ಮೂಡುಬಿದಿರೆ: ಕ್ಷುಲ್ಲಕ ಕಾರಣಕ್ಕೆ ಸ್ವಂತ ಅಣ್ಣನೇ ತಮ್ಮನನ್ನು ಕೊಂದಿರುವ ಘಟನೆ ಕಾರ್ಕಳದ ಕೆಲ್ಲಪುತ್ರಿಗೆಯಲ್ಲಿ ನಡೆದಿದೆ. ರವೀಂದ್ರ ಮೃತ ದುರ್ದೈವಿಯಾಗಿದ್ದಾನೆ. ಭಾನುವಾರ ರಾತ್ರಿ ರವೀಂದ್ರ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಮೃತ ರವೀಂದ್ರ, ಮೃತನ ಅಣ್ಣ ಶ್ರೀನಿವಾಸ್, ಹಾಗೂ ಇವರಿಬ್ಬರ ಭಾವ ಆನಂದ ನಡುವೆ ಜಗಳವಾಗಿದೆ. ಈ ವೇಳೆ ಶ್ರೀನಿವಾಸ್ ಮತ್ತು ಆನಂದ ಇಬ್ಬರು ಸೇರಿ ರವೀಂದ್ರ ಅವರ ಹೊಟ್ಟೆ ಮೇಲೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲೇ ರಕ್ತ ಕಕ್ಕಿ ಅಸ್ವಸ್ಥರಾಗಿದ್ದ ರವೀಂದ್ರ ಅವರನ್ನು ಸ್ಥಳೀಯರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ರವೀಂದ್ರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಈ ಸಂಬಂಧ ಪೊಲೀಸರು ಆರೋಪಿಗಳಾದ ಶ್ರೀನಿವಾಸ್ ಹಾಗೂ ಆನಂದ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
fifaworldcup2026- ಅಹಂ ಇಲ್ಲದ ಸೂಪರ್ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!
🏔️ಶ್ವೇತವರ್ಣದಂತೆ ಹೊಳೆಯುವ ಹಿಮಪರ್ವತಗಳೇ ಈ ವೀರಭೂಮಿಯ ಮುಕಟುಮಣಿ. ಪ್ರಕೃತಿಯ ರಮಣೀಯ ಸೌಂದರ್ಯವೇ ಈ ನಾಡಿನ ಮುಖವಾಣಿ. ಸಣ್ಣ ಸಣ್ಣ ದ್ವೀಪಗಳು, ಬೆಟ್ಟಗುಡ್ಡಗಳೇ ಈ ದೇಶದ ಒಡಲು.🌊 ಅಟ್ಲಾಂಟಿಕ್...








