ನವದೆಹಲಿ: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಆಯವ್ಯದಲ್ಲಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ಭಾರ ಹಾಕಲಾಗಿದ್ದು, ಪೆಟ್ರೋಲ್, ಡೀಸೆಲ್, ಮದ್ಯ, ಬೇಳೆ ಕಾಳುಗಳು, ಎಣ್ಣೆಕಾಳುಗಳು ಸೇರಿದಂತೆ ಅಗತ್ಯ ವಸ್ತುಗಳು ದುಬಾರಿಯಾಗಲಿವೆ.
ಕೊರೊನಾದಿಂದ ಸಂಕಷ್ಟದಲ್ಲಿರುವ ಆರ್ಥಿಕತೆಗೆ ಚೇತರಿಕೆ ನೀಡಲು ನಿರ್ಮಲ ಸೀತಾರಾಮನ್, ಜನಸಾಮಾನ್ಯರ ದಿನ ಬಳಕೆಯ ವಸ್ತುಗಳ ಮೇಲೆ ಕೃಷಿ ಸೆಸ್ ಮೂಲಕ ತೆರಿಗೆ ಹೊರೆ ಹಾಕಿದ್ದಾರೆ.
ಅದರಲ್ಲೂ ಪೆಟ್ರೋಲ್ ಬೆಲೆ 100 ರೂ. ಗಡಿಯಲ್ಲಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಸೆಸ್ ಹೇರುವ ಮೂಲಕ ಮತ್ತಷ್ಟು ದುಬಾರಿಯಾಗಿವೆ.
ಜನಸಾಮಾನ್ಯರು ದಿನ ನಿತ್ಯ ಬಳಸುವ ಬೇಳೆಕಾಳು, ಬಟಾಣಿ ಹಾಗೂ ಎಣ್ಣೆ ಕಾಳುಗಳ ಮೇಲೂ ತೆರಿಗೆ ಹೇರಲಾಗಿದ್ದು, ವಿದೇಶದಿಂದ ಬರುವ ಪಾಮ್ ಎಣ್ಣೆ, ಸನ್ ಪ್ಲವರ್ ಎಣ್ಣೆ, ವಿದೇಶಿ ಮೊಬೈಲ್ಗಳ ಮೇಲೆ ಕರ ಭಾರ ಹಾಕಲಾಗಿದೆ.
ಸಮಾಧಾನಕರ ವಿಷಯ ಎಂದರೆ ಚಿನ್ನ-ಬೆಳ್ಳಿ ಮೇಲೆ ತೆರಿಗೆ ಕಡಿತಗೊಳಿಸಿದ್ದು, ಅಲ್ಪ ಪ್ರಮಾಣದಲ್ಲಿ ಬೆಲೆ ಇಳಿಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel