ಚಿತ್ರದುರ್ಗ: ಬರಗಾಲದಿಂದ ಹೊದ್ದು ಮಲಗಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಕೊಳವೆ ಬಾವಿ ಕೊರೆಯುವಾಗ ಬಾರಿ ಪ್ರಮಾಣದ ನೀರು ಬಿದ್ದಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಂಚಿಪುರ ಸಮೀಪದ ವರದರಾಜ ನಗರದ ರೈತನ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಕೇವಲ ನೂರು ಅಡಿಗಳಿಗೆ ಜಲಪಾತದಂತೆ ನೀರು ಚಿಮ್ಮುತ್ತಿದ್ದು, ಇಷ್ಟೊಂದು ಪ್ರಮಾಣದಲ್ಲಿ ನೀರು ಉಕ್ಕುತ್ತಿರುವುದನ್ನು ಕಂಡು ರೈತ ಹರ್ಷಗೊಂಡಿದ್ದಾನೆ.

ಬರದನಾಡಲ್ಲಿ ಈ ಪ್ರಮಾಣದ ನೀರು ಕಂಡು ಅನ್ನದಾತರು ಸಂತಸಗೊಂಡಿದ್ದಾರೆ. ಕೊಳವೆ ಬಾವಿ ಕೊರೆಯುವ ಬೋರ್ ವೆಲ್ ಗಿಂತ 10-15 ಅಡಿ ಮೇಲಕ್ಕೆ ನೀರು ಚಿಮ್ಮಿದ್ದು, ಆಶ್ಚರ್ಯ ಮೂಡಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








