ADVERTISEMENT
Thursday, May 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಕೊನೆಗೂ ಅವರನ್ನು ನೇರವಾಗಿ ನೋಡಲಾಗಲೇ ಇಲ್ಲ; ನಾ.ಸು ಇಲ್ಲದ ಭರತನಹಳ್ಳಿ ಇದೇನು ವಿಧಿಯಾಟ?

Shwetha by Shwetha
December 26, 2020
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Marjala manthana Bharathanahalli master
Share on FacebookShare on TwitterShare on WhatsappShare on Telegram

ಕೊನೆಗೂ ಅವರನ್ನು ನೇರವಾಗಿ ನೋಡಲಾಗಲೇ ಇಲ್ಲ; ನಾ.ಸು ಇಲ್ಲದ ಭರತನಹಳ್ಳಿ ಇದೇನು ವಿಧಿಯಾಟ? Marjala manthana Bharathanahalli

ಮಾಧ್ಯಮರಂಗ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆರು ದಶಕಗಳಿಂದ ಕ್ರಿಯಾಶೀಲರಾಗಿದ್ದ ಹಿರಿಯ ಸಾಹಿತಿ ಅಂಕಣಕಾರ ಹಾಗೂ ಪತ್ರಕರ್ತ ನಾರಾಯಣ ಸುಬ್ರಾಯ ಹೆಗಡೆ ಅಥವಾ ನಾ.ಸು ಭರತನಹಳ್ಳಿ. ಪ್ರಖರ ಆಧ್ಯಾತ್ಮ ಚಿಂತಕರೂ, ಸ್ವರ್ಣವಲ್ಲಿ ಶ್ರೀಗಳ ಆಪ್ತರೂ ಆಗಿದ್ದ 84 ವರ್ಷದ ಭರತನಹಳ್ಳಿ ಮೇಸ್ಟ್ರು ಶುಕ್ರವಾರದ ವೈಕುಂಠ ಏಕಾದಶಿಯ ದಿನ ವೈಕುಂಠವಾಸಿಗಳಾದರು. ಇದು ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಲಯಕ್ಕೆ ಆದ ಬಹು ದೊಡ್ಡ ನಷ್ಟ. ಇತ್ತೀಚೆಗಷ್ಟೆ ಪುತ್ರ ಮತ್ತು ಪತ್ನಿಯನ್ನು ಕಳೆದುಕೊಂಡಿದ್ದ ನಾ.ಸು ಭರತನಹಳ್ಳಿ ಇಹಲೋಕದ ವ್ಯಾಪಾರ ಮುಗಿಸಿಬಿಟ್ಟರು. Marjala manthana Bharathanahalli
Marjala manthana Bharathanahalli master

Related posts

ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!

ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!

May 13, 2026
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

May 13, 2026

ಯಲ್ಲಾಪುರ ತಾಲೂಕಿನ ಭರತನಹಳ್ಳಿಯ ನಿವಾಸಿ ನಾ.ಸು.ಭ ಕೇವಲ ಸಾಹಿತಿ, ಪತ್ರಕರ್ತ ಮಾತ್ರವಲ್ಲದೇ ಪ್ರಕಾಶಕರಾಗಿಯೂ 60 ವರ್ಷಗಳಿಗಿಂತ ಹೆಚ್ಚು ವರ್ಷ ಸಾಹಿತ್ಯದ ಸೇವೆ ಮಾಡಿದವರು. ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದ ಸ್ವರ್ಣವಲ್ಲೀ ಪ್ರಭಾ ಸಂಪಾದಕರಾಗಿ ಸುದೀರ್ಘ 21 ವರ್ಷ ಪತ್ರಿಕೆ ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ಕೈಯಾಡಿಸಿದವರು. ಕಥೆ, ಕಾದಂಬರಿ, ಕವನ, ಪ್ರವಾಸಿ ಕಥನ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರಹ ಸೇರಿದಂತೆ 26 ಕ್ಕೂ ಹೆಚ್ಚು ಪುಸ್ತಕಗಳನ್ನು ನಾ.ಸು.ಭ ಬರೆದಿದ್ದಾರೆ. ವಿಚಾರ-ವಿಮರ್ಶೆ ಲೇಖನಗಳಂತಹ ಗಂಭೀರ ಸಾಹಿತ್ಯದ 16 ಪುಸ್ತಕಗಳೂ ನಾ.ಸು ಅವರ ಲೇಖನಿಯಿಂದ ರಚಿತವಾಗಲ್ಪಟ್ಟಿದೆ.

ಪ್ರತಿಷ್ಟಿತ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ವರದಿಗಾರರಾಗಿ, ಹಲವು ಪತ್ರಿಕೆಗಳಿಗೆ ಅಂಕಣಕಾರರಾಗಿ, ಆಕಾಶವಾಣಿಯ ಭಾಷಣಕಾರರಾಗಿ, ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕೃಷಿ ಮಾಡಿದವರು ನಾ.ಸು ಮಾಸ್ತರ್. ಸನ್ಮತಿ ಎಂಬುವುದು ಅವರ ಜೀವನದ ಮಹತ್ವದ ಸಾಧನೆಯನ್ನು ಪ್ರಸ್ತುತ ಪಡಿಸುವ ಅಭಿನಂದನಾ ಗ್ರಂಥ. ಪ್ರೊಫೆಸರ್‌ ಜಿ.ಟಿ ಭಟ್ಟ ಹಾಸಣಗಿಯವರು ಅವ್ಯಾಹ ಪ್ರೀತಿ ಎನ್ನುವ ನಾ.ಸು ಭರತಹಳ್ಳಿವರ ಕುರಿತಾದ ಆಪ್ತ ಬರಹಗಳ ಪುಸ್ತಕವನ್ನು ಬರೆದಿದ್ದಾರೆ. ನಾ.ಸು.ಭ ಅವರು ಸಿದ್ಧಾಪುರದಲ್ಲಿ ನಡೆದಿದ್ದ 14ನೇ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು.
Marjala manthana Bharathanahalli

ಮೂರು ವರ್ಷಗಳ ಒಂದು ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನದೊಂದು ವಾರಾಂತ್ಯದ ವಿಶೇಷ ಎಪಿಸೋಡ್‌ ಪ್ರಸಾರವಾಗುತ್ತಿತ್ತು. ನಾನು ಕಾರ್ಯನಿರ್ವಹಿಸುತ್ತಿದ್ದ ಸಂಪಾದಕರ ಆಸಕ್ತಿಯ ಸಂಚಿಕೆಯದಾಗಿತ್ತು. ಅದೊಂದು ವಾರದ ಎಪಿಸೋಡ್‌ ಗೆ ಸಂಪಾದಕರು, ಮಲೆನಾಡಿಗೆ ಶನಿಯಂತೆ ಒಕ್ಕರಿಸಿದ ಅಕೇಶಿಯಾ ಬಗ್ಗೆ ಒಂದು ಸ್ಟೋರಿ ಮಾಡಲು ಹೇಳಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ತೀರ್ಥಹಳ್ಳಿ ಮಧ್ಯಾಹ್ನ ಸಾಗರ ಎಲ್ಲಾ ಸುತ್ತಿದ್ದಾಯ್ತು. ಕೊನೆಗೆ ಒಂದು ಬೈಟ್ ಮಾತ್ರ ಅತ್ಯಗತ್ಯವಾಗಿ ಬೇಕಿತ್ತು; ಅದು ನಮ್ಮ ಶಿವಾನಂದ ಕಳವೆಯವರದ್ದು. ಅವರಿದ್ದಿದ್ದು ಶಿರಸಿಯ ಕಾನ್ಮನೆಯಲ್ಲಿ. ಅದಾಗಲೇ ಸಂಜೆ 6 ಗಂಟೆ. ಕಾನ್ಮನೆ ತಲುಪುವಾಗ 8 ಆಗಿತ್ತೇನೋ.

ಅಲ್ಲಿ ಅವತ್ತು ಮಕ್ಕಳ ಪರಿಸರ ಕಾರ್ಯಾಗಾರ ನಡೆಯುತ್ತಿತ್ತು. ಸಾಗರದ ಪ್ರಜ್ಞಾವಂತ ಗೆಳೆಯ ಪೂರ್ಣಪ್ರಜ್ಞ ಬೇಳೂರು ಅಲ್ಲೇ ಇದ್ದರು. ಅಕೇಶಿಯಾದಿಂದ ಪರಿಸರ ಹಾನಿಯ ಬಗ್ಗೆ ಪುಸ್ತಕ ಬರೆದ ಶಿವಾನಂದ ಕಳವೆಯವರು ಬೈಟ್ ಕೊಟ್ಟರು. ಅದ್ಬುತವಾದ ರಾತ್ರಿಯೂಟವೂ ಆಯಿತು. ನಾವು ಅದೇ ರಾತ್ರಿ ಬೆಂಗಳೂರಿಗೆ ಹಿಂದಿರುಗುವ ಯೋಚನೆ ಮಾಡುತ್ತಿದ್ದರಿಂದ ಕಾನ್ಮನೆಯಿಂದ ಬೀಳ್ಕೊಟ್ಟೆವು. ಶಿರಸಿ ಬರುವ ದಾರಿಯಲ್ಲಿ ಪದೇ ಪದೇ ನಾ.ಸು ಮಾಸ್ತರ್ ನೆನಪಾಗುತ್ತಿದ್ದರು. ಕಾಲ್ ಮಾಡೋಣ ಅಂದುಕೊಂಡೆ ಆದರೆ ಅದಾಗಲೇ ರಾತ್ರಿ 10 ಆಗಿತ್ತು. ಪಾಪ ವೃದ್ಧ ದಂಪತಿಗಳು ಮಲಗಿರುತ್ತಾರೆ ಎಂದು ಸುಮ್ಮನಾದೆ.

ಅದಕ್ಕೂ ಮೊದಲು ಎರಡು ಮೂರು ಬಾರಿ ಅವರೊಂದಿಗೆ ಫೋನ್ ನಲ್ಲೇ ಮಾತಾಡಿದ್ದೆ ಅಷ್ಟೇ ನೇರವಾಗಿ ಭೇಟಿಯಾಗಿರಲಿಲ್ಲ. ನಾನು ಅಪರಿಚಿತನಾದರೂ ಸಾಹಿತ್ಯದ ಆಸಕ್ತ ಎಂದು ತಿಳಿಯುತ್ತಿದ್ದಂತೆ ಬಾಯಿ ತುಂಬಾ ಹರಟಿದ್ದರು ನಾ.ಸು ಮಾಸ್ತರ್. ಅವರು ಆಗಲೂ ವಿಜಯವಾಣಿಗೆ ಕಾಲಂ ಬರೆಯುತ್ತಿದ್ದರು. ಅವರ ಪರಂಪರೆ ಅಂಕಣವನ್ನು ನಾನು ಆಗಾಗ ಓದುವುದಿತ್ತು. ನಾನು ಸಿರಸಿಗೆ ಹೋಗುತ್ತಿದ್ದೇನೆ ಎಂದಾಗ ಅಲ್ಲೇ ಯಲ್ಲಾಪುರ ಭರತನಹಳ್ಳಿಗೆ ಹೋಗಿ ನಾ.ಸು ಅವರನ್ನು ಭೇಟಿಯಾಗು, ಅಬ್ಬೆ ಅದ್ಭುತವಾಗಿ ಮೆಲಾಗ್ರ ಮಾಡ್ತಾರೆ ಎಂದಿದ್ದ ಶಿರಸಿಯ ಒಬ್ಬ ಸಾಹಿತ್ಯ ಪ್ರೇಮಿ ಗೆಳೆಯ. ಆಗಿನ್ನೂ ಅಬ್ಬೇ ಬದುಕಿದ್ದರು; ನಾ.ಸು ಮಾಸ್ತರ್‌ ಲವಲವಿಕೆಯಿಂದ ಸಾಂಸ್ಕೃತಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಭರತನಹಳ್ಳಿ ನಾ.ಸು ಮನೆ ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದು ಎನ್ನುತ್ತಿದ್ದ ಆ ಗೆಳೆಯ. ಅವತ್ತು ರಾತ್ರಿ ಸಿರಸಿಯಿಂದ ಬೆಂಗಳೂರಿಗೆ ವಾಪಾಸಾಗಲು ಕ್ಯಾಮರಾಮನ್‌ ಮುರುಳಿಯಾಗಲೀ ನಮ್ಮ ಡ್ರೈವರ್‌ ಮಾರುತಿಯಾಗಲೀ ಒಪ್ಪಲೇ ಇಲ್ಲ. ವಿಪರೀತ ಸುಸ್ತಾಗಿದ್ದರು ಅವರು. ಮತ್ತೆ ಬೆಂಗಳೂರಿನತ್ತ ವಾಹನ ಚಲಾಯಿಸುವ ಚೈತನ್ಯ ಅವರಲ್ಲಿರಲಿಲ್ಲ. ಹೀಗಾಗಿ ಸಿರಸಿಯಲ್ಲೇ ಲಾಡ್ಜ್‌ ನಲ್ಲಿ ಮಲಗಿದೆವು.
Marjala manthana Bharathanahalli

ವಾಪಾಸು ಬೆಂಗಳೂರಿಗೆ ಬಂದ ನಂತರ ನಾ.ಸು ಮಾಸ್ತರ್‌ ಬಳಿ ಹೀಗೆ ಸಿರಸಿಗೆ ಬಂದಿದ್ದೆ ಎಂದ ಕೂಡಲೇ ಹತ್ತಿರದಲ್ಲೇ ಇದ್ದ ಯಲ್ಲಾಪುರಕ್ಕೆ ಬಂದು ಭರತನಹಳ್ಳಿ ಮನೆಯಲ್ಲಿ ಉಳಿಯಬಹುದಿತ್ತು ಒಂದು ಕರೆ ಮಾಡಿ ಬರಬಹುದಿತ್ತಲ್ಲ ಎಂದಿದ್ದರು. ಅವರನ್ನು ಭೇಟಿ ಮಾಡಿ ಮಾತಾಡಬೇಕೆನ್ನುವ ಬಯಕೆ ಅವತ್ತು ತೀರಾ ಕಾಡಿತ್ತು ಆದರೆ ಈಡೇರಲಿಲ್ಲ. ಅದಾದ ನಂತರ ರವಿ ಬೆಳೆಗೆರೆಯವರು ತಮ್ಮ ಜೋಯಿಡಾದ ಎಸ್ಟೇಟ್‌ ಗೆ ಕರೆದುಕೊಂಡು ಹೋಗುತ್ತೀನೆಂದು ಪ್ರಾಮಿಸ್‌ ಮಾಡಿದ್ದರು. ಹಾಗೇ ಹೋಗುವಾಗ ಭರತನಹಳ್ಳಿಗೆ ಹೋಗಿ ಅಬ್ಬೆಯ ಕೈನಲ್ಲಿ ಕಾಫಿ ಕಾಯಿಸಿ ಕುಡಿದು ಹೋಗೋಣ ಎಂದಿದ್ದರು. ನಾ.ಸು ಅವರನ್ನು ಮಾತಾಡಿಸಿ ಹೋದರೇ ಅದೇನೋ ಸಮಾಧಾನ ಎಂದಿದ್ದರು. ನಾನು ಜೋಯಿಡಾಗೆ ಹೋಗುವ ದಿನವನ್ನು, ಭರತನಹಳ್ಳಿ ಹೊಕ್ಕು ನಾ.ಸು ಜೊತೆ ಪಟ್ಟಂಗ ಹೊಡೆಯುವ ದಿನವನ್ನು ಕಾಯುತ್ತಿದ್ದೆ. ಈ ದರಿದ್ರ ಕರೋನಾ ಒಕ್ಕರಿಸಿಕೊಂಡ ನಂತರ ಬೆಳಗೆರೆ ಜೋಯಿಡಾಗೂ ಹೋಗಲಿಲ್ಲ, ನನ್ನನ್ನು ನಾ.ಸು ಜೊತೆ ಭೇಟಿಯೂ ಮಾಡಿಸಲಿಲ್ಲ. ಲೋಕವನ್ನೇ ತೋರೆದು ಹೋದರು. ಈಗ ನಾ.ಸು ಸಹ ಹೋದರು. ಜೀವನದಲ್ಲಿ ಒಮ್ಮೆಯೂ ನಾ.ಸು ಮಾಸ್ತರ್‌ ರನ್ನು ಭೇಟಿ ಮಾಡಿಸದ ವಿಧಿಯನ್ನು ಏನೆಂದು ಶಪಿಸಲಿ.
Marjala manthana Bharathanahalli

ಭರತನಹಳ್ಳಿಯ ನಾ.ಸು ಮನೆ ಸಾಲು ಸಾಲು ದುರಂತಗಳನ್ನು ಕಂಡಿದೆ. ಯಾವುದೇ ದುರಭ್ಯಾಸಗಳಿರದಿದ್ದ ಮಗ ರಾಘವ ಏಕಾಏಕಿ ಹೃದಯಾಘಾತದಿಂದ ಹೋಗಿಬಿಟ್ಟರು. ಅದೇ ಕೊರಗಿನಲ್ಲಿ ಅಬ್ಬೇ ಹೋಗಿ ವರ್ಷ ಕಳೆದಿರಲಿಲ್ಲವೇನೋ ಈಗ ನಾ.ಸು ಭರತನಹಳ್ಳಿ ಮಾಸ್ತರ್‌ ಸಹ ಅವರ ಹಿಂದೆಯೇ ಹೋರಟರು; ವೈಕುಂಠ ಏಕಾದಶಿಯಂದು ಪರಲೋಕದ ಯಾತ್ರೆಗೆ ಹೊರಟರು ನಾ.ಸು.ಭರತನಹಳ್ಳಿ.

ಮಾಧ್ಯಮ ಅಕಾಡೆಮಿ, ಕರ್ನಾಟಕ ಶ್ರೀ, ಕಯ್ಯಾರ ಕಿಂಞಣ್ಣ ರೈ ಪ್ರಶಸ್ತಿ, ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಸುವರ್ಣ ಗೌರವ ಸೇರಿದಂತೆ ಹತ್ತು ಹಲವು ಗೌರವಗಳು ನಾ.ಸು ಭರತನಹಳ್ಳಿಯವರನ್ನು ಅರಸಿಕೊಂಡು ಬಂದಿತ್ತು. ಈ ಕರೋನಾ ಸಂಕಷ್ಟ ವರ್ಷದಲ್ಲೇ ರವಿ ಬೆಳಗೆರೆಯವರ ದೇಹಾಂತ್ಯವಾದ ಸಂಧರ್ಭದಲ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡು ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ ಸ್ನೇಹಜೀವಿ ಅವರು. ಸರಳ, ಸಜ್ಜನ, ಸ್ನೇಹಮಯಿ ವ್ಯಕ್ತಿತ್ವದ ವಿದ್ವಾಂಸ ನಾ.ಸು ಭ ತಮ್ಮ ಅಪಾರ ಆತ್ಮೀಯರನ್ನು ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಪ್ರಕೃತಿ-ವಿಕೃತಿ ಪುಸ್ತಕ ತೆರೆದು ಕುಳಿತಿದ್ದೇನೆ. ನಾ.ಸು ಭರತನಹಳ್ಳಿ ಅವರು ಕೊನೆಗೂ ನೀನು ಭರತನಹಳ್ಳಿ ಬರಲೇ ಇಲ್ಲ ನೋಡು ತಮ್ಮಾ ಎಂದು ಅಣಕಿಸಿದಂತಾಗುತ್ತಿದೆ.

–ವಿಭಾ (ವಿಶ್ವಾಸ್‌ ಭಾರದ್ವಾಜ್)
ಮಾರ್ಜಾಲ ಮಂಥನ
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Bharathanahallimarjala manthanaಮಾರ್ಜಾಲ ಮಂಥನವಿಶ್ವಾಸ್ ಭಾರದ್ವಾಜ್
ShareTweetSendShare
Join us on:

Related Posts

ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!

ಸೋತರೂ ಬಗ್ಗದ ಸ್ಟಾಲಿನ್ ಪುತ್ರ: ವಿರೋಧ ಪಕ್ಷದ ನಾಯಕನಾಗಿ ಮೊದಲ ಭಾಷಣದಲ್ಲೇ ಸನಾತನ ಧರ್ಮದ ವಿರುದ್ಧ ಉದಯನಿಧಿ ಗುಡುಗು!

by Shwetha
May 13, 2026
0

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಭದ್ರಕೋಟೆಯಂತಿದ್ದ ಡಿಎಂಕೆ ಪಕ್ಷವು ಹೀನಾಯ ಸೋಲನ್ನನುಭವಿಸಿ ಅಧಿಕಾರ ಕಳೆದುಕೊಂಡಿದ್ದರೂ, ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್...

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಇನ್ನು ನಾಲ್ಕೇ ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ 2000 ರೂಪಾಯಿ ಬಾಕಿ ಹಣ!

by Shwetha
May 13, 2026
0

ರಾಜ್ಯದ ಲಕ್ಷಾಂತರ ಮಹಿಳೆಯರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು...

ಪ್ರಧಾನಿ ಮೋದಿ ಮಾರ್ಗದಲ್ಲಿ ಸ್ಪೋಟಕ ಪತ್ತೆ..! ಪ್ರಕರಣ ಎನ್‌ಐಎಗೆ

ಪ್ರಧಾನಿ ಮೋದಿ ಮಾರ್ಗದಲ್ಲಿ ಸ್ಪೋಟಕ ಪತ್ತೆ..! ಪ್ರಕರಣ ಎನ್‌ಐಎಗೆ

by Shwetha
May 13, 2026
0

ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆಯಾದ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಸ್ಥಳದಲ್ಲಿ...

NEET ಪರೀಕ್ಷೆ ರದ್ದು: ವಿದ್ಯಾರ್ಥಿಗಳ ಕನಸುಗಳ ಜೊತೆ ಚೆಲ್ಲಾಟವೇ?

NEET ಪರೀಕ್ಷೆ ರದ್ದು: ವಿದ್ಯಾರ್ಥಿಗಳ ಕನಸುಗಳ ಜೊತೆ ಚೆಲ್ಲಾಟವೇ?

by Shwetha
May 13, 2026
0

ಡಾಕ್ಟರ್ ಆಗುವ ಮಹತ್ತರ ಕನಸನ್ನು ಹೊತ್ತು ರಾತ್ರಿ-ಹಗಲು ಶ್ರಮಪಟ್ಟು NEET ಪರೀಕ್ಷೆಗೆ ಸಿದ್ಧರಾದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದೀಗ ಭಾರೀ ಆಘಾತ ಎದುರಾಗಿದೆ. ದೇಶದ ಅತ್ಯಂತ ಪ್ರಮುಖ ವೈದ್ಯಕೀಯ...

ಮಿತವ್ಯಯ ಮಂತ್ರಕ್ಕೆ ಡಿಕೆಶಿ ಕಿಡಿ ಬೊಮ್ಮಾಯಿ ಖಡಕ್ ತಿರುಗೇಟು: ರಾಜ್ಯ ರಾಜಕಾರಣದಲ್ಲಿ ಮೋದಿ ಕಿವಿಮಾತಿನದ್ದೇ ಸದ್ದು

ಮಿತವ್ಯಯ ಮಂತ್ರಕ್ಕೆ ಡಿಕೆಶಿ ಕಿಡಿ ಬೊಮ್ಮಾಯಿ ಖಡಕ್ ತಿರುಗೇಟು: ರಾಜ್ಯ ರಾಜಕಾರಣದಲ್ಲಿ ಮೋದಿ ಕಿವಿಮಾತಿನದ್ದೇ ಸದ್ದು

by Shwetha
May 13, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ ಚಿನ್ನ ಮತ್ತು ಇಂಧನ ಮಿತವ್ಯಯದ ಸಲಹೆ ಈಗ ರಾಜ್ಯ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram