ಬೆಂಗಳೂರು: ಬಾಳಿನ ಹಾಡು ಮುಗಿಸಿದ ಗಾನಗಂಧರ್ವ ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ನವರಸ ನಾಯಕ ಜಗ್ಗೇಶ್ ಸಲ್ಲಿಸಿದ ನುಡಿನಮನದ ಭಾವನಾತ್ಮಕ ಪದಗಳಿವು.
ಇನ್ನು ಎಷ್ಟು ಸಾಧಕರು
ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೊನಾ
ಹರಡಿ ಮಳ್ಳಿಯಂತ ದರಿದ್ರದೇಶ
ಚೀನಾವನ್ನು ವಿಶ್ವದ ಕಾಳಜಿ ಇರುವ ಇತರ
ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು
ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲ! ಓಂ ಶಾಂತಿ!
ಇಂದು ನಮ್ಮನ್ನಗಲಿದ ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಜಗ್ಗೇಶ್ ಅವರು ಕಂಬನಿ ಮಿಡಿಯುವುದರ ಜೊತೆ ಜೊತೆಗೆ ಕೊರೊನಾದಿಂದಾಗಿ ಎಸ್ಪಿಬಿ ಸಾವು ಸಂಭವಿಸಿದೆ. ಇದಕ್ಕೆ ಕಾರಣವಾದ ಚೀನಾವನ್ನು ಮಟ್ಟಹಾಕಬೇಕೆಂಬ ಆಕ್ರೋಶ ಜಗ್ಗೇಶ್ ಅವರ ಸಂತಾಪದಲ್ಲಿ ಕಟ್ಟೆಯೊಡೆದಿದೆ.
#SPBalasubramaniam ಗೌರವಾನ್ವಿತ ವಿಧಾಯ..!
ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆಪಡೆದ ಅದೃಷ್ಟವಂತ ನಟರ
ಸಾಲಲ್ಲಿ ನಾನು ಒಬ್ಬ…!!
ನೀವು ಕಾಯಕದಲ್ಲಿ ಗಾಯಕ!ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ
ಭಾವನಾಜೀವಿ ಇದ್ದ!ಮದ್ರಾಸ್ ನಲ್ಲಿ ನಿಮ್ಮಜೊತೆ
ಕಳೆದ ಆ ದಿನಗಳು ಮತ್ತೆ ಬರದು!
ಮರೆಯಲಾಗದು..!! ಹೋದಿರಿ ಮತ್ತೆ ಬೇಗ ಬನ್ನಿ..!!