ADVERTISEMENT
Friday, May 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪರಿಮಳ ಭರಿತ ಆಕರ್ಶಣೀಯ ಮಲ್ಲಿಗೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?  

Namratha Rao by Namratha Rao
September 19, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪರಿಮಳ ಭರಿತ ಆಕರ್ಶಣೀಯ ಮಲ್ಲಿಗೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಮಲ್ಲಿಗೆ… ಪರಿಮಳ ಭರಿತ ಆಕರ್ಶಣೀಯ ಮಲ್ಲಿಗೆ ಬಿಳಿ ಬಣ್ಣದಲ್ಲಿ ಕಂಗೊಳಿಸುವ ಆಕರ್ಶಣೀಯ ಹೂವಾಗಿದೆ. ಇದನ್ನ ಹೆಚ್ಚು ಮಹಿಳೆಯರು ಯುವತಿಯರು ಮುಡಿಯಲು ಇಷ್ಟ ಪಡುತ್ತಾರೆ. ಮಲ್ಲಿಗೆಯಲ್ಲಿ ಸಾಕಷ್ಟು ವಿಧಗಳಿವೆ. ಕಾಡು ಮಲ್ಲಿಗೆ , ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ, ಮುತ್ತುಮಲ್ಲಿಗೆ ಇನ್ನೂ ಹಲವು ವಿಧಗಳಿವೆ. 

Related posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

May 8, 2026
ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

May 8, 2026

ಕನ್ನಡದಲ್ಲಿ ಮಲ್ಲಿಗೆ ಅಂದ್ರೆ, ಇಂಗ್ಲಿಷ್ ನಲ್ಲಿ ಜಾಸ್ಮೀನ್, ಹಿಂದಿಯಲ್ಲಿ ಚಮೇಲಿ ಹೀಗೆ ನಾನಾ ಭಾಷೆಗಳಲ್ಲಿ ನಾನಾ ರೀತಿಯಲ್ಲಿ ಕರೆಯಲಾಗುತ್ತೆ. ಇದೊಂದು ದೀರ್ಘಕಾಲಿಕ ಪುಷ್ಪ ಬೆಳೆ. ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು 200 ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ನಮ್ಮ ದೇಶದ ಮಲ್ಲಿಗೆ ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಅರಬ್ ದೇಶಗಳಿಗೆ ರಫ್ತಾಗುತ್ತದೆ. ಮಲ್ಲಿಗೆಯನ್ನು ಸುಗಂಧಿತ ತೈಲ ತಯಾರಿಸಲು ಮತ್ತು ಅತ್ತರ್ ತಯಾರಿಸಲು ಬಳಸಲಾಗುತ್ತದೆ. ಮಲ್ಲಿಗೆಯ ತೈಲವನ್ನು ಸಾಬೂನು ಮತ್ತು ಇತರ ಸೌಂದರ್ಯವರ್ಧಕ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಲ್ಲ ಸುಗಂಧದ್ರವ್ಯಗಳಲ್ಲಿಯೂ ಮಲ್ಲಿಗೆ ತೈಲವಿದ್ದೇ ಇರುತ್ತದೆ.

ಆಕರ್ಶಣೀಯವಾಗಿ ಒಂದೇ ನೋಟದಲ್ಲಿ ಎಲ್ಲರ ಗಮನ ಸೆಳೆಯುವ ಪ್ರೇಮದ ಸಂಕೇತ ಗುಲಾಬಿಯ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳು..!

