ಕಿಚ್ಚ ಈಗ ವಾಲ್ಮೀಕಿ ರತ್ನ : ಪೈಲ್ವಾನ್ ನೋಡಲು ಮುಗಿಬಿದ್ದ ಫ್ಯಾನ್ಸ್
ದಾವಣಗೆರೆ : ಇಂದು ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ ಕಾರ್ಯಕ್ರಮ ಕೊನೆಯಲ್ಲಿ ಅಸ್ತವ್ಯಸ್ತ ಉಂಟಾಯಿತು.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಎರಡು ದಿನಗಳ ಕಾಲ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.
ಮಧ್ಯಾಹ್ನ ೩ ಗಂಟೆಗೆ ನಟ ಸುದೀಪ್ ಬರುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿ, ಖುರ್ಚಿ, ಬ್ಯಾರಿಕೇಡ್ ಗಳನ್ನ ಕಿತ್ತಾಗಿ ಸ್ಟೇಜ್ ಬಳಿ ಓಡಿ ಬಂದರು.
ಈ ವೇಳೆ ಪೊಲೀಸರ ಎಷ್ಟೇ ಹರಸಾಹಸ ಪಟ್ಟರು, ಏನು ಪ್ರಯೋಜನವಾಗಲಿಲ್ಲ, ಇನ್ನೂ ಅಭಿಮಾನಿಗಳ ಅತೀ ರೇಖಾದ ವರ್ತನೆಯಿಂದ ನಟ ಸುದೀಪ್ ಸ್ಟೇಜ್ ಮೇಲಿದ್ದ ಜನರನ್ನ ತೆರವು ಗೊಳಿಸಿದರು ಏನು ಪ್ರಯೋಜನವಾಗಲಿಲ್ಲ.
ಇಷ್ಟಕ್ಕು ಜನ ಬಗ್ಗದಿದ್ದೀಗ ಕೇವಲ ೧೦ ನಿಮಿಷದಲ್ಲಿ ಸ್ಟೇಜ್ ನಿಂದ ಸುದೀಪ್ ನಿರ್ಗಮಿಸಿದರು.
ಈ ವೇಳೆ ನೂರಾರು ಚೇರ್ ಗಳು, ಬ್ಯಾರಿಕೇಡ್ ಗಳನ್ನ ಮುರಿದು ಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









