ಲಕ್ಷ್ಮಿ ದೇವಿಯ ಆಶೀರ್ವಾದವುಳ್ಳ ರಾಶಿಗಳಾವುವು..? ನಿಮ್ಮ ರಾಶಿಗಿದೆಯೇ ಲಕ್ಷ್ಮಿ ಕೃಪೆ..?
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದು ತುಂಬಾ ಕಠಿಣ. ಯಾಕೆಂದರೆ ಆಕೆ ಚಂಚಲ ಸ್ವಭಾವದವಳು. ಆಕೆಯ ಮನಸ್ಸಿಗೆ ಅನುಗುಣವಾಗಿ ಆಕೆ ಒಲಿಯುತ್ತಾಳೆ. ಆದರೆ ಈ 4 ರಾಶಿಯವರು ಲಕ್ಷ್ಮಿ ಪುತ್ರರು. ಈ ರಾಶಿಯವರು ಲಕ್ಷ್ಮಿಯ ಆಶೀರ್ವಾದ ಪಡೆಯಲು ಶ್ರಮಿಸಬೇಕೆಂದಿಲ್ಲ. ಲಕ್ಷ್ಮಿ ಆಶೀರ್ವಾದವಿರುವ ರಾಶಿಗಳಾವುವು..? ಇವರು ಖಂಡಿತ ಅದೃಷ್ಟ ಶಾಲಿಗಳು..!
ಯಾವ ವ್ಯಕ್ತಿಯು ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೋ ಆ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆಯನ್ನು ಎದುರಿಸುವುದಿಲ್ಲ ಎನ್ನುವ ನಂಬಿಕೆಯಿದೆ. ಧರ್ಮಗ್ರಂಥಗಳಲ್ಲಿ, ಲಕ್ಷ್ಮಿ ದೇವಿ ಪೂಜೆಯ ವಿಶೇಷ ಪ್ರಾಮುಖ್ಯತೆಯನ್ನು ಶುಕ್ರವಾರ ಮತ್ತು ದೀಪಾವಳಿಯಲ್ಲಿ ತಿಳಿಸಲಾಗಿದೆ. ಯಾರು ಲಕ್ಷ್ಮಿ ದೇವಿಯನ್ನು ತಮ್ಮ ಶುದ್ಧ ಹೃದಯದಿಂದ ಪೂಜಿಸುತ್ತಾರೋ ಸಮಾಜದಲ್ಲಿ ಅವರ ಪ್ರಾಬಲ್ಯತೆ ಶಾಶ್ವತವಾಗಿರುತ್ತದೆ ಮತ್ತು ಅವರು ಶ್ರೀಮಂತರಾಗುತ್ತಾರೆ ಎನ್ನುವ ನಂಬಿಕೆಯಿದೆ.
ಕೆಲವರು ಲಕ್ಷ್ಮಿಯ ಅಪಾರ ಪೂಜೆಯ ಮೂಲಕ ಆಕೆಯ ಕೃಪಾಕಟಾಕ್ಷವನ್ನು ಪಡೆದರೆ, ಇನ್ನು ಕೆಲವು ವ್ಯಕ್ತಿಗಳು ಹುಟ್ಟುತ್ತಲೇ ಲಕ್ಷ್ಮಿ ಪುತ್ರರಾಗಿ ಹುಟ್ಟಿರುತ್ತಾರೆ. ಅವರು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹರಸಾಸಹ ಪಡಬೇಕೆಂದೇನಿಲ್ಲ. ಈ ಅದೃಷ್ಟ ವ್ಯಕ್ತಿಗಳು ಯಾವ ರಾಶಿಯಲ್ಲಿ ಜನಿಸಿರುತ್ತಾರೆ ಗೊತ್ತಾ..? ಯಾವ ರಾಶಿಯವರ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾಕಾಲ ಇರುತ್ತದೆ ಗೊತ್ತಾ..? ತಮ್ಮ ಜೀವನದುದ್ದಕ್ಕೂ ಹಣದ ಸಮಸ್ಯೆಯನ್ನು ಹೊಂದಿರದ, ಸಮಾಜಿಕ ಗೌರವಕ್ಕೆ ಧಕ್ಕೆ ಬಾರದಂತೆ ಜೀವನ ನಡೆಸುವ ಆ ರಾಶಿಯವರು ಯಾರು ಗೊತ್ತಾ..? ಈ 4 ರಾಶಿಯವರು ಲಕ್ಷ್ಮಿ ಪುತ್ರರಾಗಿರುತ್ತಾರೆ.
1. ವೃಷಭ ರಾಶಿ:
ಇದು ರಾಶಿಚಕ್ರದ ಎರಡನೇ ರಾಶಿ ಚಿಹ್ನೆ. ಈ ಚಿಹ್ನೆಯ ಅಧಿಪತಿ ಶುಕ್ರನಾಗಿರುತ್ತಾರೆ. ಈ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಶುಕ್ರನ ಪರಿಣಾಮ ಯಾವಾಗಲೂ ಇರುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಸಂತೋಷ, ಸಂಪತ್ತು, ವೈಭವ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರದ ಅಧಿಪತಿಯಾದ ಶುಕ್ರನ ಶುಭ ಪ್ರಭಾವವು ಈ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ವೃಷಭ ರಾಶಿಯ ಜನರು ಯಾವಾಗಲೂ ಅದೃಷ್ಟದಿಂದ ಆಶೀರ್ವದಿಸುತ್ತಾರೆ. ಈ ರಾಶಿಚಕ್ರದ ಜನರು ಎಂದಿಗೂ ಹಣದ ಕೊರತೆಯನ್ನು ಅನುಭವಿಸುವುದಿಲ್ಲ. ಇವರಿಗೆ ಶುಕ್ರನ ಆಶೀರ್ವಾದದೊಂದೊಗೆ ಲಕ್ಷ್ಮಿಯ ಆಶೀರ್ವಾದವೂ ಇರುತ್ತದೆ. ವೃಷಭದವರು ಶ್ರೀಮಂತರಾಗಲು ಅಷ್ಟೇನೂ ಕಷ್ಟ ಪಡಬೇಕೆಂದೇನಿಲ್ಲ.
2. ಕಟಕ ರಾಶಿ:
ಕಟಕ ರಾಶಿಯಲ್ಲಿ ಜನಿಸಿದವರಿಗೆ ಶ್ರೀಮಂತರಾಗಲು ಮತ್ತು ವಿವಿಧ ಐಷಾರಾಮಿ ಜೀವನವನ್ನು ನಡೆಸಲು ಹೆಚ್ಚು ಅವಕಾಶವಿರುತ್ತದೆ. ಈ ರಾಶಿಚಕ್ರದ ಜನರು ಅದೃಷ್ಟವನ್ನು ಯಾವಾಗಲೂ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಈ ರಾಶಿಚಕ್ರದ ಜನರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವು ಯಾವಾಗಲೂ ಇರುತ್ತದೆ. ಛಲಗಾರರಾದ ಇವರು ಲಕ್ಷ್ಮಿ ಪುತ್ರರಾಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಿದರೂ ಲಕ್ಷ್ಮಿಯ ಆಶೀರ್ವಾದದಿಂದ ಯಶಸ್ಸನ್ನು ಪಡೆಯುತ್ತಾರೆ. ಲಕ್ಷ್ಮಿಯನ್ನು ಪೂಜಿಸಿದರೆ ಇವರಿಗೆ ಸಕಲ ಐಶ್ವರ್ಯಗಳು ದೊರೆಯುವುದು.
3. ಸಿಂಹ ರಾಶಿ:
ಶ್ರಮ ಜೀವಿಗಳಾದ ಸಿಂಹ ರಾಶಿಯವರು ತಮ್ಮ ಐಷಾರಾಮಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಶ್ರಮಿಸುತ್ತಾರೆ. ಆದರೆ ಇವರಿಗೆ ಲಕ್ಷ್ಮಿಯ ಆಶೀರ್ವಾದ ಇರುವುದರಿಂದ ಇವರೆಲ್ಲಾ ಪ್ರಯತ್ನಗಳು ಫಲದಾಯಕವಾಗಿರುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಎಲ್ಲಾ ವಿಷಯಗಳಲ್ಲೂ ಅವರು ಯಶಸ್ಸನ್ನು ಸಾಧಿಸುತ್ತಾರೆ. ಇವರು ಭಕ್ತಿಯಿಂದ ಒಮ್ಮೆ ಲಕ್ಷ್ಮಿಯನ್ನು ಪೂಜಿಸಿದರೆ ಸಾಕು, ಎಲ್ಲಾ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ.
4. ವೃಶ್ಚಿಕ ರಾಶಿ:
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದ ರಾಶಿಯಲ್ಲಿ ವೃಶ್ಚಿಕ ರಾಶಿಯೂ ಒಂದು. ಈ ರಾಶಿಚಕ್ರದವರು ಹೆಚ್ಚು ಹಣವನ್ನು ಸಂಪಾದಿಸುವ ಆಶಯವನ್ನು ಹೊಂದಿರುತ್ತಾರೆ. ಆದರೆ ಅವರು ಸಂಪಾದನೆಗೆ ಅಷ್ಟೊಂದು ಶ್ರಮಿಸಬೇಕಾಗಿಲ್ಲ. ಇವರು ಸರಳವಾಗಿ ಲಕ್ಷ್ಮಿಯನ್ನು ಪೂಜಿಸಿದರೂ ಯಾವುದೇ ಹಣ ಸಮಸ್ಯೆ ಇವರಿಗೆ ಎದುರಾಗುವುದಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ಅವರು ಅದರಿಂದ ಹಣವನ್ನು ಗಳಿಸುತ್ತಾರೆ. ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಲಕ್ಷ್ಮಿಯನ್ನು ಪೂಜಿಸಿ ಅರಂಭಿಸುವುದರಿಂದ ಆ ಕೆಲಸದಲ್ಲಿ ನೀವು ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564
ಈ ಮೇಲಿನ 4 ರಾಶಿಯವರ ಮೇಲೆ ಸದಾಕಾಲ ಲಕ್ಷ್ಮಿಯ ಆಶೀರ್ವಾದ ಇರುವುದರಿಂದ ಅವರು ಹೆಚ್ಚು ಲಕ್ಷ್ಮಿ ದೇವಿಯನ್ನು ಪೂಜಿಸಬೇಕೆಂದಿಲ್ಲ. ಆಗಾಗ ಸರಳವಾಗಿ ಲಕ್ಷ್ಮಿಯನ್ನು ಪೂಜಿಸಿ, ತಮ್ಮ ರಾಶಿಗೆ ಅನುಗುಣವಾಗಿ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಾಕು. ತಾನಾಗಿಯೇ ಅವರು ಹಣವನ್ನು ಪಡೆಯುತ್ತಾರೆ.