ಮಲ್ಲಿಗೆ ಮೊಗ್ಗುಗಳಲ್ಲಿ ಸುಗಂಧ ನೀಡುವ ಇಂಡೋಲ್ ಎಂಬ ರಾಸಾಯನಿಕ ಪದಾರ್ಥ ಇದೆ. ಪೂರ್ತಿ ಅರಳಿದ ಮತ್ತು ಆಗ ತಾನೆ ಬಿಡಿಸಿದ ಹೂಗಳನ್ನು ಎಣ್ಣೆ ತೆಗೆಯಲು ಬಳಸುತ್ತಾರೆ. ಜಾಜಿಯಿಂದ ತಯಾರಾಗುವುದು ಜಾಸ್ಮಿನ್ ತೈಲ. ಈ ಹೂಗಳನ್ನು ಗಿಡದಿಂದ ಬೇರ್ಪಡಿಸಿದ ಕೆಲ ಸಮಯದವರೆಗೂ ಅದರ ಸುವಾಸನೆ ವೃದ್ಧಿಯಾಗುತ್ತಿರುತ್ತದೆ. ಹೂಗಳನ್ನು ಮಾಲೆಗಳಲ್ಲಿ, ಹಾರಗಳಲ್ಲೂ ಬಳಸುತ್ತಾರೆ.

ಇನ್ನೂ ಮಲ್ಲಿಗೆಯಿಂದ ಮೈಕೈ ನೋವಿಗೆ ಔಷಧಿಯನ್ನೂ ತಯಾರಿಸಲಾಗುತ್ತೆ. ಅಷ್ಟೇ ಅಲ್ದೇ ಸುಗಂಧ, ಪರ್ ಫ್ಯೂಮ್ ಗಳಿಗೆ ಉಪಯೋಗಕಾರಿ ಜಾಸ್ಮೀನ್. ಕಿವಿ ಮತ್ತು ಮೂಗಿನ ರೋಗಗಳಲ್ಲಿ ಮಲ್ಲಿಗೆಯಿಂದ ತಯಾರಿಸಿದ ತೈಲವನ್ನು ಉಪಯೋಗಿಸಲಾಗುತ್ತದೆ. ಮಲ್ಲಿಗೆಯ ಬೇರು, ಹೂ ಮತ್ತು ಎಲೆಗಳು ಎದೆ ಹಾಲಿನ ಉತ್ಪತ್ತಿಯನ್ನು ತಗ್ಗಿಸುತ್ತವೆ. ಚೀನಾ ಸೇರಿ ಇತರೇ ದೇಶಗಳಲ್ಲಿ ಚಹಾದಲ್ಲಿ ಸುಗಂಧ ಬರಿಸಲು ಮಲ್ಲಿಗೆ ಹೂಗಳನ್ನು ಹಾಕಿ ಟೀ ತಯಾರಿಸುತ್ತಾರೆ. ದೃಷ್ಟಿದೋಷದ ತೊಂದರೆಯಿರುವವರಿಗೆ ಮತ್ತು ಉನ್ಮಾದದಿಂದ ಬಳಲುವವರಿಗೆ ಮಲ್ಲಿಗೆಯ ಎಲೆಯ ರಸದಿಂದ ತಯಾರಿಸಿದ ತೈಲವನ್ನು ತಲೆಗೆ ಉಪಯೋಗಿಸಲು ಹೇಳಬೇಕು. ಗಾಯ ಹಾಗೂ ಹುಣ್ಣುಗಳಿಗೆ ಒಣಗಿದ ಮಲ್ಲಿಗೆ ಎಲೆಗಳನ್ನು ನೀರಿನಲ್ಲಿ ನೆನೆಯಿಟ್ಟು ನಂತರ ಅರೆದು ಪೊಲ್ಟೀಸ್ ಮಾಡಿ ಕಟ್ಟಬೇಕು. ಆಗ ಗಾಯ ಹಾಗೂ ಹುಣ್ಣುಗಳು ವಾಸಿಯಾಗುತ್ತವೆ.

ಅಂದವಾದ ಸೇವಂತಿಗೆ ಹೂವಿನಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..?

Tags: #saakshatvflowersInformationintersting factsjasmine
ShareTweetSendShare
Join us on:

Related Posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

by Shwetha
May 8, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಭೀಕರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಪ್ತ...

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

by Shwetha
May 8, 2026
0

ಬೆಂಗಳೂರು ಪಶ್ಚಿಮ ಬಂಗಾಳದ ರಾಜಕೀಯ ರಣಕಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಬೆಂಗಳೂರು...

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕುರಿತು...

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

by Shwetha
May 8, 2026
0

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು...

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

by Shwetha
May 8, 2026
0

ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram