ಹೆಸರು ಬದಲಾದರೆ ಏನಾಗುತ್ತದೆ ಎನ್ನುವುದಕ್ಕೆ ನನಗಿಂತ ಬೇರೆ ಉದಾಹರಣೆಯೇ ಇಲ್ಲ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ, ಹಲವರು ಪ್ರಿಯಾಂಕಾ.. ಪ್ರಿಯಾಂಕಾ.. ಎಂದು ಕರೆಯುವ ಮೂಲಕ ನನ್ನ ಲಿಂಗವನ್ನೇ ಬದಲು ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಾಸ್ಯಮಯವಾಗಿ ಹೇಳುವ ಮೂಲಕ ಸದನದ ಒತ್ತಡದ ವಾತಾವರಣವನ್ನು ತಿಳಿಗೊಳಿಸಿದರು.

Related posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

March 3, 2026
ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

March 3, 2026

ತಿಮ್ಮಯ್ಯ ವರ್ಸಸ್ ತಮ್ಮಯ್ಯ ಪ್ರಸಂಗ

ಈ ಹಾಸ್ಯ ಪ್ರಸಂಗಕ್ಕೆ ಕಾರಣವಾಗಿದ್ದು ಆಡಳಿತ ಪಕ್ಷದ ಸದಸ್ಯ ತಮ್ಮಯ್ಯ ಎಚ್.ಡಿ. ಅವರ ಹೆಸರು. ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯ ತಮ್ಮಯ್ಯ ಅವರನ್ನು ಅಚಾತುರ್ಯದಿಂದ ತಿಮ್ಮಯ್ಯ ಎಂದು ಸಂಭೋದಿಸಿದರು.

ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ತಮ್ಮಯ್ಯ, ಮಾನ್ಯ ಸ್ಪೀಕರ್ ಅವರೇ, ನನ್ನ ಹೆಸರನ್ನು ತಾವು ಒಮ್ಮೆ ತಿಮ್ಮಯ್ಯ ಎಂದು ಕರೆದ ಪರಿಣಾಮ, ಈಗ ಎಲ್ಲರೂ ನನ್ನನ್ನು ತಿಮ್ಮಯ್ಯ ಎಂದೇ ಕರೆಯುತ್ತಿದ್ದಾರೆ. ಇದರಿಂದಾಗಿ ನನ್ನ ಹೆಸರೇ ಬದಲಾದಂತಾಗಿದೆ ಎಂದು ಸಭಾಧ್ಯಕ್ಷರ ಗಮನ ಸೆಳೆದರು.

ಹೆಸರು ತಪ್ಪಾಗಿ ಕರೆದರೆ ದಂಡ ಗ್ಯಾರಂಟಿ

ಶಾಸಕ ತಮ್ಮಯ್ಯ ಅವರ ಅಳಲಿಗೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಸದಸ್ಯರ ಹೆಸರನ್ನು ತಪ್ಪಾಗಿ ಕರೆಯುವುದು ಸರಿಯಲ್ಲ. ನಿಮ್ಮ ಹೆಸರು ತಮ್ಮಯ್ಯ ಎಂದು ಕಡತದಲ್ಲಿದೆ. ಹೀಗಾಗಿ ಸದನದ ಕಲಾಪದಲ್ಲಿ ಇನ್ನು ಮುಂದೆ ಸದಸ್ಯರ ಹೆಸರನ್ನು ಯಾರೂ ತಪ್ಪಾಗಿ ಕರೆಯಬಾರದು. ಒಂದು ವೇಳೆ ಯಾರಾದರೂ ತಪ್ಪಾಗಿ ಹೆಸರು ಕರೆದರೆ ಅವರಿಗೆ ಸ್ಥಳದಲ್ಲೇ ದಂಡವನ್ನು ವಿಧಿಸಲಾಗುವುದು ಎಂದು ಚಟಾಕಿ ಹಾರಿಸಿದರು. ಸ್ಪೀಕರ್ ಅವರ ಈ ರೂಲಿಂಗ್ ಸದನದಲ್ಲಿ ನಗೆಯುಕ್ಕಿಸಿತು.

ನನ್ನ ಲಿಂಗವನ್ನೇ ಬದಲಿಸಿದ್ದಾರೆ ಎಂದ ಖರ್ಗೆ

ಸ್ಪೀಕರ್ ಅವರ ಮಾತಿನ ಬೆನ್ನಲ್ಲೇ ಉತ್ತರಿಸಲು ಎದ್ದುನಿಂತ ಸಚಿವ ಪ್ರಿಯಾಂಕ್ ಖರ್ಗೆ, ಸದಸ್ಯರ ಹೆಸರನ್ನು ತಪ್ಪಾಗಿ ಕರೆದಿದ್ದಕ್ಕೆ ಕ್ಷಮೆ ಕೋರಿದರು. ಬಳಿಕ ತಮ್ಮದೇ ಉದಾಹರಣೆಯನ್ನು ನೀಡುತ್ತಾ, ಹೆಸರು ತಪ್ಪಾದರೆ ಆಗುವ ಅನಾಹುತಕ್ಕೆ ನಾನೇ ದೊಡ್ಡ ಸಾಕ್ಷಿ. ನನ್ನ ಹೆಸರು ಪ್ರಿಯಾಂಕ್ ಖರ್ಗೆ. ಆದರೆ ಸಾರ್ವಜನಿಕವಾಗಿ ಮತ್ತು ಕೆಲವೊಮ್ಮೆ ಮಾಧ್ಯಮಗಳಲ್ಲಿ ನನ್ನನ್ನು ಪ್ರಿಯಾಂಕಾ ಎಂದು ಕರೆಯುತ್ತಾರೆ. ಈ ಮೂಲಕ ನನ್ನ ಹೆಸರನ್ನು ಮಾತ್ರವಲ್ಲ, ನನ್ನ ಲಿಂಗವನ್ನೇ ಬದಲಾಯಿಸಿ ಬಿಟ್ಟಿದ್ದಾರೆ ಎಂದು ಮಸಾಲೆ ಬೆರೆಸಿ ಹೇಳಿದರು. ಸಚಿವರ ಈ ಮಾತುಗಳನ್ನು ಕೇಳಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒಟ್ಟಾಗಿ ನಗಲಾರಂಭಿಸಿದರು.

ಹಾಸ್ಯದ ಬಳಿಕ ವಿಷಯಕ್ಕೆ ಮರಳಿದ ಶಾಸಕರು, ಸಚಿವರ ಉತ್ತರಕ್ಕೆ ತೃಪ್ತಿ ವ್ಯಕ್ತಪಡಿಸುತ್ತಾ ಸಮರ್ಥ ಮಂತ್ರಿ ಎಂದು ಮೆಚ್ಚುಗೆ ಸೂಚಿಸಿದರು. ಆದರೆ ವಾಕ್ಯದ ಕೊನೆಯಲ್ಲಿ ಆದರೆ.. ಎಂದು ಸೇರಿಸಿದರು. ಇದನ್ನು ತಕ್ಷಣವೇ ಗಮನಿಸಿದ ಸಚಿವ ಖರ್ಗೆ, ಸಮರ್ಥ ಎಂದು ಹೇಳಿದ ನಂತರ ಈ ಆದರೆ ಎಂಬ ಪ್ರಶ್ನೆ ಏಕೆ? ಏನೇ ಆದರೂ ಸರಕಾರ ಸದಸ್ಯರ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಿದೆ ಎಂದು ಚುರುಕಾಗಿ ಉತ್ತರಿಸಿದರು.

ಬುಧವಾರದ ಕಲಾಪವು ಗಂಭೀರ ವಿಷಯಗಳ ನಡುವೆಯೂ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸ್ಪೀಕರ್ ಖಾದರ್ ಅವರ ಸಮಯಪ್ರಜ್ಞೆಯಿಂದ ಕೂಡಿದ ಹಾಸ್ಯಕ್ಕೆ ಸಾಕ್ಷಿಯಾಯಿತು.

ShareTweetSendShare
Join us on:

Related Posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

by Shwetha
March 3, 2026
0

ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಚ್ಚು ತಣ್ಣಗಾಗುವ ಬದಲು ಮತ್ತಷ್ಟು ಉರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಸಂಧಾನದ ಪ್ರಸ್ತಾಪವನ್ನು...

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

by Shwetha
March 3, 2026
0

ರಾಣೇಬೆನ್ನೂರು: ವಿದ್ಯಾರ್ಥಿಗಳ ಪಾಲಿಗೆ ವಿದ್ಯಾದೇಗುಲವಾಗಬೇಕಿದ್ದ ಶಿಕ್ಷಣ ಸಂಸ್ಥೆಯೊಂದು ವ್ಯಾಪಾರ ಕೇಂದ್ರವಾಗಿ ಬದಲಾದ ಅಮಾನವೀಯ ಘಟನೆಗೆ ಶಿಕ್ಷಣ ಇಲಾಖೆ ಚುರುಕು ಮುಟ್ಟಿಸಿದೆ. ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ...

ವಿಶ್ವಗುರು ಪಟ್ಟಕ್ಕೇರಲು ಇದು ಸಕಾಲ, ಜಾಗತಿಕ ಶಾಂತಿಗೆ ಮುಂದಾಗಿ: ಪ್ರಧಾನಿ ಮೋದಿಗೆ ಓವೈಸಿ ಖಡಕ್ ಸಂದೇಶ

ವಿಶ್ವಗುರು ಪಟ್ಟಕ್ಕೇರಲು ಇದು ಸಕಾಲ, ಜಾಗತಿಕ ಶಾಂತಿಗೆ ಮುಂದಾಗಿ: ಪ್ರಧಾನಿ ಮೋದಿಗೆ ಓವೈಸಿ ಖಡಕ್ ಸಂದೇಶ

by Shwetha
March 3, 2026
0

ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕಾರ್ಮೋಡ ದಟ್ಟವಾಗುತ್ತಿರುವ ಹೊತ್ತಿನಲ್ಲೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 3, 2026
0

ದಿನ ಭವಿಷ್ಯ: 03-03-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಬಹಳ ಉತ್ಸಾಹದಾಯಕ ದಿನವಾಗಿದೆ. ರಾಶ್ಯಾಧಿಪತಿ ಕುಜನು ಅನುಕೂಲಕರ ಸ್ಥಾನದಲ್ಲಿರುವುದರಿಂದ ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram