ADVERTISEMENT
Tuesday, April 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಶ್ಚಿಮ ಬಂಗಾಳದಲ್ಲಿದೆ 6 ಅತ್ಯಂತ ಭಿನ್ನ ರೈಲುನಿಲ್ದಾಣಗಳು – ಘೋಸ್ಟ್ ಸ್ಟೇಷನ್ ,  ಹೆಸರಿಲ್ಲದ ನಿಲ್ದಾಣ, ಇಂಟರೆಸ್ಟಿಂಗ್ ವಿಚಾರಗಳು..!

Namratha Rao by Namratha Rao
June 4, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪಶ್ಚಿಮ ಬಂಗಾಳದಲ್ಲಿದೆ 6 ಅತ್ಯಂತ ಭಿನ್ನ ರೈಲುನಿಲ್ದಾಣಗಳು – ಘೋಸ್ಟ್ ಸ್ಟೇಷನ್ ,  ಹೆಸರಿಲ್ಲದ ನಿಲ್ದಾಣ, ಇಂಟರೆಸ್ಟಿಂಗ್ ವಿಚಾರಗಳು..!

ಸುಮಾರು 164 ವರ್ಷಗಳ ಹಿಂದೆ  ಪಶ್ಚಿಮ ಬಂಗಾಳದ ಜನ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು.. ಇಂದು ರೈಲುಗಳು , ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ.. ಇತರೇ  ಬಹುತೇಕ ರಾಜ್ಯಗಳು ಕೇವಲ ಸಾರಿಗೆಯ ವ್ಯವಸ್ತೆ ಅನ್ನೋದಕ್ಕಿಂತ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.. ಫ್ಲಾಟ್ ಫಾರ್ಮ್ ಅಂಗಡಿಗಳು ಹೋಟೆಲ್ ಗಳು , ಕೂಲಿ ಕಾರ್ಮಿಕರು , ಟೀ ಬಿಸ್ಕೆಟ್ ಸ್ನಾಕ್ಸ್ ಮಾಡುವವರಿಂದ ಹಿಡಿದು ಟ್ಯಾಕ್ಸಿ ಆಟೋ ಚಾಲಕರು ರೈಲುನಿಲ್ದಾಣಗಳನ್ನೇ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ.

Related posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

April 6, 2026
ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

April 6, 2026

ಇನ್ನೂ ರೈಲು ನಿಲ್ದಾಣಗಳು ಅದ್ರಲ್ಲೂ ನಿಗೂಢತೆ ಅಥವ ರಹಸ್ಯಗಳು ಹಾಗೂ ವಿಭಿನ್ನತೆಗಳಿಂದ ಕೂಡಿದ ರೈಲು ನಿಲ್ದಾಣಳ ಬಗ್ಗೆ ನಾವೇನಾದರೂ ಮಾತನಾಡಿದ್ರೆ ಮೊದಲಿಗೆ ಪಶ್ಚಿಮ ಬಂಗಾಳವೇ ನೆನಪಾಗೋದು.. ಕಾರಣ ಇಲ್ಲಿನ ಕೆಲ ರೈಲು ನಿಲ್ದಾಣಗಳು ಸಾಕಷ್ಟು ರಹಸ್ಯಮಯವಾಗಿದೆ.. ಕೆಲವೊಂದು ವಿಭಿನ್ನವಾಗಿದೆ.. ಅದರದ್ದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ… ಪಶ್ಚಿಮ ಬಂಗಾಳದ ಅನೇಕ ಭಾರತೀಯ ರೈಲ್ವೆ ನಿಲ್ದಾಣಗಳು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿವೆ. ಆ ಬಗೆಗಿನ ಇಂಟರೆಸ್ಟಿಂಗ್ ಫ್ಯಾಕ್ಟ್ಸ್, ಮತ್ತು 6 ವಿಷೇಶ ರೈಲ್ವೇ ನಿಲ್ದಾನಗಳ ಬಗ್ಗೆ ತಿಳಿಕೊಳ್ಳೋಣ

