ಯುಗಾದಿ ಹಿನ್ನಲೇ ಗಗನಕ್ಕೇರಿದ ಹೂವು-ಹಣ್ಣುಗಳ ಬೆಲೆ
ಬೆಂಗಳೂರು: ನಾಡಿನೆಲ್ಲೆಡೆ ಇಂದು ಚಾಂದ್ರಮಾನ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಹೂವು, ಹಣ್ಣುಗಳನ್ನು ಖರೀದಿಸಲು ಜನರು ಮುಗಿಬಿದ್ದಾರೆ. ಆದರೆ ಈ ಮಧ್ಯೆ ಬೆಲೆ ಏರಿಕೆ ಜನರಿಗೆ ಬಿಗ್ ಶಾಕ್ ನೀಡಿದೆ.
ಕೊರೊನಾ ಹಿನ್ನಲೇ 2 ವರ್ಷ ಅದ್ಧೂರಿಯಾಗಿ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಗ ಕೊರೊನಾ ಕಡಿಮೆಯಾಗಿದ್ದು, ಹಬ್ಬ ಚರಿಸಲು ಮುಂದಾದರೆ ಬೆಲೆ ಏರಿಕೆ ಜನರಿಗೆ ಆಘಾತ ಉಂಟುಮಾಡಿದೆ. ಹೌದು ಇಂದು ಬಳ್ಳೆಂ ಬೆಳ್ಳಿಗ್ಗೆ ಜನರು ಹೂವು, ಹಣ್ಣು ಖರೀದಿಸಲು ಮುಂದಾಗಿದ್ದು, ಹೂವು 30 ರಿಂದ 40 ರೂಪಾಯಿ ಹೆಚ್ಚಳವಾದರೆ, ಹಣ್ಣುಗಳ ಬೆಲೆ 20 ರಿಂದ 30 ರೂಪಾಯಿ ಏರಿಕೆಯಾಗಿದೆ.
ಯುಗಾದಿ ಹಬ್ಬದ ಹಿನ್ನೆಲೆ ಇಂದು ಒಂದು ಕಟ್ಟು ಮಾವಿನ ಎಲೆಗೆ 10 ರೂ. ಇದೆ. ಬೇವಿನ ಸೊಪ್ಪಿಗೆ 20 ರೂ. ನಿಗದಿಯಾಗಿದೆ. ಒಂದು ಮಾರು ತುಳಸಿಗೆ 50 ರೂ. ಇದ್ದರೆ. ಒಂದು ಕೆಜಿ ಬೆಲ್ಲಕ್ಕೆ (ಅಚ್ಚು/ಉಂಡೆ) 50- 60 ರೂಪಾಯಿ ಇದೆ.
ಇಂದಿನ ಹೂವುಗಳ ಬೆಲೆ ಹೀಗಿದೆ
* ಒಂದು ಕೆಜಿ ಮಲ್ಲಿಗೆ ಮೊಗ್ಗು – 600 ರೂ.
* ಒಂದು ಸೇವಂತಿಗೆ – 200 ರೂ.
* ಕನಕಾಂಬರ 400 – ರೂ.
* ಸುಗಂಧರಾಜ 80 – ರೂ.
* ಗುಲಾಬಿ 150 – ರೂ.
* ಚೆಂಡು ಹೂವು- 60 ರೂಪಾಯಿ ಇದೆ.
ಇಂದಿನ ಹಣ್ಣುಗಳ ಬೆಲೆ ಹೀಗಿದೆ
* ಒಂದು ಕೆಜಿ ಸೇಬು – 160 ರೂ.
* ದಾಳಿಂಬೆ 250 – ರೂ
* ಮೂಸಂಬಿ 100 – ರೂ.
* ಆರೆಂಜ್ 120 – ರೂ.
* ಸಪೋಟ 100 – ರೂ.
* ಸೀಬೆಹಣ್ಣು 120 – ರೂ.
* ಏಲಕ್ಕಿ ಬಾಳೆಹಣ್ಣು – 70 ರೂ.
* ದ್ರಾಕ್ಷಿ 100-120 ರೂ. ಇದೆ.