ADVERTISEMENT
Saturday, May 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಅಂಡಮಾನ್‌ ದ್ವೀಪದಲ್ಲಿರುವ ಅರಣ್ಯ ಸಂರಕ್ಷಣಾ ಪ್ರವಾಸಿ ತಾಣಗಳು ಮತ್ತದರ ಅನನ್ಯ ವಿಶೇಷತೆಗಳು: 

admin by admin
November 17, 2021
in Marjala Manthana, Newsbeat, ಮಾರ್ಜಲ ಮಂಥನ
andanan saakshatv
Share on FacebookShare on TwitterShare on WhatsappShare on Telegram

ಅಂಡಮಾನ್‌ ದ್ವೀಪದಲ್ಲಿರುವ ಅರಣ್ಯ ಸಂರಕ್ಷಣಾ ಪ್ರವಾಸಿ ತಾಣಗಳು ಮತ್ತದರ ಅನನ್ಯ ವಿಶೇಷತೆಗಳು: 

andanan saakshatvಅಂಡಮಾನ್‌ನ ಪ್ರಮುಖ ಟೂರಿಸಂ ಹಾಟ್‌ಸ್ಪಾಟ್‌ಗಳಲ್ಲಿ ಇಂಟರ್‌ವ್ಯೂ ಐಲ್ಯಾಂಡ್‌ ಕೂಡಾ ಒಂದು. ಉತ್ತರ ಅಂಡಮಾನ್ ಮತ್ತು ಮಧ್ಯ ಅಂಡಮಾನ್ ದ್ವೀಪಗಳನ್ನು ಬೇರ್ಪಡಿಸುವ ಆಸ್ಟೆನ್ ಜಲಸಂಧಿಯ ಪಶ್ಚಿಮದಲ್ಲಿರುವ ಇದು, ಸುಮಾರು 101 ಕಿಮೀ (ಅಂದರೆ 39 ಚದರ ಮೈಲಿ) ವಿಸ್ತೀರ್ಣ ಹೊಂದಿದೆ. ದ್ವೀಪದ ಉತ್ತರ ತುದಿಯಲ್ಲಿ ಕಡಿಮೆಯಿದೆ, ಆದರೆ ಕ್ರಮೇಣ 113 ಮೀಟರ್ (371 ಅಡಿ) ಎತ್ತರಕ್ಕೆ ಏರುತ್ತದೆ. ದ್ವೀಪದ ಹೆಚ್ಚಿನ ಭಾಗವು ಕಾಡು ಪ್ರದೇಶವಾಗಿದ್ದು 7 ಮೀಟರ್ (23 ಅಡಿ) ಎತ್ತರದ ಕಲ್ಲಿನ ಶಿಖರವು ದ್ವೀಪದ ದಕ್ಷಿಣ ತುದಿಯಲ್ಲಿರುವ ಬಂಡೆಯಿಂದ ಮುಚ್ಚಿದೆ.

Related posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

May 23, 2026
‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

May 23, 2026

ಫೌಲ್ ಮೈದಾನವು ದ್ವೀಪದಿಂದ ಉತ್ತರ-ಈಶಾನ್ಯಕ್ಕೆ ಸುಮಾರು 2 ಮೈಲಿ (3.2 ಕಿಲೋಮೀಟರ್) ವಿಸ್ತರಿಸಿದೆ. ಈ ದ್ವೀಪದಲ್ಲಿ ಸುಮಾರು 80-90 ಕಾಡಾನೆಗಳಿವೆ. ಹಿಂದೆ ಅರಣ್ಯ ಕೆಲಸಕ್ಕಾಗಿ ತರಲಾಗಿದ್ದ ಈ ಆನೆಗಳು ಈಗಲೂ ದ್ವೀಪದಲ್ಲಿ ಉಳಿದುಕೊಂಡಿದೆ. ಇಂಟರ್‌ ವ್ಯೂ ಐಲ್ಯಾಂಡ್‌ ಮಾಯಬುಂದರ್ ತಾಲ್ಲೂಕಿಗೆ ಸೇರಿದ್ದು, 1997ರಿಂದ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ನೀಡಲಾಯಿತು. ಇಲ್ಲಿ ಬೇಟೆ ನಿಯಂತ್ರಣಕ್ಕಾಗಿ ಅರಣ್ಯ ಸಂರಕ್ಷಕರು, ಸ್ಥಳೀಯ ಪೊಲೀಸರು ಮತ್ತು ಕರಾವಳಿ ಕಾವಲುಗಾರರನ್ನು ನಿಯೋಜಿಸಲಾಗಿದೆ.

ಅಂಡಮಾನ್‌ನ ಇನ್ನೊಂದು ಪ್ರವಾಸಿ ಸ್ಥಳ ಮೌಂಟ್ ಹ್ಯಾರಿಯೆಟ್ ರಾಷ್ಟ್ರೀಯ ಉದ್ಯಾನವನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್‌ಗೆ ಅತ್ಯಂತ ಹತ್ತಿರದ ಅರಣ್ಯ ಪ್ರದೇಶವಾಗಿದೆ. ಈ ಉದ್ಯಾನವನವು ಅಂಡಮಾನ್ ಸಮೂಹ ದ್ವೀಪಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಹೊಂದಿದೆ ಮತ್ತು ಇದು ದಟ್ಟವಾದ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದೆ. ಈ ರಾಷ್ಟ್ರೀಯ ಉದ್ಯಾನವನಕ್ಕೆ ಕರ್ನಲ್ ಆರ್.ಸಿ ಟೈಟ್ಲರ್, ಅವರ ಪತ್ನಿ ಹ್ಯಾರಿಯೆಟ್ ಅವರ ಹೆಸರನ್ನು ಇಡಲಾಗಿದೆ. ಕಾರಣ 1862ರಲ್ಲಿ ಕೆಲ ಸಮಯದವರೆಗೆ ಮುಖ್ಯ
ಆಯುಕ್ತರಾಗಿದ್ದಾಗ ಇಲ್ಲಿನ ಅಭಿವೃದ್ಧಿಗೆ ಶ್ರಮಿಸಿದ್ದರು.

andanan saakshatvಇಡೀ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಅಂಡಮಾನ್ ದ್ವೀಪಗಳ ಪೂರ್ವ ಭಾಗದಲ್ಲಿರುವ ಬೆಟ್ಟಗಳ ಒಂದು ದೊಡ್ಡ ಭಾಗವನ್ನು ರೂಪಿಸುತ್ತದೆ. ಕಡಿದಾದ ಪ್ರಪಾತದ ಇಳಿಜಾರುಗಳಿಂದ, ಶಾಂತವಾದ ಇಳಿಜಾರುಗಳವರೆಗೆ ಹೆಚ್ಚಿನ ಪ್ರದೇಶವು ಏರಿಳಿತವಿಲ್ಲದ ಭೂಪ್ರದೇಶವನ್ನು ಹೊಂದಿದೆ. ಇಲ್ಲಿನ ಕೆಲವು
ಶಿಖರಗಳಾದ ಮೌಂಟ್‌ ಕೋಯೋಬ್‌ (Mt. Koyob) 459 ಮೀಟರ್‌ ಎತ್ತರವಿದ್ದರೇ, ಮೌಂಟ್‌ ಹೆಕ್ಸ್ಟ್‌ (Mt.Hext) 425 ಮೀಟರ್‌, ಮೌಂಟ್‌ ಹ್ಯಾರಿಯೆಟ್‌ (Mt.Harriet) 422 ಮೀಟರ್, ಮೌಂಟ್‌ ಗುಡ್‌ರಿಜ್‌ (Mt Goodrig) 376 ಮೀಟರ್ ಮತ್ತು ಮೌಂಟ್‌ ಕಾರ್ಪೆಟರ್‌ (Mt.Carpeter) 346 ಮೀಟರ್‌ ಎತ್ತರವಿದೆ. ಈ ಉದ್ಯಾನವನ್ನು ನವೆಂಬರ್ 1996ರಿಂದ ಮೀಸಲು ಅರಣ್ಯ ಪ್ರದೇಶವೆಂದು ಸಂರಕ್ಷಿಸಲಾಗುತ್ತಾ ಬರಲಾಗಿದೆ. ಪ್ರಸ್ತುತ ಉದ್ಯಾನವನದ 46.62
ಚದರ ಕಿಮೀ ಮತ್ತು ಮೌಂಟ್ ಹ್ಯಾರಿಯೆಟ್ ಶಿಖರ ಮತ್ತು ಇತರ ಹತ್ತಿರದ ಪ್ರದೇಶಗಳನ್ನು ಒಳಗೊಂಡಂತೆ 25.55 ಚದರ ಕಿಮೀ ವಿಸ್ತರಿಸುವ ಪ್ರಸ್ತಾಪವಿದೆ. ಮೌಂಟ್ ಹ್ಯಾರಿಯೆಟ್‌ ರಾಷ್ಟ್ರೀಯ ಉದ್ಯಾನವು ಅದ್ಭುತವಾದ ಪ್ರಾಣಿ ಸಂಪತ್ತಿನಲ್ಲಿ ಸಮೃದ್ಧವಾಗಿದೆ.