1.   ಹೆಸರಿಲ್ಲದ ರೈಲು ನಿಲ್ದಾಣ – ರೈನಗರ

ಭಾರತದಲ್ಲಿ ಪ್ರತಿ ರೈಲು ನಿಲ್ದಾಣಕ್ಕೂ ಒಂದಲ್ಲಾ ಒಂದು ಹೆಸರು ಇದ್ದೇ ಇದೆ.. ಆದ್ರೆ ಹೆಸರೇ ಇಲ್ಲದ ರೈಲು ನಿಲ್ದಾಣವೊಂದು ಪಶ್ಚಿಮ ಬಂಗಾಳದಲ್ಲಿದೆ ಎಂದ್ರೆ ಆಶ್ಚರ್ಯ ಆಗದೇ ಇರುವುದಿಲ್ಲ. ಈ ನಿಲ್ದಾಣ ರೈನಾನಗರದ ಸಮೀಪವಿದೆ. ಈ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಪೂರ್ಬಾ ಬರ್ಧಮನ್ ಜಿಲ್ಲೆಯಲ್ಲಿದೆ. 2008 ರಲ್ಲಿ ಸ್ಥಾಪನೆಯಾದ ರೈಲ್ವೆ ನಿಲ್ದಾಣವು ಬಂಕುರಾ-ಮಸಾಗ್ರಾಮ್ ಮಾರ್ಗದಲ್ಲಿ ಹೆಚ್ಚಿನ ರೈಲುಗಳಿಗೆ ನಿಲುಗಡೆಯಾಗಿದೆ. ಆರಂಭದಲ್ಲಿ ಈ ನಿಲ್ದಾಣಕ್ಕೆ ರೈನಗರ ರೈಲ್ವೇ ಸ್ಟೇಷನ್ ಎಂದೇ ಹೆಸರಿಡಲಾಗಿತ್ತು.. ಆದ್ರೆ ರೈನಗರ ಮತ್ತು ರೈನಾನಗರನ ನಟ್ಟ ನಡುವೆ ಈ ನಿಲ್ದಾಣವಿರುವ ಕಾರಣ ಹೆಸರಿನ ವಿಚಾರವಾಗಿ ಎರೆಡೂ ಗ್ರಾಮಗಳ ನಡುವೆ ಕಿತ್ತಾಟ ಶುರುವಾಗಿತ್ತು. ಅನೇಕ ವಾಗ್ವಾದಗಳ ನಂತರ, ಭಾರತೀಯ ರೈಲ್ವೆ ನಿಲ್ದಾಣದ ಹೆಸರನ್ನು ಸೈನ್‌ಬೋರ್ಡ್‌ನಿಂದ ಅಳಿಸಲು ನಿರ್ಧರಿಸಿತು. ಪರಿಣಾಮವಾಗಿ ನಿಲ್ದಾಣಕ್ಕೆ ಇನ್ನೂ ಯಾವುದೇ ಹಹೆಸರಿಡಲಾಗಿಲ್ಲ. ಇದೀಗ ಈ ನಿಲ್ದಾಣ ಹೆಸರಿಲ್ಲದ ರೈಲು ನಿಲ್ದಾಣ ಅಂತಲೇ ಫೇಮಸ್ ಆಗಿದೆ. ಆದ್ರೆ  ಹೆಸರು ಸೈನ್ ಬೋರ್ಡ್ ನಿಂದ ತೆಗೆದು ಹಾಕಲಾಗಿದ್ರೂ ಸಹ ಈಗಲೂ ರೈನಾನಗರ ಹೆಸರಿನಲ್ಲೇ ಟಿಕೆಟ್ ನೀಡಲಾಗ್ತಿದೆ.   

2. ಬಂಗಾಳದ ಘೋಸ್ಟ್ ಸ್ಟೇಷನ್ – ಬೇಗುಂಕೋಡೋರ್

ಬಂಗಾಳದ ಘೋಸ್ಟ್ ಸ್ಟೇಷನ್… 1960ರ ದಶಕದಲ್ಲಿ ಸ್ಥಾಪನೆಯಾದ ಈ ನಿಗೂಢ ರೈಲು ನಿಲ್ದಾಣವಿರುವುದು ಪುರುಲಿಯಾ ಜಿಲ್ಲೆಯಲ್ಲಿ. ಆ ಕಾಲದಲ್ಲಿ ಸ್ಥಳೀಯ ಬುಡಕಟ್ಟು ರಾಣಿ, ಲಚನ್ ಕುಮಾರಿ ಬೆಗುಂಕೋಡರ್ ರೈಲ್ವೆ ನಿಲ್ದಾಣದ ನಿರ್ಮಾಣಕ್ಕಾಗಿ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿದ್ದರು. ಸ್ವಲ್ಪ ಸಮಯದ ನಂತರ, ರಾಂಚಿ ಮಾರ್ಗದಲ್ಲಿ ಬೆಗುನ್‌ಕೋಡರ್ ರೈಲ್ವೇ ನಿಲ್ದಾಣ ಅತ್ಯಂತ ಪ್ರಾಮುಖ್ಯತೆ ಪಡೆಯಿತು.. ಎಲ್ಲವೂ ಉತ್ತಮವಾಗಿಯೇ ಇತ್ತು.. ಆದ್ರೆ 1967 ರ ನಂತರ ಅಲ್ಲಿನ ಸ್ಟೇಷನ್ ಮಾಸ್ಟರ್ ಕಣ್ಣಿಗೆ ದೆವ್ವ ಭೂತ ಕಾಣಿಸಿಕೊಂಡಿದ್ದು, ವಿಚಿತ್ರ ಅನುಭವವನ್ನ ಹೇಳಿಕೊಂಡಿದ್ದರು. ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಸ್ಟೇಷನ್ ಮಾಸ್ಟರ್ ಹಾಗೂ ಆತನ ಕುಟುಂಬದವರು ಶವವಾಗಿ ಪತ್ತೆಯಾಗಿದ್ದರು.. ಅಲ್ಲಿಂದ ಈ ನಿಲ್ದಾಣದ ಬಗ್ಗೆ ಜನರಲ್ಲಿ ಆತಂಕ ಶುರುವಾಗಿತ್ತು.. ಅಷ್ಟೇ ಅಲ್ಲ ಇದಾದ ನಂತರ ಜನ ಈ ಸ್ಟೇಷನ್ ನಲ್ಲಿ ಕೆಲಸ ಮಾಡೋದಕ್ಕೂ ಹೆದರಿಕೊಳ್ಳುವಂತಾಯ್ತು,, ನಂತರ ಅಲ್ಲಿ ಕೆಲಸ ಮಾಡ;ಲು ನಿರಾಸಿದ್ದರು.. ಕ್ರಮೇಣ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತಾ ಹೋಯ್ತು..  ಸಂಜೆಯಾದ ನಂತರ ಅಂದ್ರೆ ಕತ್ತಲಾದ ನಂತರವಂತೂ ಗ್ರಮಾಸ್ಥರು ಈ ರೈಲು ನಿಲ್ದಾಣದ ಕಡೆ ತಲೆ ಹಾಕುವುದಿಲ್ಲ. ಹೀಗೆಯೇ ಮುಂದುವರೆದು ರೈಲು ನಿಲ್ದಾಣ ಸಂಪೂರ್ಣವಾಗಿ ಬಂದ್ ಆಗಿತ್ತು.. ಆದ್ರೆ 2009 ರಲ್ಲಿ ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ಹಾಗೂ ಅಂದಿನ ರೈಲ್ವೇ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರು ಈ ನಿಲ್ದಾಣವನ್ನ ಮತ್ತೊಮ್ಮೆ  ಪುನರಾರಂಭಿಸಿದ್ರು. ಬೇಗುಂಕೋಡೂರ್ ನ ಈ ಘೋಸ್ಟ್ ಸ್ಟೇಷನ್ ನಲ್ಲಿ ಒಟ್ಟು 5 ರೈಲುಗಳು ನಿಲ್ಲಿಸುತ್ತವೆ.. ಆದ್ರೆ ಲೋಕಲ್ ರೈಲುಗಳು ಈಗಲೂ ಸೂರ್ಯಾಸ್ತದ ಬಳಿಕ   ಈ ರೈಲು ನಿಲ್ದಾಣದಲ್ಲಿ  ರೈಲು ನಿಲುಗಡೆಗೆ ನಿರಾಕರಿಸುತ್ತಾರೆ. ಇನ್ನೂ ಒಂಟಿಯಾಗಿ ಜನರು ಈ ನಿಲ್ದಾಣಕ್ಕೆ ಬರೋ ಸಾಹಸ ಮಾಡೋದು ತುಂಬಾನೆ ಕಡಿಮೆ.. ಆದ್ರೆ ಅಡ್ವೆಂಚರಸ್ ಥ್ರಿಲ್ಲಿಂಗ್ ಬೇಕೋ ಅನ್ನುವಂತಹವವರಿಗೆ ಇದು ಒಳ್ಳೆ ಸ್ಪಾಟ್.  

3.     ಭಾರತದ ಅತಿ ಎತ್ತರದ ರೈಲೂ ನಿಲ್ದಾಣ  – ಘುಮ್ 

ಎತ್ತರದ ಡಾರ್ಜಿಲಿಂಗ್ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಘುಮ್ ರೈಲ್ವೆ ನಿಲ್ದಾಣವು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಗೆ ಒಂದು ಪ್ರಮುಖ ನಿಲ್ದಾಣವಾಗಿದೆ. ಈ ನಿಲ್ದಾಣವು 2,257 ಮೀ (7,405 ಅಡಿ) ಎತ್ತರದಲ್ಲಿದೆ, ಇದು ಭಾರತದ ಅತ್ಯುನ್ನತ ರೈಲ್ವೆ ನಿಲ್ದಾಣ ಮತ್ತು ವಿಶ್ವದ 14 ನೇ ಅತಿ ಎತ್ತರದ ರೈಲ್ವೆ ನಿಲ್ದಾಣವಾಗಿದೆ. ಅತ್ಯುನ್ನತ ಸ್ಥಾನದ ಹೊರತಾಗಿ, ಘುಮ್ ವಿಶ್ವದ ಅತ್ಯಂತ ಸುಂದರವಾದ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.

ಅಂದ್ಹಾಗೆ ಚೀನಾದ ಸ್ವಾಯತ್ತ ಟಿಬೆಟ್ ಪ್ರದೇಶದ ತಂಗುಲ ರೈಲ್ವೆ ನಿಲ್ದಾಣವು ವಿಶ್ವದ ಅತಿ ಎತ್ತರದ ರೈಲು ನಿಲ್ದಾಣವಾಗಿದೆ. ಇದು 5,068 ಮೀ (16,627 ಅಡಿ) ಎತ್ತರದಲ್ಲಿದೆ.

4.    ಭಾರತದಲ್ಲಿ ಗರಿಷ್ಠ ಫ್ಲಾಟ್ ಫಾರ್ಮ್ ಗಳನ್ನ ಹೊಂದಿರುವ ರೈಲು ನಿಲ್ದಾಣ – ಹೌರಾ

ಇದು ಭಾರತದ ಅತಿ ಹಳೆಯ ಹಾಗೂ ಪಾರಂಪರಿಕ ರೈಲು ನಿಲ್ದಾಣ ಅಂತಾನೇ ಹೇಳಬಹುದು.  ಇದೇ ರೈಲು ನಿಲ್ದಾಣದ ಮೂಲಕ ಅತಿ ಹೆಚ್ಚಿನ ಜನರು ಪಶ್ಚಿಮ ಬಂಗಾಳ ಪ್ರವೇಶ ಮಾಡ್ತಾರೆ. ಈ ರೈಲು ನಿಲ್ದಾಣವೂ ರೈಲ್ವೆ ನಿಲ್ದಾಣವು ತನ್ನ ಪೋರ್ಟ್ಫೋಲಿಯೊದಲ್ಲಿ ಅನೇಕ ಅದ್ಭುತ ಸಾಧನೆಗಳನ್ನು ಹೊಂದಿದೆ. ಹೌರಾ ರೈಲ್ವೆ ನಿಲ್ದಾಣ ಸಂಕೀರ್ಣವು ಭಾರತದಲ್ಲಿ ಗರಿಷ್ಠ ಸಂಖ್ಯೆಯ ವೇದಿಕೆಗಳನ್ನು ಹೊಂದಿದೆ. ನಿಲ್ದಾಣವು ಎರಡು ಸಂಕೀರ್ಣಗಳಲ್ಲಿ ಹರಡಿರುವ 23 ಪ್ಲಾಟ್‌ಫಾರ್ಮ್‌ಗಳಿಂದ ಕೂಡಿದೆ. ಇಲ್ಲಿ ಪ್ರತಿದಿನ ಸುಮಾರು 600 ಪ್ಯಾಸೆಂಜರ್  ರೈಲುಗಳು ಸಂಚರಿಸುತ್ತವೆ. ಹೌರಾ ಭಾರತದಾದ್ಯಂತ 1273 ಕ್ಕೂ ಹೆಚ್ಚು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ.ಅಂದ್ಹಾಗೆ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ವಿಶ್ವದ ಗರಿಷ್ಠ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ರೈಲ್ವೆ ನಿಲ್ದಾಣವಾಗಿದೆ. ಈ ಬೃಹತ್ ನಿಲ್ದಾಣ ಸಂಕೀರ್ಣವು 44 ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಿದೆ.

5.   ವಿಶ್ವದ 3ನೇ ಅತಿ ಉದ್ದದ ಪ್ಲಾಟ್ ಫಾರ್ಮ್ – ಖರಗ್ ಪುರ್

ಈ ಪ್ರಸಿದ್ಧ ರೈಲ್ವೆ ನಿಲ್ದಾಣವನ್ನು 1898 ರಲ್ಲಿ ಸ್ಥಾಪನೆಯಾಯ್ತು. ಅಂದಿನಿಂದ ಪಶ್ಚಿಮ ಬಂಗಾಳವನ್ನು ದಕ್ಷಿಣ ಭಾರತಕ್ಕೆ ಸಂಪರ್ಕಿಸುತ್ತಿದೆ. ಖರಗ್‌ ಪುರವು ವಿಶ್ವದ 3ನೇ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿದೆ. ಇದರ ವಿಸ್ತೀರ್ಣವು ,072.5 ಮೀ (3,519 ಅಡಿ). ಆದರೆ, ಗೋರಖ್‌ಪುರ ರೈಲು ನಿಲ್ದಾಣವನ್ನು ಮರುರೂಪಿಸಿದ ನಂತರ, ಅದು ಮೊದಲನೇ ಸ್ಥಾನ ಪಡೆಯಿತು. ಖರಗ್‌ಪುರ ರೈಲು ನಿಲ್ದಾಣವು ಅತಿ ಉದ್ದದ ರೈಲು ನಿಲ್ದಾಣದಿಂದ 3ನೇ ಸ್ಥಾನಕ್ಕೆ ಕುಸಿಯಿತು.  ಇಂದು, ಇದು ವಿಶ್ವದ ಮೂರನೇ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಆಗಿದೆ. ಅಂದ್ಹಾಗೆ ಕೇರಳದ ಕೊಲ್ಲಂ ಜಂಕ್ಷನ್ 2ನೇ ಸ್ಥಾನವನ್ನು ಹೊಂದಿದೆ.

ಮೂರು ಭಾರತೀಯ ರೈಲ್ವೆ ನಿಲ್ದಾಣಗಳು – ಗೋರಖ್‌ಪುರ, ಕೊಲ್ಲಂ ಮತ್ತು ಖರಗ್‌ಪುರ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ಗಳನ್ನ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

 6.   ದೇವಾಲಯಗಳ ನೆನಪಿಸುವ ನಿಲ್ದಾಣಗಳು – ಬೇಲೂರ್ ಮಾಥ್ , ದಕ್ಷಿಣೇಶ್ವರ

ಬೇಲೂರು ಮಠ ಮತ್ತು ದಕ್ಷಿಣೇಶ್ವರ ಕಾಳಿ ದೇವಸ್ಥಾನ ಕೋಲ್ಕತ್ತಾದ ಸಮೀಪವಿರುವ ಆಧ್ಯಾತ್ಮಿಕ ತಾಣಗಳಾಗಿವೆ. ಮತ್ತ ಎರೆಡೂ  ತಮ್ಮದೇ ಆದ ರೈಲ್ವೆ ನಿಲ್ದಾಣಗಳನ್ನು ಹೊಂದಿವೆ. ಈ ರೈಲ್ವೆ ನಿಲ್ದಾಣಗಳು ಮುಖ್ಯ ದೇವಾಲಯದಿಂದ ಕೇವಲ ಒಂದೆರಡು ನಿಮಿಷಗಳ ಪ್ರಯಾಣದ ಅತರದಲ್ಲಿವೆ. ಆದ್ರೆ ಈ ರೈಲು ನಿಲ್ದಾಣಗಳು ವೈಶಿಷ್ಟತೆ ಪಡೆದಿರುವುದು ಅವುಗಳ ವಾಸ್ತುಶಿಲ್ಪದಿಂದಾಗಿ.ಹೌದು.. ಬೇಲೂರು ಮಠ ಮತ್ತು ದಕ್ಷಿಣೇಶ್ವರ ರೈಲು ನಿಲ್ದಾಣಗಳು ಎಷ್ಟು ವಿಶಿಷ್ಟವಾಗಿವೆ ಎಂದರೆ ಅವುಗಳ ವಾಸ್ತುಶಿಲ್ಪ. ಟಿಕೆಟ್ ಕೌಂಟರ್ ಮತ್ತು ಈ ರೈಲ್ವೆ ನಿಲ್ದಾಣಗಳ ಆವರಣವು ಮುಖ್ಯ ದೇವಾಲಯಗಳ ನಿಖರವಾದ ಪ್ರತಿಕೃತಿಗಳಾಗಿವೆ, ಚಿಕಣಿ ರೂಪಗಳಲ್ಲಿ. ದಕ್ಷಿಣೇಶ್ವರ ನಿಲ್ದಾಣವು ಸೀಲ್ಡಾ-ಡಂಕುನಿ ಮಾರ್ಗದಲ್ಲಿದ್ದರೆ, ಬೇಲೂರು ಮಠವು ಹೌರಾದಿಂದ ವಿಶೇಷ ರೈಲು ಮಾರ್ಗವನ್ನು ಹೊಂದಿದೆ.  

ಈ ದೇಶದಲ್ಲಿ ಸಿಗುತ್ತೆ 7 KG ತೂಕದ ಹೂ… ಕರೆನ್ಸಿಯಲ್ಲಿದೆ ಗಣೇಶನ ಚಿತ್ರ…. ಇಂಡೋನೇಷ್ಯಾದ ಇಂಟರೆಸ್ಟಿಂಗ್ ಫ್ಯಾಕ್ಟ್ಸ್..! 

ಉತ್ತರ ಪ್ರದೇಶ : ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆ ಮೇಲೆ ನಾಲ್ವರು ವೈದ್ಯರಿಂದ ಸಾಮೂಹಿಕ ಅತ್ಯಾಚಾರ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 8 ಆಯುರ್ವೇದ ಮಾರ್ಗಗಳು

Tags: mysterious railwaystationuniq railways stationsWest Bengal
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ

by Shwetha
April 6, 2026
0

ರಾಜ್ಯದ ಅನ್ನದಾತರಿಗೆ ಮುಂಗಾರು ಹಂಗಾಮಿನ ಸಮಯದಲ್ಲಿ ಎದುರಾಗುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಉದ್ದೇಶಪೂರ್ವಕವಾಗಿ...

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

ಖಜಾನೆ ಖಾಲಿ ಕಿಸೆಯಲ್ಲಿ ಕಾಸಿಲ್ಲ ಸಿದ್ದರಾಮಯ್ಯ ಪಾಪರ್ ಸರ್ಕಾರದ ಜಂಭದ ಸಾಹುಕಾರ ಬೊಮ್ಮಾಯಿ ವಾಗ್ದಾಳಿ

by Shwetha
April 6, 2026
0

ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆಯಲ್ಲಿ ಬಿಡಿಗಾಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲವನ್ನೂ ಕಳೆದುಕೊಂಡು ಕೇವಲ ಗರಿಗರಿ ಬಟ್ಟೆ ಹಾಕಿಕೊಂಡು ತಿರುಗುವ ಜಂಭದ ಸಾಹುಕಾರನಂತಾಗಿದೆ. ಮನೆಗೆ ಸಾಲಗಾರರು ಮುತ್ತಿಗೆ...

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಅಮೆರಿಕದ ಒಪ್ಪಿಗೆಯಿಲ್ಲದೆ ಒಂದು ಹನಿ ತೈಲ ತರುವಂತಿಲ್ಲ : ದೊಡ್ಡಣ್ಣನ ಅಣತಿಯಂತೆ ಕುಣಿಯುತ್ತಿದೆ ದೆಹಲಿ ಸರ್ಕಾರ ; ಮೋದಿ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

by Shwetha
April 6, 2026
0

ಅಸ್ಸಾಂ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಅಸ್ಸಾಂನ ಗೋಲಾಘಾಟ್...

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಪಾಕಿಸ್ತಾನದ ಉದ್ಧಟತನ ಭಾರತ ನಮ್ಮ ತಂಟೆಗೆ ಬಂದರೆ ಕಲ್ಕತ್ತಾ ಬಾಂಬೆವರೆಗೆ ನುಗ್ಗುತ್ತೇವೆ ಎಂದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್

by Shwetha
April 6, 2026
0

ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ...

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

ಕೇಂದ್ರದತ್ತ ಬೊಟ್ಟು ಮಾಡುವ ಬದಲು ಆಟೋ ಚಾಲಕರಿಗೆ 6ನೇ ಗ್ಯಾರಂಟಿ ಕೊಡಿ ಸ್ವಾಮಿ : ಎಚ್ ಡಿ ಕುಮಾರಸ್ವಾಮಿ

by Shwetha
April 6, 2026
0

ಕೇಂದ್ರ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಗೂಬೆ ಕೂರಿಸುವ ಬದಲು ಎಲ್ ಪಿ ಜಿ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ 6ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram