ವಿಜಯಪುರ : ಸಾರ್ವಕರ್ ಫೋಟೋ ಹಾನಿ ಪ್ರಕರಣದ ಕಿಚ್ಚು ವಿಜಯಪುರದಲ್ಲೂ ಹೊತ್ತಿದೆ.. ವಿಜಯಪುರ ನಗರ ಹಾಗೂ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಬಳಿ ಸಾವರ್ಕರ್ ಪೋಟೋ ಇಡಿ. ಸಾವರ್ಕರ ಪೋಟೋಗಳನ್ನು ನಾವು ನೀಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೇಳಿಕೆ ನೀಡಿದ್ದಾರೆ.
ವೀರ ಸಾವರ್ಕರ ವೇದಿಕೆಯಲ್ಲಿ ಶ್ರೀ ಗಜಾನನ ಮಹಾಮಂಡಳ ಸಭೆಯಲ್ಲಿ ಭಾಗಿಯಾದ ವೇಳೆ ಮಾತನಾಡಿದ್ದಾರೆ,..
ವಿವಿಧ ಗಣೇಶೋತ್ಸವ ಮಂಡಳಿಗಳು ಹಾಗೂ ಆಧಿಕಾರಿಗಳು ಹಾಜರಿದ್ದ ಸಭೆಯಲ್ಲಿ ಮಾತನಾಡಿದ ಯತ್ನಾಳ , ಎಲ್ಲಾ ಗಜಾನನ ಮಹಾಮಂಡಳಿಗಳು ವೇದಿಕೆಯಲ್ಲಿ ಸಾವರ್ಕರ್ ಪೋಟೋ ಇಡಿ ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೇ ಒಬ್ಬ ದೇಶಕ್ಕೆ ದುಡಿದಂತ, ತಪಸ್ಸು ಮಾಡಿದಂತ, ತನ್ನ ಜೀವನವನ್ನೇ ಭಾರತ ಮಾತೆಗೆ ಅರ್ಪಿಸಿದಂತ ಸಾವರ್ಕರ್ ಅವರನ್ನು ನಾವು ನೆನಪಿಸಿಕೊಳ್ಳಬೇಕು.
ನಾವು ಸ್ವತಂತ್ರ್ಯರಾಗಿದ್ದೇವೆಂದರೆ ಸಾವರ್ಕರ್ ಹಾಗೂ ಇತರ ಸಾವಿರಾರು ಜನರು ದುಡಿದ ಫಲವಾಗಿದೆ.
ಎಲ್ಲಾ ಗಣೇಶ ಮಂಡಳಿಗಳು ಗಣೇಶ ಮೂರ್ತಿ ಮುಂದೆ ಸಾವರ್ಕರ್ ಭಾವಚಿತ್ರ ಇಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.