ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳೊದೆಲ್ಲಾ ಸುಳ್ಳಿನ ಕಂತೆ, ಬಿಜೆಪಿಯವರು ಅಧಿಕಾರ ನಡೆಸಲು 10 ವರ್ಷಕ್ಕೆ ಮಾತ್ರ ಸೀಮಿತ ಆಗೋದು ಬೇಡ. 100 ವರ್ಷ ಅವರ ಪಾರ್ಟಿಯೇ ಅಧಿಕಾರದಲ್ಲಿರಲಿ. ಮಾನವ ಜೀವಿ ಕೊನೆಯಾಗುವವರೆಗೂ ಅವರೇ ಅಧಿಕಾರದಲ್ಲಿ ಇರಲಿ. ನಳಿನ್ ಕುಮಾರ್ ಕಟೀಲ್ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಡಿಕೆಶಿ, ಉಪಚುನಾವಣೆಯಲ್ಲಿ ವಿದ್ಯಾವಂತರು ಕಾಂಗ್ರೆಸ್ ಗೆ ಮತ ಹಾಕಿದ್ದೇವೆ ಎಂದು ಹೇಳಿದ್ದಾರೆ. ಮತದಾರ ಹೇಳಿದ್ದು ತಪ್ಪಿದೆಯಾ, ಮತ ಬಿದ್ದಿರೋದು ತಪ್ಪಿದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.
ಬಹಳಷ್ಟು ಮಂದಿ ಇವಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ತಜ್ಞರಲ್ಲಿ ಈ ಕುರಿತು ಚರ್ಚೆ ಮಾಡಲಾಗುವುದು. ಎಲ್ಲಾ ಬೂತ್ಗಳಲ್ಲಿಯೂ ಒಂದೇ ರೀತಿಯ ಮತದಾನ ನಡೆದಿರುವ ಬಗ್ಗೆ ಅನುಮಾನವಿದೆ ಎಂದು ಡಿಕೆಶಿ ಶಂಕೆ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆಯಲ್ಲಿ ಅಕ್ರಮದ ಮಾಹಿತಿ ಇದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಸೋಲಾಗಿದೆ. ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಈ ಬಗ್ಗೆ ನಮಗೆ ಮಾಹಿತಿ ಇದೆ. ಆದರೆ ಚುನಾವಣೆಯಲ್ಲಿ ಯಾವ ರೀತಿ ಅಕ್ರಮವಾಗಿದೆ, ದುರುಪಯೋಗವಾಗಿದೆ ಹಾಗೂ ಯಾವ ರೀತಿಯಲ್ಲಿ ಹಣ ಹಂಚಿಕೆಯಾಗಿದೆ ಎಂಬ ಕುರಿತಾಗಿ ಎಲ್ಲಾ ರೀತಿಯ ಮಾಹಿತಿ ಇದೆ. ಅಕ್ರಮ ಹಾಗೂ ಸೋಲಿನ ಕುರಿತು ಚರ್ಚೆ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ತಾವು ಮಾಜಿ ಮೇಯರ್ ಸಂಪತ್ ರಾಜ್ ರಕ್ಷಣೆ ನಿಂತಿದ್ದಾಗಿ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ. ಹಾಗಾದರೆ ನಳಿನ್ಕುಮಾರ್ ಕಟೀಲ್ ಏನು ಗೃಹಸಚಿವರೇ ಎಂದು ಪ್ರಶ್ನಿಸಿದ್ದಾರೆ.
ನಾನು ಸಂಪತ್ ರಾಜ್ ರಕ್ಷಣೆ ಮಾಡುತ್ತಿರುವ ಆರೋಪ ನಿಜವೇ ಆದರೆ,ನನ್ನನ್ನು ಬಂಧಿಸಬಹುದಲ್ವಾ.
ಈಗಾಗಲೇ ಬಂಧಿಸಲಾಗಿದೆ, ಮುಂದೆಯೂ ಅರೆಸ್ಟ್ ಮಾಡೊದಾದ್ರೆ ಮಾಡಲಿ. ಇನ್ನು ಏನೇನು ತೊಂದರೆ ಕೊಡಬಹುದು ಎಂದು ಯೋಚಿಸುತ್ತಿದ್ದಾರೆ. ಎಲ್ಲಾ ನೊಟೀಸ್ ಬರ್ತಾ ಇದೆ. ಇನ್ನೊಂದು ನೊಟೀಸ್ ಸಹ ಕೊಡಲಿ ಎಂದು ಮಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel