ಯಾರಿದು ಕೊಕೇನ್ ಜೊತೆ ಸಿಕ್ಕಿಬಿದ್ದ ಬಿಜೆಪಿ ಯುವನಾಯಕಿ ಪಮೇಲಾ ಗೋಸ್ವಾಮಿ ?
ಕೊಲ್ಕತ್ತಾ, ಫೆಬ್ರವರಿ20: 10 ಲಕ್ಷ ರೂ.ಗಳ ಮಾರುಕಟ್ಟೆ ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ ಆರೋಪದಡಿ ಬಿಜೆಪಿ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಯ ಮಾಜಿ ಏರ್ ಹೊಸ್ಟೆಸ್, ಗೋಸ್ವಾಮಿ ಮಾಡೆಲಿಂಗ್ನಲ್ಲಿದ್ದರು. ಅವರು ಕೋಲ್ಕತ್ತಾದ ಖಾಸಗಿ ಸಂಸ್ಥೆಯಲ್ಲಿ ವ್ಯವಹಾರ ಆಡಳಿತವನ್ನು ಅಧ್ಯಯನ ಮಾಡಿದ್ದಾರೆ.
ಪಮೇಲಾ ಗೋಸ್ವಾಮಿ 2019 ರ ಜುಲೈನಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. 2020 ರಲ್ಲಿ ಪಕ್ಷದ ಯುವ ವಿಭಾಗವಾದ ಯುವ ಮೋರ್ಚಾದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.
ರಾಜ್ಯ ರಾಜಕಾರಣದಲ್ಲಿ ಪಮೇಲಾ ಅಷ್ಟೇನೂ ಪರಿಚಿತ ಮುಖವಲ್ಲದಿದ್ದ ಪಮೇಲಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಬಂಗಾಳ ರಾಜಕಾರಣದಲ್ಲಿ ಭರ್ಜರಿ ಚರ್ಚೆಗೆ ಆಹಾರವಾಗಿತ್ತು.
ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಆಕೆ ಹಲವಾರು ಆಂದೋಲನಗಳಲ್ಲಿ ಭಾಗವಹಿಸಿದ್ದರು.
2020 ರ ಕೊನೆಯಲ್ಲಿ ಕೆಲವು ತಿಂಗಳುಗಳ ಕಾಲ, ಯುವ ಮೋರ್ಚಾದ ಹೂಗ್ಲಿ ಜಿಲ್ಲಾ ಘಟಕಕ್ಕೆ ವೀಕ್ಷಕರಾಗಿ ಆಕೆಯನ್ನು ನೇಮಕಮಾಡಲಾಗಿತ್ತು. ಆದರೆ, ಇತ್ತೀಚೆಗೆ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ, ಆಕೆ ತನ್ನನ್ನು ತಾನು ಸಾಮಾಜಿಕ ಕಾರ್ಯಕರ್ತೆ ಮತ್ತು ಉದ್ಯಮಿ ಎಂದು ಬಣ್ಣಿಸಿದ್ದಾರೆ
ಹೆಸರು ಹೇಳಲು ಇಷ್ಟಪಡದ ಬಿಜೆಪಿಯ ಯುವ ಮೋರ್ಚಾದ ನಾಯಕರೊಬ್ಬರು ಪಮೇಲಾ ಜೊತೆ ಬಂಧಿತರಾಗಿರುವ ಪ್ರಬೀರ್ ಕುಮಾರ್ ದೇ ಅವರೊಂದಿಗೆ ಒಳಾಂಗಣ ವಿನ್ಯಾಸದ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ಪ್ರಬೀರ್ ಕುಮಾರ್ ದೇ ಒಳಾಂಗಣ ವಿನ್ಯಾಸ ಬ್ರಾಂಡ್ ರೊಕೊಕೊವನ್ನು ಹೊಂದಿರುವ ಏಂಜಲೀನಾ ಮರ್ಕೆಂಟೈಲ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದಾರೆ. ಗೋಸ್ವಾಮಿ ಬ್ರಾಂಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಮಾಲೀಕರಾಗಿ ಸೇವೆ ಸಲ್ಲಿಸಿದ್ದಾರೆಂದು ಹೇಳಿಕೊಂಡಿದ್ದಾರೆ.
ರೊಕೊಕೊ ಕೋಲ್ಕತ್ತಾದ ಶಾಪಿಂಗ್ ಮಾಲ್ನಲ್ಲಿ ತನ್ನ ಔಟ್ಲೆಟ್ ಹೊಂದಿದೆ.
2020 ರಲ್ಲಿ, ಗೋಸ್ವಾಮಿಯ ತಂದೆ ದೇ ತನ್ನ ಮಗಳನ್ನು ಮಾದಕ ದ್ರವ್ಯಗಳಿಗೆ ಪರಿಚಯಿಸಿದ್ದಾನೆಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಪಮೇಲಾ ಅದಕ್ಕೆ ವ್ಯಸನಿಯಾಗಿದ್ದಾಳೆ ಮತ್ತು ದೇ ಮೇಲೆ ಕಣ್ಣಿಡುವಂತೆ ತಂದೆ ಪೊಲೀಸರಿಗೆ ಮನವಿ ಮಾಡಿದ್ದರು.
ಮದುವೆಯಾಗಿ ಎಂಟು ವರ್ಷದ ಮಗಳನ್ನು ಹೊಂದಿದ್ದರೂ ಗೋಸ್ವಾಮಿಯೊಂದಿಗೆ ಅಕ್ರಮ ಸಂಬಂಧದಲ್ಲಿ ತೊಡಗಿದ್ದಾನೆ ಎಂದು ಗೋಸ್ವಾಮಿಯ ತಂದೆಯ ದೂರಿನಲ್ಲಿ ತಿಳಿಸಲಾಗಿದೆ.
ಗೋಸ್ವಾಮಿ ದಕ್ಷಿಣ ಕೋಲ್ಕತ್ತಾದ ತನ್ನ ತಂದೆಯ ಮನೆಯಿಂದ ದೇ ಅವರ ಪ್ರಚೋದನೆಯಿಂದ ಹೊರಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೋಸ್ವಾಮಿ ಅವರ ಬಾಡಿಗಾರ್ಡ್ ಜೊತೆಗೆ ಗೋಸ್ವಾಮಿ ಮತ್ತು ದೇ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಅವರ ಬಳಿ ದೊರೆತ ಕೊಕೇನ್ ಅನ್ನು ರೇವ್ ಪಾರ್ಟಿಗಳಲ್ಲಿ ಅಥವಾ ಪೆಡ್ಲಿಂಗ್ ಮಾಡಲು ಬಳಸಲಾಗಿದೆಯೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಅವರು ದೊಡ್ಡ ಕಳ್ಳಸಾಗಣೆ ದಂಧೆಯ ಭಾಗವಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಷ್ಟಪಡದ ಕೋಲ್ಕತಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಿಂಬೆಯೊಂದಿಗೆ ಬೆಲ್ಲದ ನೀರು ಸೇವನೆಯ ಆರೋಗ್ಯ ಪ್ರಯೋಜನಗಳು https://t.co/qePSOlsibX
— Saaksha TV (@SaakshaTv) February 16, 2021
ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯಲು ಸರ್ಕಾರ ಚಿಂತನೆ https://t.co/8KpAmijVHr
— Saaksha TV (@SaakshaTv) February 17, 2021