ತಾಕತ್ ಇದ್ರೇ ತಾಲಿಬಾನ್ ಬಗ್ಗೆ ಮಾತನಾಡಲಿ : ಸಿದ್ದು, ಹೆಚ್ಡಿಕೆಗೆ ಯತ್ನಾಳ್ ಸವಾಲ್
ವಿಜಯಪುರ : ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಇಬ್ಬರಿಗೂ ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲ್ ಹಾಕಿದ್ದಾರೆ.
ಸಿಂದಗಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರ್ಎಸ್ಎಸ್ಗೆ ಯಾಕೆ ಗಂಟು ಬಿದ್ದಿದ್ದಾರೆ ಗೊತ್ತಿಲ್ಲ.
ಇವರಿಬ್ಬರು ತಾಕತ್ ಇದ್ರೆ ಜಮಾತ್ ಇ ಇಸ್ಲಾಂ ಬಗ್ಗೆ ಮಾತನಾಡಲಿ. ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಬಗ್ಗೆ ಮಾತನಾಡಲಿ.
ಇದನ್ನೂ ಹೊರತು ಪಡಿಸಿ ಆರ್ಎಸ್ಎಸ್ ನವರು ಹಿಂದೂ ಪರ ಕೆಲಸ ಮಾಡುತ್ತಾರೆ ಎಂದು ನೀವು ಹೇಳುವ ಅಗತ್ಯವಿಲ್ಲ. ರಾಮ ಮಂದಿರದ ಲೆಕ್ಕ ನಮ್ಮಲ್ಲಿ ಇದೆ.
ರಾಮಮಂದಿರಕ್ಕೆ ಆರ್ಎಸ್ಎಸ್ ಹಣ ಸಂಗ್ರಹ ಮಾಡಿಲ್ಲ. ರಾಮಮಂದಿರದ ಹಣವನ್ನು ವಿಶ್ವ ಹಿಂದೂ ಪರಿಷತ್ ಮಾಡಿದೆ ಎಂದು ಹೇಳಿದರು.
ಇನ್ನು ದೇವೇಗೌಡ ಅಯ್ಯೋ ರಾಮ, ಅಯ್ಯೋ ರಾಮ ಅಂತಾರೇ ನೀವು ರಾಮ ಮಂದಿರದ ಬಗ್ಗೆ ಈ ರೀತಿಯ ಹೇಳಿಕೆ ಕೊಡುತ್ತಿದ್ದೀರಿ ಮೊದಲು ನೀವೆಷ್ಟು ಹಣ ಕೊಟ್ಟಿದ್ದಿರಿ ಅದನ್ನು ಹೇಳಿ.
ಗೋ ಹತ್ಯೆಯ ಶಾಪ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ತಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದೂ ವಿರೋಧಿ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ನಾಶವಾಗುತ್ತಿದೆ ಎಂದ ಯತ್ನಾಳ್, ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ವೋಟಿಗಾಗಿ ಆರ್ಎಸ್ಎಸ್ನ್ನು ಟಾರ್ಗೆಟ್ ಮಾಡಿದೆ ಎಂದರು.