ಬ್ರಹ್ಮ ಅಥವಾ ಬ್ರಾಹ್ಮೀ ಮುಹೂರ್ತ ಅಂದರೆ ಏನು? ಪ್ರತಿದಿನ ಬೆಳಿಗ್ಗೆ ನಡೆಯುವಂತಹ ವಿಸ್ಮಯ ಏನು?
ಬ್ರಹ್ಮ ಮುಹೂರ್ತ ಅಂದರೆ ಏನು? ಬ್ರಹ್ಮ ಮುಹೂರ್ತದಲ್ಲಿ ಯಾಕೆ ಏಳಬೇಕು ಬ್ರಹ್ಮ ಮುಹೂರ್ತಯಲ್ಲಿ ಏಕೆ ಪೂಜೆ ಮಾಡಬೇಕು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಬೇಕು ಎನ್ನುತ್ತಾರೆ…
ಈ ಬ್ರಹ್ಮ ಮುಹೂರ್ತಕ್ಕೆ ಯಾಕೆ ಅಷ್ಟು ಪ್ರಾಧ್ಯಾನತೆ
ಈ ಎಲ್ಲಾ ಅನುಮಾನಗಳಿಗೆ ಉತ್ತರ ತಿಳಿಯುವ ಪ್ರಯತ್ನ ಮಾಡೋಣ
ಸೂರ್ಯೋದಯಕ್ಕೆ 48 ನಿಮಿಷವನ್ನು ಉದಯಾಗುವಕ್ಕೆ ಮುಂಚೆ ಇರುವಂತ ಕಾಲವನ್ನು ಬ್ರಾಹ್ಮೀ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತವೆಂದು ಕರೆಯುತ್ತೇವೆ
ಪೂಜೆಗಳಿಗೆ ಧ್ಯಾನಗಳಿಗೆ ಜಪಗಳಿಗೆ ಮಂತ್ರ ಸಾಧನೆಗೆ ಈ ಬ್ರಹ್ಮ ಮುಹೂರ್ತ ವಿಶಿಷ್ಟವಾದಂತ ಸಮಯ ವಿದ್ಯಾರ್ಥಿಗಳು ಈ ಮೂರ್ತದಲ್ಲಿ ಎದ್ದು ವಿದ್ಯಾಭ್ಯಾಸ ಮಾಡುವುದರಿಂದ ತುಂಬಾ ಚೆನ್ನಾಗಿ ಜ್ಞಾಪನ ಇರುತ್ತದೆ ಎಂದು ಹೇಳುತ್ತಾರೆ ನಮ್ಮ ಶರೀರದಲ್ಲಿ ಜೀವ ಗಡಿಯಾರವಿರುತ್ತದೆ ಅದನ್ನ ಅನುಸರಿಸಿ ಜೀವ ಕ್ರಿಯೆಗಳೆಲ್ಲಾ ನಡೆಯುತ್ತದೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹಾಗೆಯೇ ಈ ಸಮಯದಲ್ಲಿ ಕಾರ್ಟಿಸೂನ್ ಹಾರ್ಮೋನ್
ನಮ್ಮ ದೇಹದಲ್ಲಿ ಜಾಸ್ತಿ ಮಟ್ಟದಲ್ಲಿ ಬಿಡುಗಡೆ ಆಗ್ತದೆ ಈ ಹಾರ್ಮೋನ್ ಒತ್ತಡವನ್ನು ಕಡಿಮೆ ಮಾಡಲು ಬಹಳ ಉಪಯೋಗವಾಗುತ್ತದೆ ಹಾಗೆಯೇ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಅದಕ್ಕೆ ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯದು ಅಂತಾರೆ ಹಿಂದಿನ ದಿನಗಳಲ್ಲಿ ಅನುಭವಿಸಿರುವಂತಹ ಒತ್ತಡಗಳ ಪ್ರಭಾವ ನಮ್ಮ ಮೇಲೆ ಇರುವುದಿಲ್ಲ ಹಾಗಾಗಿ ಮೆದುಳು ಉತ್ತೇಜನ ಪೂರಕವಾಗಿರುತ್ತದೆ ಹಾಗೂ ವಾತಾವರಣವೂ ಕೂಡ ಪ್ರಶಾಂತವಾಗಿರುತ್ತದೆ ಈ ಕಾರಣದಿಂದಾಗಿ ಓದಿರುವ ವಿಷಯವು ಮೆದುಳಿನಲ್ಲಿ ನಿಕ್ಷೀಪ್ತವಾಗಿರುತ್ತದೆ
ಆಯುರ್ವೇದದ ಪ್ರಕಾರ ನೋಡಿದರೆ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎಚ್ಚರಾಗುವವರೆಗೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ
ರಾತ್ರಿ ಇಡಿ ಗಿಡಮರ ಗಳಿಂದ ಬಿಡುಗಡೆ ಆಗಿರುವಂತ ಆಕ್ಸಿಜನ್ ಬೆಳಗಿನ ಜಾವ ಕಲುಷಿತ ರಹಿತವಾಗಿರುತ್ತದೆ
ವಾಕಿಂಗ್ ಮಾಡುವವರಿಗೆ ಇದು ಬಹಳ ಉಪಯುಕ್ತವಾಗಿರುತ್ತದೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಮಕ್ಕಳು ಹಿರಿಯರು ಹಾಗೂ ಮನೆಯಲ್ಲಿ ಎಲ್ಲಾ ಕೆಲಸವನ್ನು ನಿರ್ವಹಿಸುವ ಗೃಹಿಣೀಯರಿಗೆ ಮಾನಸಿಕ ಒತ್ತಡ ತುಂಬಿದ ಕಮ್ಮಿಯಾಗುತ್ತದೆ ಪ್ರತಿದಿನ ಸೂರ್ಯೋದಯ ಉದಯಿಸುವುದನ್ನು ಅಭ್ಯಾಸ ನೋಡುವ ಜನರಿಗೆ ಮೆದುಳು ಆರೋಗ್ಯಕರವಾಗಿರುತ್ತದೆ ಅಂತ ಆಯುರ್ವೇದದಲ್ಲಿ ಶಾಸ್ತ್ರಗಳು ಹೇಳುತ್ತವೆ ಮತ್ತು ಉಲ್ಲೇಖವಾಗಿದೆ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸೂರ್ಯನ ಹೊಂಗಿರಣಗಳು ನಮ್ಮ ಮೇಲೆ ಪ್ರಸಾರವಾಗುತ್ತದೆ ಇದರಿಂದ ಸೂರ್ಯನ ಕಿರಣಗಳಲ್ಲಿರುವಂತಹ ವಿಟಮಿನ್ ಡಿ ನಮ್ಮ ಮೂಳೆಗಳಲ್ಲಿರುವಂತಹ ಶಕ್ತಿಯ ಸದೃಢತೆಗೆ ಉಪಯೋಗವಾಗುತ್ತದೆ
ಈಗ ಬ್ರಹ್ಮ ಮುಹೂರ್ತ ಅಂದರೆ ಏನು ಎಂದು ತಿಳಿದುಕೊಳ್ಳೋಣ
ಹಿಂದೂ ಧರ್ಮದಲ್ಲಿ, ಬ್ರಾಹ್ಮಿ ಮುಹೂರ್ತವುವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ ೧ಗಂಟೆ ೩೬ ನಿಮಿಷಗಳು ಅಂದರೆ ೯೬ ನಿಮಿಷಗಳು = ೨ ಮುಹೂರ್ತ ಅಥವಾ ೪ ಘಟಿಕಾ. ಒಂದು ಮುಹೂರ್ತದ ಅವಧಿ ೪೮ ನಿಮಿಷಗಳು, ಮತ್ತು ಬ್ರಾಹ್ಮಿ ಮುಹೂರ್ತವನ್ನು ಯೋಗದ ಎಲ್ಲ ಅಭ್ಯಾಸಗಳಲ್ಲಿ ಸೂಚಿಸಲಾಗುತ್ತದೆ, ಮತ್ತು ಇದು ಧ್ಯಾನ, ಪೂಜೆ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಗೆ ಸಾಂಪ್ರದಾಯಿಕವಾಗಿ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಉಷಃಕಾಲದ ಮುಂಚಿನ ಒಂದು ಗಂಟೆಯ ಅವಧಿಯಲ್ಲಿ, ಸಂತರು ಮತ್ತು ಯೋಗಿಗಳು ಉತ್ತರಕ್ಕೆ ಮುಖಮಾಡಿ, ತಮ್ಮನ್ನು ತಾವು ಯೋಗಿಕ ಭಂಗಿಯಲ್ಲಿ ಸ್ಥಾಪಿಸಿಕೊಂಡು ಓಂಕಾರವನ್ನು ಪಠಿಸುತ್ತಾರೆ ಮತ್ತು ಬ್ರಹ್ಮ (ಅಥವಾ ಸೂರ್ಯ), ಅಥವಾ ವಿಷ್ಣುವಿನ ಭಕ್ತರು ಅಥವಾ ವಿಷ್ಣುವನ್ನೇ ಧ್ಯಾನಿಸುತ್ತಾರೆ.