ಬರ್ಡ್ ಲೈಫ್ ಇಂಟರ್‌ ನ್ಯಾಷನಲ್‌ ಅಂಡಮಾನಿನ ಪ್ರಮುಖ ಪಕ್ಷಿ ಸಂರಕ್ಷಣಾ ಕಾರ್ಯಕ್ರಮ. ಇದರ ಅಡಿಯಲ್ಲಿ ಉದ್ಯಾನವನವನ್ನು ಪ್ರಮುಖ ಪಕ್ಷಿಗಳ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿ 27 ಸರೀಸೃಪಗಳು ಮತ್ತು ಉಭಯಚರಗಳು ವಾಸವಿರುವ ವರದಿಯಾಗಿವೆ, ಇದರಲ್ಲಿ 12 ಸ್ಥಳೀಯ ಪ್ರಭೇದಗಳು ಸೇರಿವೆ. ರಾಣಾ ಚಾರ್ಲ್ಸ್‌ ಡಾರ್ವಿನಿ ಎಂಬ ಹೊಸ ಜಾತಿಯ ಕಪ್ಪೆಯನ್ನು ಈ ಉದ್ಯಾನವನದಲ್ಲಿಯೇ ಕಂಡುಹಿಡಿಯಲಾಯಿತು. ಕಿಂಗ್ ಕೋಬ್ರಾ, ಅಂಡಮಾನ್ ಕೋಬ್ರಾ ಮತ್ತು ಎರಡು ಗೂಡುಕಟ್ಟುವ ಸಮುದ್ರ ಆಮೆಗಳು (ಹಸಿರು ಸಮುದ್ರ ಮತ್ತು ಆಲಿವ್ ರಿಡ್ಲೆ) ಇಲ್ಲಿಂದ ವರದಿಯಾದ ಪ್ರಮುಖ ಸರೀಸೃಪಗಳು. ಸ್ಥಳೀಯ ಅಂಡಮಾನ್ ಹಂದಿ, ಶ್ರೂ ಮತ್ತು ಬಾವಲಿಗಳು ಸೇರಿದಂತೆ 12 ಜಾತಿಯ ಸಸ್ತನಿಗಳು ಉದ್ಯಾನದಲ್ಲಿವೆ ಎನ್ನಲಾಗಿದೆ. ಅನೇಕ ಹೊಸ ಜಾತಿಗಳನ್ನು
ಸೇರಿದಂತೆ ಸುಮಾರು 120 ಜಾತಿಯ ಪತಂಗಗಳು ಇಲ್ಲಿವೆ.
ಅಂಡಮಾನ್‌ ದ್ವೀಪದಲ್ಲಿರುವ ಲೈಟ್ ಹೌಸ್ 2004ರ ಹಿಂದೂ ಮಹಾಸಾಗರದಾಳದ ಭೂಕಂಪನದಿಂದ ಉಂಟಾದ ಸುನಾಮಿಯ ಪರಿಣಾಮದಿಂದ ಸಂಪೂರ್ಣವಾಗಿ ನಾಶವಾಗಿತ್ತು. ಆದರೆ ನಂತರ ಅದನ್ನು ದುರಸ್ತಿ ಮಾಡಲಾಯಿತು. 2015ರವರೆಗೆ ಇಲ್ಲಿನ ಬಹುವಿಶಿಷ್ಟ ಪಕ್ಷಿಗಳನ್ನು ಮೇಲ್ವಿಚಾರಣೆ ಮಾಡಲು ಒಂದು ವನ್ಯಜೀವಿ ನಿಲ್ದಾಣವಿತ್ತು. ಇಲ್ಲಿನ ಮೂಲಕ ಶಾಶ್ವತ ನಿವಾಸಿಗಳು ಲೈಟ್ ಹೌಸ್ ಬಳಿ ಪಶ್ಚಿಮ ಕರಾವಳಿಯಲ್ಲಿ ನೆಲೆಸಿದ್ದರು. ನಿಲ್ದಾಣವು ಲೈಟ್‌ಹೌಸ್ ಕೀಪರ್‌ ಕಣ್ಗಾವಲಿನಲ್ಲಿತ್ತು. 2015ರ ಕೊನೆಯಲ್ಲಿ ಬಜೆಟ್ ಕಡಿತದ ಕಾರಣ ವ್ಯವಸ್ಥೆಯಲ್ಲಿ ಕೊಂಚ ಮಾರ್ಪಾಡುಗಳಾಯಿತು.

vibha 

Tags: #saakshatvandaman nikobarGoodrigindiaMt. KoyobMt.Carpetertourism
ShareTweetSendShare
Join us on:

Related Posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

by Shwetha
May 23, 2026
0

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಸಚಿವಾಕಾಂಕ್ಷಿ ಶಾಸಕರು ಹಾಗೂ ಹಾಲಿ ಸಚಿವರು ದೆಹಲಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್...

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

by Shwetha
May 23, 2026
0

ಸೋಶಿಯಲ್ ಮೀಡಿಯಾದಲ್ಲಿ ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಭಾರೀ ಟ್ರೆಂಡ್ ಸೃಷ್ಟಿಸಿದೆ. ಕೆಲ ಯುವ ವಿಮರ್ಶಕರನ್ನು ಉದ್ದೇಶಿಸಿ CJI ನೀಡಿದ್ದ ‘ಕಾಕ್ರೋಚ್’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ...

ಮಂತ್ರಿ ಆಗೋಕೆ ₹200 ಕೋಟಿಯ ಬೇಡಿಕೆ – ಛಲವಾದಿ ನಾರಾಯಣಸ್ವಾಮಿ ಸ್ಫೋಟಕ ಆರೋಪ

ಮನೆ ನಿರ್ಮಿಸಲು ಜಮೀನು ಪಡೆದು ಸ್ಟೇಡಿಯಂ ಕಟ್ಟುವುದು ಎಷ್ಟು ಸರಿ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

by Shwetha
May 23, 2026
0

ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ...

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

by Shwetha
May 23, 2026
0

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ, ತನ್ನ ಸಚಿವ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯದ ಮಂತ್ರ...

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

by Shwetha
May 23, 2026
0

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram