ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್ ರಮೇಶ್ ಜಾರಕಿಹೊಳಿನೂ ಅಭ್ಯರ್ಥಿ,
ಅರುಣ್ ಕುಮಾರ್ ಪುತ್ತಿಲ ಸುಮಾರು 30 ವರ್ಷದಿಂದ ಸಂಘಟನೆ ಇತ್ಯಾದಿ ಅಂತ ತಿರುಗಾಟ ನಡೆಸಿದವರು, ಕಳೆದ ಬಾರಿಯೂ ಟಿಕೆಟ್ ಕೈ ತಪ್ಪಿತ್ತು.. ಆದ್ರೂ ಸಂಜೀವ ಮಠಂದೂರು ಪರ ಕ್ಯಾಂಪನ್ ಮಾಡಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು, ಪುತ್ತಿಲ ಪಕ್ಷದ ವಿರುದ್ಧ ಯಾವತ್ತೂ ಹೋದ ವ್ಯಕ್ತಿಯಲ್ಲ.
ಅಷ್ಟಕ್ಕೂ, ಪಕ್ಷ ಅಂದ್ರೆ ಏನು? ಪಕ್ಷದಲ್ಲಿರೋ ಒಂದಿಬ್ಬರು ಸ್ವಾರ್ಥಿಗಳ ನಿರ್ಧಾರವೂ ಹೌದು, ಕಾರ್ಯಕರ್ತರ ತೀರ್ಮಾನ ಖಂಡಿತವಾಗಿಯೂ ಅಲ್ಲ.. ನೀವು ಎಷ್ಟು ದಿನ ಪಕ್ಷದ ನಿರ್ಧಾರ ಅಂತ ಸೈಲೆಂಟ್ ಆಗಿ ಇರುತ್ತೀರಿ..? ಅಷ್ಟರವರೆಗೂ ಪುತ್ತಿಲರಂತ, ಕಿಶೋರ್ ಬೋಟ್ಯಾಡಿ ಅಂತ ಹಿಂದೂ ನಾಯಕರು ಸೈಡ್ ಲೈನ್ ಆಗ್ತಾಲೆ ಇರ್ತಾರೆ.. ಒಂದಿಬ್ಬರು ಸ್ವಾರ್ಥಿಗಳು ಮಾಡಿರೋ ನಿರ್ಧಾರಕ್ಕೆ ಪುತ್ತಿಲರಂತ ನಾಯಕರು ಯಾಕೆ ಬಲಿಪಶು ಆಗಬೇಕು..?
ಹಾಗೆಯೇ, ಹೈಕಮಾಂಡ್ ಟಚ್ ಇದೆ ಅಂತ… ಇಲ್ಲಿಯ ವಾಸ್ತವವನ್ನು ಅವ್ರ ಗಮನಕ್ಕೆ ತಾರದೆ ಮಾಡುವ, ಬಿಜೆಪಿ ನಾಯಕರು ಇದಕ್ಕೆಲ್ಲ ಬೆಲೆ ತೆರಬೇಕಾಗುತ್ತೆ. ಹಿಂದೆ ಯಡಿಯೂರಪ್ಪರಿಗೆ ಹಿಂದಿ ಬರುತ್ತಿರಲಿಲ್ಲ, ದಿವಂಗತ ಅನಂತ ಕುಮಾರ್ ಅವ್ರು ಹೈಕಮಾಂಡ್ ಬಳಿ ಹಿಂದಿಯಲ್ಲಿ ಬೇಕಾದ ಹಾಗೇ ಮಾತನಾಡಿ… ಒಂದರ್ಥದಲ್ಲಿ ಯಡಿಯೂರಪ್ಪ ವಿಲನ್ ರೀತಿಯಾಗಿದ್ರು, ಇಲ್ಲಿಯೂ ಇದೆ ಆಗ್ತಿರೋದು.
ಜನರ ನಾಡಿಮಿಡಿತ ತಿಳಿಯುವವ ಅಭ್ಯರ್ಥಿಯಾಗಬೇಕು, ಕಾಂಗ್ರೆಸ್ ನವರ ಜೊತೆಗೆ ಗುರುತಿಸಿಕೊಂಡವರು ಅದು ಹೇಗೆ ಹಿಂದುತ್ವದ ಭದ್ರಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗ್ತಾರೆ..? ಇದೆ ಸತ್ಯ… ಆಶಾ ತಿಮ್ಮಪ್ಪ ಗೌಡ ಒಳ್ಳೆಯ ಅಭ್ಯರ್ಥಿಯ ಇತ್ಯಾದಿ ಅನ್ನುವುದಕ್ಕಿಂತ, ಅವ್ರು ರಾಜ್ಯ ಕಾಂಗ್ರೆಸ್ ನಾಯಕರ ಜೊತೆಗೆ ಇರುವ ಫೋಟೋಗಳು ಏನು ಹೇಳ್ತಿವೆ ಅನ್ನೋದು ಕೂಡ ಇಲ್ಲಿ ಮುಖ್ಯ. ಯಾಕಂದ್ರೆ, ಅಂತ ಫೋಟೋಗಳು ಕೂಡ ಓಡಾಡ್ತೀವೆ.
ಇನ್ನೂ ಕಲ್ಲಡ್ಕ ಪ್ರಭಾಕರ್ ಭಟ್ ಏನು ಹೇಳ್ತಾರೆ? ಯಾಕೆ ನಿಮಗೆ ಅರುಣ್ ಕುಮಾರ್ ಪುತ್ತಿಲ ಅಭ್ಯರ್ಥಿಯಾಗೋದು ಇಷ್ಟ ಇಲ್ವಾ.? ಹಿಂದುತ್ವ ಅಂತ ಹೇಳ್ತೀರಿ… ಯಾಕೆ ಈ ರೀತಿ..? 15 ವರ್ಷದ ಹಿಂದೆ ಯಾವುದೇ ಹೋರಾಟದಲ್ಲೂ ಇಲ್ಲದ ನಳಿನ್ ಕುಮಾರ್ ಅವ್ರನ್ನ ಎಕಾಏಕಿಯಾಗಿ ಸಂಸದರಾಗಿ ಮಾಡಿದ್ರಿ? ಈಗ ನಳಿನ್ ಕುಮಾರ್ ಗೂ ನಿಮಗೂ ಸಂಬಂಧ ಸರಿಯಿದ್ಯಾ ಗೊತ್ತಿಲ್ಲ.?! ಯಾಕೆ ಈಗ ನಿಮ್ಮ ಮಾತು ನಡೆಯಲ್ವಾ..? ಎಲ್ಲಾ ಬಿಲ್ ಸಂತೋಷ್ ಅವ್ರದ್ದೇ ಆಟನಾ…?
ನೋಡಿ… ಕೊನೆ ಗಳಿಗೆಯಲ್ಲಿ ಅರುಣ್ ಕುಮಾರ್ ಪುತ್ತಿಲ ನಿರ್ಧಾರ ಏನು ಅಂತ ಗೊತ್ತಿಲ್ಲ, ಕೊನೆ ಗಳಿಗೆಯಲ್ಲಿ ಅವ್ರು ಪಕ್ಷೇತರವಾಗಿ ನಿಂತ್ರೆ… ಅದು ನೀವು ಮತ್ತು ನಿಮ್ಮ ಬಿಜೆಪಿ ನಾಯಕರು ಹಿಂದುತ್ವಕ್ಕೆ ಮಾಡಿರೋ ಮೋಸ ಅನ್ನುವುದು ಮತ್ತೊಮ್ಮೆ ಪ್ರೂವ್ ಆಗುತ್ತೆ..
ಇನ್ನೂ ಪುತ್ತಿಲವರ ತಪ್ಪುಗಳು ಏನೂ ಇಲ್ಲ… ಅವ್ರನ್ನ ಬೇಕಾದಾಗ ಬಳಸಿಕೊಂಡು ಮೂಲೆಗುಂಪು ಮಾಡುವ ನಿಮ್ಮ ಆಟ ಪ್ರತಿಯೊಬ್ಬರಿಗೂ ಸರಿಯಾಗಿ ಅರ್ಥವಾಗಿದೆ. ನಿಮ್ಮ ಜಾತಿಲೆಕ್ಕಾಚಾರಕ್ಕೆ ಮುಂದೊಂದು ದಿನ ನೀವೇ ಬಲಿಯಾಗಲಿದ್ದೀರಿ. 🙏