ಸೂರ್ಯ ಕಿರಣ, ದಿಕ್ಕು ಮತ್ತು ಭೂಮಿಯ ಚಲನೆಯನ್ನು ಆಧರಿಸಿ ವಾಸ್ತುಶಾಸ್ತ್ರ ರಚಿಸಲಾಗಿದೆ. ಸೂರ್ಯನ ಕಿರಣಗಳು ಏಳು ವಿಭಿನ್ನ ವಿಧಗಳನ್ನು ಒಳಗೊಂಡಿದೆ.
ಪ್ರತಿಯೊಂದು ಕಿರಣವೂ ದಿಕ್ಕನ್ನು ಅವಲಂಬಿಸಿ ನೆಗೆಟಿವ್ ಮತ್ತು ಪೊಸೆಟಿವ್ ಎನರ್ಜಿಯನ್ನು ತುಂಬುತ್ತವೆ. ಈ ಏಳು ಪ್ರಕಾರದ ಕಿರಣಗಳನ್ನು ಸಪ್ತದೇವತಾ ಎಂದೂ ಕೂಡ ಕರೆಯುತ್ತಾರೆ. ಆದ್ದರಿಂದ ಆಯಾ ಕಾಲದಲ್ಲಿ ಆಯಾ ಕೆಲಸಗಳನ್ನು ಪೂರೈಸಬೇಕು.
ನಸುಕಿನ 3.45 ರಿಂದ 4.45ರೊಳಗಿನ ಅವಧಿಗೆ ಬ್ರಾಹ್ಮಿ ಮುಹೂರ್ತ ಎನ್ನುತ್ತಾರೆ.ನಿಖರವಾಗಿ ಬ್ರಾಹ್ಮಿ ಮುಹೂರ್ತವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ 1ಗಂಟೆ 36 ನಿಮಿಷಗಳು ಅಂದರೆ 96 ನಿಮಿಷಗಳು = ೨ ಮುಹೂರ್ತ ಅಥವಾ ೪ ಘಟಿಕಾ.
(ಒಂದು ಮುಹೂರ್ತದ ಅವಧಿ 48 ನಿಮಿಷಗಳು)
4.30ರಿಂದ 6 ಗಂಟೆಯೊಳಗಿನ ಅವಧಿ ಉಷಾಕಾಲ. ದೇವತಾ ಪ್ರಾರ್ಥನೆಗೆ ಅತ್ಯಂತ ಸೂಕ್ತ ಸಮಯ.
ಈ ಬ್ರಾಹ್ಮಿಕಾಲ ಮತ್ತು ಉಷಾಕಾಲವು
ಚೈತನ್ಯದಿಂದ ತುಂಬಿರುತ್ತದೆ.
ನಸುಕಿನ 3.45 ರಿಂದ 6:30 ರವರೆಗಿನ ಸಮಯಕ್ಕೆ ಪ್ರಾಚೀನ ಋಷಿಮುನಿಗಳು ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ಧ್ಯಾನ, ಯೋಗ, ಜಪ, ಪೂಜೆ ಮುಂತಾದ
ಸತ್ಕರ್ಮಗಳನ್ನಾಚರಿಸಿದರೆ ಹೆಚ್ಚು ಫಲಪ್ರದ.
ಬೆಳಗಿನ ಹೊತ್ತು ನಮ್ಮ ಮನಸ್ಸು ಫ್ರೆಶ್ ಆಗಿರುತ್ತದೆ. ಆಯಾಸವೆಲ್ಲ ನಿದ್ದೆಯಲ್ಲಿ ಕಳೆದು ದೇಹ ನವ ಚೈತನ್ಯದಿಂದ ಕೂಡಿರುತ್ತದೆ. ಇನ್ನು ಬೆಳಗಿನ ಜಾವದಲ್ಲಿ ಮೆದುಳಿನ ನೆನಪಿನ ಕೋಶಗಳು ಚುರುಕಾಗಿ ಕೆಲಸ ಮಾಡುತ್ತವೆ ಎಂದು ವೈದ್ಯರು ಕೂಡ ಹೇಳುತ್ತಾರೆ.
ಪ್ರತಿನಿತ್ಯ ಬ್ರಹ್ಮಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರ ನಿಷಿದ್ಧ.
ವೈಜ್ಞಾನಿಕ ದೃಷ್ಟಿಯಿಂದಲೂ ಬ್ರಹ್ಮ ಮುಹೂರ್ತಕ್ಕೆ ವಿಶೇಷವಾದ ಮಹತ್ವವಿದೆ.
ಈ ಸಮಯದಲ್ಲಿ ವಾಯುಮಂಡಲ ಮಾಲಿನ್ಯದಿಂದ ವಿಮುಕ್ತವಾಗಿರುತ್ತದೆ. ಆಮ್ಲಜನಕದ ಪ್ರಮಾಣ ಶೇಕಡಾ
೪೧ರಷ್ಟಿರುತ್ತದೆ. ಇದರಿಂದ ನಮ್ಮ ಶ್ವಾಸಕೋಶಗಳು ಶುದ್ಧಿಯಾಗುತ್ತದೆ. ಶುದ್ಧವಾಯುವಿನಿಂದ ಮನಸ್ಸು ಹಾಗೂ ಬುದ್ಧಿ ಆರೋಗ್ಯವಾಗಿರುತ್ತವೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
*ಯಾರು ಬ್ರಹ್ಮ ಮುಹೂರ್ತದಲ್ಲೆದ್ದು ನಡೆಯುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ
ಸಂಚಾರವಾಗುತ್ತದೆಂದು ಆಯುರ್ವೇದ ತಿಳಿಸುತ್ತದೆ.*
ಈ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿಯಿರುತ್ತದೆ. ರಾತ್ರಿಯ ವಿಶ್ರಾಂತಿಯ ನಂತರ ಶರೀರ ಹಾಗೂ ಬುದ್ಧಿ ಉಲ್ಲಸಿತವಾಗಿರುತ್ತವೆ.
ಬ್ರಾಹ್ಮೀ ಮುಹೂರ್ತದಲ್ಲಿ ಅಧ್ಯಯನ ಮಾಡಿದರೆ ಸುಲಭವಾಗಿ ಮನವರಿಕೆಯಾಗುತ್ತದೆ.
ಅಧ್ಯಯನ ಮಾಡಲು ಬ್ರಹ್ಮಮುಹೂರ್ತವೇ ಪ್ರಶಸ್ತ. ಪ್ರಮುಖ ಮಂದಿರಗಳ ಮುಖ್ಯದ್ವಾರ ತೆರೆಯುವುದು ಬ್ರಹ್ಮ ಮುಹೂರ್ತದ ಸಮಯದಲ್ಲೇ. ಕೆಲವು
ಪೂಜೆಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಡೆಸಲಾಗುತ್ತದೆ.
ಬ್ರಹ್ಮ ಮುಹೂರ್ತದಲ್ಲಿ ಭಗವಂತನ ಪೂಜೆ, ಧ್ಯಾನ ಹಾಗೂ ಪವಿತ್ರಕಾರ್ಯಗಳನ್ನು ಮಾಡುವುದರಿಂದ ಆತ್ಮ ಶಕ್ತಿ ಪ್ರಾಪ್ತಿಯಾಗುತ್ತದೆ.
ಮನುಷ್ಯನ ಜ್ಞಾನ, ವಿವೇಕ, ಶಾಂತಿ, ಸುಖಮುಂತಾದ ಸದ್ಗುಣಗಳ ವೃದ್ಧಿಯಾಗುತ್ತದೆ.
ಆಲಸ್ಯವನ್ನು ಬಿಟ್ಟು ಬ್ರಹ್ಮ ಮುಹೂರ್ತದಲ್ಲೆದ್ದು ಪುಣ್ಯ ಕರ್ಮಗಳನ್ನು ಮಾಡಿದರೆ ಶ್ರೇಯಸ್ಸು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಲೋಕಾಃ ಸಮಸ್ತಾಃ ಸುಖಿನೋ ಭವಂತು..
What is Brahma or Brahmi Muhurta? What is the wonder that happens every morning?