ADVERTISEMENT
Wednesday, February 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಶ್ಚಿಮ ಬಂಗಳಾದಲ್ಲಿರುವ ವಿಶ್ವಪ್ರಸಿದ್ಧ 6 ರೈಲ್ವೇ ನಿಲ್ದಾಣಗಳ ಬಗ್ಗೆ ನಿಮಗೆ ಗೊತ್ತಾ..?

Namratha Rao by Namratha Rao
October 2, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪಶ್ಚಿಮ ಬಂಗಳಾದಲ್ಲಿರುವ ವಿಶ್ವಪ್ರಸಿದ್ಧ 6 ರೈಲ್ವೇ ನಿಲ್ದಾಣಗಳ ಬಗ್ಗೆ ನಿಮಗೆ ಗೊತ್ತಾ..?

ಸುಮಾರು 164 ವರ್ಷಗಳ ಹಿಂದೆ  ಪಶ್ಚಿಮ ಬಂಗಾಳದ ಜನ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು.. ಇಂದು ರೈಲುಗಳು , ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ.. ಇತರೇ  ಬಹುತೇಕ ರಾಜ್ಯಗಳು ಕೇವಲ ಸಾರಿಗೆಯ ವ್ಯವಸ್ತೆ ಅನ್ನೋದಕ್ಕಿಂತ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.. ಫ್ಲಾಟ್ ಫಾರ್ಮ್ ಅಂಗಡಿಗಳು ಹೋಟೆಲ್ ಗಳು , ಕೂಲಿ ಕಾರ್ಮಿಕರು , ಟೀ ಬಿಸ್ಕೆಟ್ ಸ್ನಾಕ್ಸ್ ಮಾಡುವವರಿಂದ ಹಿಡಿದು ಟ್ಯಾಕ್ಸಿ ಆಟೋ ಚಾಲಕರು ರೈಲುನಿಲ್ದಾಣಗಳನ್ನೇ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ.

Related posts

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

February 18, 2026
ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

February 18, 2026

ಇನ್ನೂ ರೈಲು ನಿಲ್ದಾಣಗಳು ಅದ್ರಲ್ಲೂ ನಿಗೂಢತೆ ಅಥವ ರಹಸ್ಯಗಳು ಹಾಗೂ ವಿಭಿನ್ನತೆಗಳಿಂದ ಕೂಡಿದ ರೈಲು ನಿಲ್ದಾಣಳ ಬಗ್ಗೆ ನಾವೇನಾದರೂ ಮಾತನಾಡಿದ್ರೆ ಮೊದಲಿಗೆ ಪಶ್ಚಿಮ ಬಂಗಾಳವೇ ನೆನಪಾಗೋದು.. ಕಾರಣ ಇಲ್ಲಿನ ಕೆಲ ರೈಲು ನಿಲ್ದಾಣಗಳು ಸಾಕಷ್ಟು ರಹಸ್ಯಮಯವಾಗಿದೆ.. ಕೆಲವೊಂದು ವಿಭಿನ್ನವಾಗಿದೆ.. ಅದರದ್ದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ… ಪಶ್ಚಿಮ ಬಂಗಾಳದ ಅನೇಕ ಭಾರತೀಯ ರೈಲ್ವೆ ನಿಲ್ದಾಣಗಳು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿವೆ. ಆ ಬಗೆಗಿನ ಇಂಟರೆಸ್ಟಿಂಗ್ ಫ್ಯಾಕ್ಟ್ಸ್, ಮತ್ತು 6 ವಿಷೇಶ ರೈಲ್ವೇ ನಿಲ್ದಾನಗಳ ಬಗ್ಗೆ ತಿಳಿಕೊಳ್ಳೋಣ

1.   ಹೆಸರಿಲ್ಲದ ರೈಲು ನಿಲ್ದಾಣ – ರೈನಗರ

ಭಾರತದಲ್ಲಿ ಪ್ರತಿ ರೈಲು ನಿಲ್ದಾಣಕ್ಕೂ ಒಂದಲ್ಲಾ ಒಂದು ಹೆಸರು ಇದ್ದೇ ಇದೆ.. ಆದ್ರೆ ಹೆಸರೇ ಇಲ್ಲದ ರೈಲು ನಿಲ್ದಾಣವೊಂದು ಪಶ್ಚಿಮ ಬಂಗಾಳದಲ್ಲಿದೆ ಎಂದ್ರೆ ಆಶ್ಚರ್ಯ ಆಗದೇ ಇರುವುದಿಲ್ಲ. ಈ ನಿಲ್ದಾಣ ರೈನಾನಗರದ ಸಮೀಪವಿದೆ. ಈ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಪೂರ್ಬಾ ಬರ್ಧಮನ್ ಜಿಲ್ಲೆಯಲ್ಲಿದೆ. 2008 ರಲ್ಲಿ ಸ್ಥಾಪನೆಯಾದ ರೈಲ್ವೆ ನಿಲ್ದಾಣವು ಬಂಕುರಾ-ಮಸಾಗ್ರಾಮ್ ಮಾರ್ಗದಲ್ಲಿ ಹೆಚ್ಚಿನ ರೈಲುಗಳಿಗೆ ನಿಲುಗಡೆಯಾಗಿದೆ. ಆರಂಭದಲ್ಲಿ ಈ ನಿಲ್ದಾಣಕ್ಕೆ ರೈನಗರ ರೈಲ್ವೇ ಸ್ಟೇಷನ್ ಎಂದೇ ಹೆಸರಿಡಲಾಗಿತ್ತು.. ಆದ್ರೆ ರೈನಗರ ಮತ್ತು ರೈನಾನಗರನ ನಟ್ಟ ನಡುವೆ ಈ ನಿಲ್ದಾಣವಿರುವ ಕಾರಣ ಹೆಸರಿನ ವಿಚಾರವಾಗಿ ಎರೆಡೂ ಗ್ರಾಮಗಳ ನಡುವೆ ಕಿತ್ತಾಟ ಶುರುವಾಗಿತ್ತು. ಅನೇಕ ವಾಗ್ವಾದಗಳ ನಂತರ, ಭಾರತೀಯ ರೈಲ್ವೆ ನಿಲ್ದಾಣದ ಹೆಸರನ್ನು ಸೈನ್‌ಬೋರ್ಡ್‌ನಿಂದ ಅಳಿಸಲು ನಿರ್ಧರಿಸಿತು. ಪರಿಣಾಮವಾಗಿ ನಿಲ್ದಾಣಕ್ಕೆ ಇನ್ನೂ ಯಾವುದೇ ಹಹೆಸರಿಡಲಾಗಿಲ್ಲ. ಇದೀಗ ಈ ನಿಲ್ದಾಣ ಹೆಸರಿಲ್ಲದ ರೈಲು ನಿಲ್ದಾಣ ಅಂತಲೇ ಫೇಮಸ್ ಆಗಿದೆ. ಆದ್ರೆ  ಹೆಸರು ಸೈನ್ ಬೋರ್ಡ್ ನಿಂದ ತೆಗೆದು ಹಾಕಲಾಗಿದ್ರೂ ಸಹ ಈಗಲೂ ರೈನಾನಗರ ಹೆಸರಿನಲ್ಲೇ ಟಿಕೆಟ್ ನೀಡಲಾಗ್ತಿದೆ.   

2. ಬಂಗಾಳದ ಘೋಸ್ಟ್ ಸ್ಟೇಷನ್ – ಬೇಗುಂಕೋಡೋರ್

ಬಂಗಾಳದ ಘೋಸ್ಟ್ ಸ್ಟೇಷನ್… 1960ರ ದಶಕದಲ್ಲಿ ಸ್ಥಾಪನೆಯಾದ ಈ ನಿಗೂಢ ರೈಲು ನಿಲ್ದಾಣವಿರುವುದು ಪುರುಲಿಯಾ ಜಿಲ್ಲೆಯಲ್ಲಿ. ಆ ಕಾಲದಲ್ಲಿ ಸ್ಥಳೀಯ ಬುಡಕಟ್ಟು ರಾಣಿ, ಲಚನ್ ಕುಮಾರಿ ಬೆಗುಂಕೋಡರ್ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿದ್ದರು. ಸ್ವಲ್ಪ ಸಮಯದ ನಂತರ, ರಾಂಚಿ ಮಾರ್ಗದಲ್ಲಿ ಬೆಗುನ್‌ಕೋಡರ್ ರೈಲ್ವೇ ನಿಲ್ದಾಣ ಅತ್ಯಂತ ಪ್ರಾಮುಖ್ಯತೆ ಪಡೆಯಿತು.. ಎಲ್ಲವೂ ಉತ್ತಮವಾಗಿಯೇ ಇತ್ತು.. ಆದ್ರೆ 1967 ರ ನಂತರ ಅಲ್ಲಿನ ಸ್ಟೇಷನ್ ಮಾಸ್ಟರ್ ಕಣ್ಣಿಗೆ ದೆವ್ವ ಭೂತ ಕಾಣಿಸಿಕೊಂಡಿದ್ದು, ವಿಚಿತ್ರ ಅನುಭವವನ್ನ ಹೇಳಿಕೊಂಡಿದ್ದರು. ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಸ್ಟೇಷನ್ ಮಾಸ್ಟರ್ ಹಾಗೂ ಆತನ ಕುಟುಂಬದವರು ಶವವಾಗಿ ಪತ್ತೆಯಾಗಿದ್ದರು.. ಅಲ್ಲಿಂದ ಈ ನಿಲ್ದಾಣದ ಬಗ್ಗೆ ಜನರಲ್ಲಿ ಆತಂಕ ಶುರುವಾಗಿತ್ತು.. ಅಷ್ಟೇ ಅಲ್ಲ ಇದಾದ ನಂತರ ಜನ ಈ ಸ್ಟೇಷನ್ ನಲ್ಲಿ ಕೆಲಸ ಮಾಡೋದಕ್ಕೂ ಹೆದರಿಕೊಳ್ಳುವಂತಾಯ್ತು,, ನಂತರ ಅಲ್ಲಿ ಕೆಲಸ ಮಾಡ;ಲು ನಿರಾಸಿದ್ದರು.. ಕ್ರಮೇಣ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತಾ ಹೋಯ್ತು..  ಸಂಜೆಯಾದ ನಂತರ ಅಂದ್ರೆ ಕತ್ತಲಾದ ನಂತರವಂತೂ ಗ್ರಮಾಸ್ಥರು ಈ ರೈಲು ನಿಲ್ದಾಣದ ಕಡೆ ತಲೆ ಹಾಕುವುದಿಲ್ಲ. ಹೀಗೆಯೇ ಮುಂದುವರೆದು ರೈಲು ನಿಲ್ದಾಣ ಸಂಪೂರ್ಣವಾಗಿ ಬಂದ್ ಆಗಿತ್ತು.. ಆದ್ರೆ 2009 ರಲ್ಲಿ ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ಹಾಗೂ ಅಂದಿನ ರೈಲ್ವೇ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಈ ನಿಲ್ದಾಣವನ್ನ ಮತ್ತೊಮ್ಮೆ  ಪುನರಾರಂಭಿಸಿದ್ರು. ಬೇಗುಂಕೋಡೂರ್ ನ ಈ ಘೋಸ್ಟ್ ಸ್ಟೇಷನ್ ನಲ್ಲಿ ಒಟ್ಟು 5 ರೈಲುಗಳು ನಿಲ್ಲಿಸುತ್ತವೆ.. ಆದ್ರೆ ಲೋಕಲ್ ರೈಲುಗಳು ಈಗಲೂ ಸೂರ್ಯಾಸ್ತದ ಬಳಿಕ   ಈ ರೈಲು ನಿಲ್ದಾಣದಲ್ಲಿ  ರೈಲು ನಿಲುಗಡೆಗೆ ನಿರಾಕರಿಸುತ್ತಾರೆ. ಇನ್ನೂ ಒಂಟಿಯಾಗಿ ಜನರು ಈ ನಿಲ್ದಾಣಕ್ಕೆ ಬರೋ ಸಾಹಸ ಮಾಡೋದು ತುಂಬಾನೆ ಕಡಿಮೆ.. ಆದ್ರೆ ಅಡ್ವೆಂಚರಸ್ ಥ್ರಿಲ್ಲಿಂಗ್ ಬೇಕೋ ಅನ್ನುವಂತಹವವರಿಗೆ ಇದು ಒಳ್ಳೆ ಸ್ಪಾಟ್.  

3.     ಭಾರತದ ಅತಿ ಎತ್ತರದ ರೈಲೂ ನಿಲ್ದಾಣ  – ಘುಮ್ 

ಎತ್ತರದ ಡಾರ್ಜಿಲಿಂಗ್ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಘುಮ್ ರೈಲ್ವೆ ನಿಲ್ದಾಣವು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಗೆ ಒಂದು ಪ್ರಮುಖ ನಿಲ್ದಾಣವಾಗಿದೆ. ಈ ನಿಲ್ದಾಣವು 2,257 ಮೀ (7,405 ಅಡಿ) ಎತ್ತರದಲ್ಲಿದೆ, ಇದು ಭಾರತದ ಅತ್ಯುನ್ನತ ರೈಲ್ವೆ ನಿಲ್ದಾಣ ಮತ್ತು ವಿಶ್ವದ 14 ನೇ ಅತಿ ಎತ್ತರದ ರೈಲ್ವೆ ನಿಲ್ದಾಣವಾಗಿದೆ. ಅತ್ಯುನ್ನತ ಸ್ಥಾನದ ಹೊರತಾಗಿ, ಘುಮ್ ವಿಶ್ವದ ಅತ್ಯಂತ ಸುಂದರವಾದ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.

ಅಂದ್ಹಾಗೆ ಚೀನಾದ ಸ್ವಾಯತ್ತ ಟಿಬೆಟ್ ಪ್ರದೇಶದ ತಂಗುಲ ರೈಲ್ವೆ ನಿಲ್ದಾಣವು ವಿಶ್ವದ ಅತಿ ಎತ್ತರದ ರೈಲು ನಿಲ್ದಾಣವಾಗಿದೆ. ಇದು 5,068 ಮೀ (16,627 ಅಡಿ) ಎತ್ತರದಲ್ಲಿದೆ.

4.    ಭಾರತದಲ್ಲಿ ಗರಿಷ್ಠ ಫ್ಲಾಟ್ ಫಾರ್ಮ್ ಗಳನ್ನ ಹೊಂದಿರುವ ರೈಲು ನಿಲ್ದಾಣ – ಹೌರಾ

ಇದು ಭಾರತದ ಅತಿ ಹಳೆಯ ಹಾಗೂ ಪಾರಂಪರಿಕ ರೈಲು ನಿಲ್ದಾಣ ಅಂತಾನೇ ಹೇಳಬಹುದು.  ಇದೇ ರೈಲು ನಿಲ್ದಾಣದ ಮೂಲಕ ಅತಿ ಹೆಚ್ಚಿನ ಜನರು ಪಶ್ಚಿಮ ಬಂಗಾಳ ಪ್ರವೇಶ ಮಾಡ್ತಾರೆ. ಈ ರೈಲು ನಿಲ್ದಾಣವೂ ರೈಲ್ವೆ ನಿಲ್ದಾಣವು ತನ್ನ ಪೋರ್ಟ್ಫೋಲಿಯೊದಲ್ಲಿ ಅನೇಕ ಅದ್ಭುತ ಸಾಧನೆಗಳನ್ನು ಹೊಂದಿದೆ. ಹೌರಾ ರೈಲ್ವೆ ನಿಲ್ದಾಣ ಸಂಕೀರ್ಣವು ಭಾರತದಲ್ಲಿ ಗರಿಷ್ಠ ಸಂಖ್ಯೆಯ ವೇದಿಕೆಗಳನ್ನು ಹೊಂದಿದೆ. ನಿಲ್ದಾಣವು ಎರಡು ಸಂಕೀರ್ಣಗಳಲ್ಲಿ ಹರಡಿರುವ 23 ಪ್ಲಾಟ್‌ಫಾರ್ಮ್‌ಗಳಿಂದ ಕೂಡಿದೆ. ಇಲ್ಲಿ ಪ್ರತಿದಿನ ಸುಮಾರು 600 ಪ್ಯಾಸೆಂಜರ್  ರೈಲುಗಳು ಸಂಚರಿಸುತ್ತವೆ. ಹೌರಾ ಭಾರತದಾದ್ಯಂತ 1273 ಕ್ಕೂ ಹೆಚ್ಚು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ.ಅಂದ್ಹಾಗೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ವಿಶ್ವದ ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲ್ವೆ ನಿಲ್ದಾಣವಾಗಿದೆ. ಈ ಬೃಹತ್ ನಿಲ್ದಾಣ ಸಂಕೀರ್ಣವು 44 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ.

5.   ವಿಶ್ವದ 3ನೇ ಅತಿ ಉದ್ದದ ಪ್ಲಾಟ್ ಫಾರ್ಮ್ – ಖರಗ್ ಪುರ್

ಈ ಪ್ರಸಿದ್ಧ ರೈಲ್ವೆ ನಿಲ್ದಾಣವನ್ನು 1898 ರಲ್ಲಿ ಸ್ಥಾಪನೆಯಾಯ್ತು. ಅಂದಿನಿಂದ ಪಶ್ಚಿಮ ಬಂಗಾಳವನ್ನು ದಕ್ಷಿಣ ಭಾರತಕ್ಕೆ ಸಂಪರ್ಕಿಸುತ್ತಿದೆ. ಖರಗ್‌ ಪುರವು ವಿಶ್ವದ 3ನೇ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿದೆ. ಇದರ ವಿಸ್ತೀರ್ಣವು ,072.5 ಮೀ (3,519 ಅಡಿ). ಆದರೆ, ಗೋರಖ್‌ಪುರ ರೈಲು ನಿಲ್ದಾಣವನ್ನು ಮರುರೂಪಿಸಿದ ನಂತರ, ಅದು ಮೊದಲನೇ ಸ್ಥಾನ ಪಡೆಯಿತು. ಖರಗ್‌ಪುರ ರೈಲು ನಿಲ್ದಾಣವು ಅತಿ ಉದ್ದದ ರೈಲು ನಿಲ್ದಾಣದಿಂದ 3ನೇ ಸ್ಥಾನಕ್ಕೆ ಕುಸಿಯಿತು.  ಇಂದು, ಇದು ವಿಶ್ವದ ಮೂರನೇ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಆಗಿದೆ. ಅಂದ್ಹಾಗೆ ಕೇರಳದ ಕೊಲ್ಲಂ ಜಂಕ್ಷನ್ 2ನೇ ಸ್ಥಾನವನ್ನು ಹೊಂದಿದೆ.

ಮೂರು ಭಾರತೀಯ ರೈಲ್ವೆ ನಿಲ್ದಾಣಗಳು – ಗೋರಖ್‌ಪುರ, ಕೊಲ್ಲಂ ಮತ್ತು ಖರಗ್‌ಪುರ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ಗಳನ್ನ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

 6.   ದೇವಾಲಯಗಳ ನೆನಪಿಸುವ ನಿಲ್ದಾಣಗಳು – ಬೇಲೂರ್ ಮಾಥ್ , ದಕ್ಷಿಣೇಶ್ವರ

ಬೇಲೂರು ಮಠ ಮತ್ತು ದಕ್ಷಿಣೇಶ್ವರ ಕಾಳಿ ದೇವಸ್ಥಾನ ಕೋಲ್ಕತ್ತಾದ ಸಮೀಪವಿರುವ ಆಧ್ಯಾತ್ಮಿಕ ತಾಣಗಳಾಗಿವೆ. ಮತ್ತ ಎರೆಡೂ  ತಮ್ಮದೇ ಆದ ರೈಲ್ವೆ ನಿಲ್ದಾಣಗಳನ್ನು ಹೊಂದಿವೆ. ಈ ರೈಲ್ವೆ ನಿಲ್ದಾಣಗಳು ಮುಖ್ಯ ದೇವಾಲಯದಿಂದ ಕೇವಲ ಒಂದೆರಡು ನಿಮಿಷಗಳ ಪ್ರಯಾಣದ ಅತರದಲ್ಲಿವೆ. ಆದ್ರೆ ಈ ರೈಲು ನಿಲ್ದಾಣಗಳು ವೈಶಿಷ್ಟತೆ ಪಡೆದಿರುವುದು ಅವುಗಳ ವಾಸ್ತುಶಿಲ್ಪದಿಂದಾಗಿ.ಹೌದು.. ಬೇಲೂರು ಮಠ ಮತ್ತು ದಕ್ಷಿಣೇಶ್ವರ ರೈಲು ನಿಲ್ದಾಣಗಳು ಎಷ್ಟು ವಿಶಿಷ್ಟವಾಗಿವೆ ಎಂದರೆ ಅವುಗಳ ವಾಸ್ತುಶಿಲ್ಪ. ಟಿಕೆಟ್ ಕೌಂಟರ್ ಮತ್ತು ಈ ರೈಲ್ವೆ ನಿಲ್ದಾಣಗಳ ಆವರಣವು ಮುಖ್ಯ ದೇವಾಲಯಗಳ ನಿಖರವಾದ ಪ್ರತಿಕೃತಿಗಳಾಗಿವೆ, ಚಿಕಣಿ ರೂಪಗಳಲ್ಲಿ. ದಕ್ಷಿಣೇಶ್ವರ ನಿಲ್ದಾಣವು ಸೀಲ್ಡಾ-ಡಂಕುನಿ ಮಾರ್ಗದಲ್ಲಿದ್ದರೆ, ಬೇಲೂರು ಮಠವು ಹೌರಾದಿಂದ ವಿಶೇಷ ರೈಲು ಮಾರ್ಗವನ್ನು ಹೊಂದಿದೆ.  

20,70,000 ಖಾತೆಗಳನ್ನ ನಿಷೇಧಿಸಿದ WHATSAPP

ಭೂಲೋಕದ ಸ್ವರ್ಗ ಹಿಮಾಲಯದ ಬಗ್ಗೆ ತಿಳಿಯಲೇಬೇಕಾದ ರೋಮಾಂಚನಕಾರಿ ಸಂಗತಿಗಳು..!

ವಿಶ್ವದಲ್ಲೇ ಅತಿ ಹೆಚ್ಚು  ಸ್ಪಾನಿಷ್ ಮಾತನಾಡುವ 2ನೇ ದೇಶ ಕೊಲಂಬಿಯಾ…ಭಾರತದ ನಂತರ ಅತಿ ಹೆಚ್ಚು ರಾಷ್ಟ್ರೀಯ  ರಜೆಗಳು ಸಿಗುವ ದೇಶ..!

ಕಪ್ಪೆಗಳು ಸದಾ ಒಟಗುಡುವುದಕ್ಕೆ ಈ ಕಾರಣವಿದೆ..!

Tags: #saakshatvindiarailway stationstrainWest Bengal
ShareTweetSendShare
Join us on:

Related Posts

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

by Shwetha
February 18, 2026
0

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಶಾಸಕರು ಹಾಗೂ ಸಚಿವರುಗಳ ತಂಡ ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ...

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

by Shwetha
February 18, 2026
0

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಕ್ಷದ ಕಚೇರಿಗಳಿಗಾಗಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ...

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

by Shwetha
February 18, 2026
0

ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ರಾಜಕೀಯ...

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

by Shwetha
February 18, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗದ್ದಲ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಎಚ್.ಸಿ ಮಹದೇವಪ್ಪ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮದೇ ಶೈಲಿಯಲ್ಲಿ...

ಸಿಎಂ ಕಪ್ 2026: ಬ್ಯಾಡ್ಮಿಂಟನ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಚಿವ ಸುಧಾಕರ್

ಸಿಎಂ ಕಪ್ 2026: ಬ್ಯಾಡ್ಮಿಂಟನ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಚಿವ ಸುಧಾಕರ್

by Shwetha
February 18, 2026
0

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಸಿಎಂ ಕಪ್ 2026ರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 21 ಮತ್ತು 22 ರಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram