ಚಿಕ್ಕಬಳ್ಳಾಪುರ: ಟ್ರಕ್ಕಿಂಗ್ ಗೆ ಹೋಗಿ ನಾಪತ್ತೆಯಾಗದ್ದ ಯುವಕರನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ದಂಡಿಗಾನಹಳ್ಳಿ ಜಲಾಶಯದ ಬಳಿಯ ಅರಣ್ಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು(Students) ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ (Bengaluru) ಜೆ.ಎನ್.ಸಿ.ಆರ್ ಕಾಲೇಜಿನ ಕೃಷ್ಣ ತಿವಾರಿ, ಶಂಭಂ ಎಂಬ ವಿದ್ಯಾರ್ಥಿಗಳು ನೆಟ್ವರ್ಕ್ ಹಾಗೂ ದಾರಿ ಸಿಗದೆ ಅರಣ್ಯದಲ್ಲಿಯೇ ಸಿಲುಕಿದ್ದರು. ಆದರೆ, ಇಂದು ಬೆಳಗಿನ 4ಗಂಟೆ ವೇಳೆಗೆ ಅಗ್ನಿ ಶಾಮಕ ದಳ ಹಾಗು ಪೊಲೀಸರು ಸೇರಿಕೊಮಡು ರಕ್ಷಣೆ ಮಾಡಿದ್ದಾರೆ.
ದಂಡಿಗಾನಹಳ್ಳಿ ಜಲಾಶಯಕ್ಕೆ ತೆರಳಿದ್ದ ಕೃಷ್ಣತಿವಾರಿ, ಶಂಭಂ ಅಲ್ಲಿಂದ ಅರಣ್ಯದಲ್ಲಿ ಅಕ್ರಮವಾಗಿ ಟ್ರಕ್ಕಿಂಗ್ಗೆ ತೆರಳಿದ್ದರು. ನಂತರ ದಾರಿ ಸಿಗದೆ ರಾತ್ರಿಯಿಡೀ ಕಾಡಿನ ಮಧ್ಯೆ ಪರದಾಡಿದ್ದು, ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು ರಾತ್ರಿಯಿಡಿ ಹುಡುಕಾಡಿದ್ದರು.