Rahul ghandi ಮೂರ್ಖ, ಸಾವರ್ಕರ್ ಬಗ್ಗೆ ಮಾತನಾಡುವ ಅರ್ಹತೆ ಆತನಿಗಿಲ್ಲ – ರಾಜ್ ಠಾಕ್ರೆ..
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಭಾನುವಾರ ರಾಹುಲ್ ಗಾಂಧಿಯನ್ನು ಮೂರ್ಖ ಎಂದು ಕರೆದಿದ್ದಾರೆ. ವೀರ್ ಸಾವರ್ಕರ್ ಅವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಕ್ಕಾಗಿ ಠಾಕ್ರ ರಾಹುಲ್ ಅವರನ್ನ ಟೀಕಿಸಿದ್ದಾರೆ.
ರಾಹುಲ್ ನೀನು ಮೂರ್ಖ ಎಂದು…! ಸಾವರ್ಕರ್ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ. ಆ ಸಮಯದಲ್ಲಿ ಸಾವರ್ಕರ್ ಮಾಡಿದ್ದು ಅವರ ‘ತಂತ್ರ’ದ ಭಾಗವಾಗಿತ್ತು ಎಂದು ಠಾಕ್ರೆ ಹೇಳಿದ್ದಾರೆ.
ನಡೆದದ್ದೇನೆಂದರೇ, ನವೆಂಬರ್ 17 ರಂದು, ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಅವರು ಬ್ರಿಟಿಷರ ಸೇವಕರಾಗಿ ಉಳಿಯಲು ಬಯಸಿದ್ದರು ಎಂದು ಹೇಳಿದ್ದರು. ಅದೇ ವೇಳೆ ಭಯದಿಂದ ಕ್ಷಮೆಯನ್ನೂ ಕೇಳಿದ್ದರು.
ರಾಜ್ ಠಾಕ್ರೆ ರ್ಯಾಲಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಲಹೆ ನೀಡಿದ್ದಾರೆ. ಗತಕಾಲದ ನಾಯಕರು, ದಿಗ್ಗಜರ ವಿರುದ್ಧ ಕಿತ್ತಾಡಿಕೊಂಡು ಪ್ರಯೋಜನವಿಲ್ಲ ಎಂದರು. ಸಾವರ್ಕರ್, ಇಂದಿರಾ ಮತ್ತು ಪಂಡಿತ್ ನೆಹರೂ ಅವರಂತಹ ನಮ್ಮ ನಾಯಕರ ಪರಂಪರೆಯನ್ನು ಅವಮಾನಿಸುವುದನ್ನು ನಿಲ್ಲಿಸಿ. ಈ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಪ್ರತಿಯೊಬ್ಬರೂ ಕೆಲವು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಹೊಂದಿದ್ದಾರೆ. ನಾವು ಈಗ ಅವರ ಬಗ್ಗೆ ಪ್ರತಿಕ್ರಿಯಿಸಬಾರದು. ಪ್ರಸ್ತುತ ದೇಶದಲ್ಲಿ ನಿರುದ್ಯೋಗ, ಭದ್ರತೆಯಂತಹ ಹಲವು ಸಮಸ್ಯೆಗಳಿದ್ದು, ಅದಕ್ಕಾಗಿ ಹೋರಾಟ ನಡೆಸಬೇಕಿದೆ ಎಂದಿದ್ದಾರೆ.
ಪೊಲೀಸ್ ರಿಗೆ ದೂರು ನೀಡಿದ ಸಾವರ್ಕರ್ ಮೊಮ್ಮಗ
ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ವಿರುದ್ಧ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಂಜಿತ್ ಸಾವರ್ಕರ್ ಮಾತನಾಡಿ “ಸಾವರ್ಕರ್ ಅವರು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ರಾಹುಲ್ ಹೇಳುತ್ತಾರೆ. ಸಾವರ್ಕರ್ ದೇಶದ ವಿರುದ್ಧ ಕೆಲಸ ಮಾಡುತ್ತಿದ್ದರು. ಈ ಮೂಲಕ ವೀರ್ ಸಾವರ್ಕರ್ ಅವರನ್ನು ರಾಹುಲ್ ಅವಮಾನಿಸಿದ್ದಾರೆ.
‘You Idiot…:Raj Thackeray Slams Rahul Gandhi Over Savarkar Remark