Hyderabad | ಅಗ್ನಿ ಅವಘಡ : 11 ಮಂದಿ ಸಜೀವ ದಹನ
ಸಿಕಂದರಾಬಾದ್ನ ಬೋಯಾಗುಡಾದಲ್ಲಿ ಘಟನೆ
ಟಿಂಬರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ
ದುರಂತದಲ್ಲಿ 11 ಮಂದಿ ಕಾರ್ಮಿಕರು ಸಜೀವ ದಹನ
ಅಗ್ನಿಶಾಮಕ ದಳದ ಎಂಟು ತಂಡಗಳಿಂದ ಕಾರ್ಯಾಚರಣೆ
ಹೈದರಾಬಾದ್ : ಟಿಂಬರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 11 ಮಂದಿ ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಸಿಕಿಂದರಾಬಾದ್ ನ ಬೋಯಾಗುಡಾದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಮೂರು ಗಂಟೆ ಸುಮಾರಿಗೆ ಡಿಪೋದ ಗೋದಾಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ಮರದ ದಿಮ್ಮಿ, ಕಟ್ಟಿಗೆಗಳ ಸಂಗ್ರಹ ಆಗಿದ್ದರಿಂದ ಬಹುಬೇಗನೇ ಬೆಂಕಿ ಕೆನ್ನಾಲಿಗೆ ಇಡೀ ಗೋದಾಮಿಯನ್ನ ಆಚರಿಸಿಕೊಂಡಿದೆ.
ಈ ವೇಳೆ ಕಾರ್ಮಿಕರು ಮೊದಲನೇ ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಸುಮಾರು 12 ಕಾರ್ಮಿಕರು ಇದ್ದರು. ಅದರಲ್ಲಿ ಒಬ್ಬ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಕಾರ್ಮಿಕರು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ದಟ್ಟವಾದ ಹೊಗೆಯೊಂದಿಗೆ ಬೆಂಕಿ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿದಿದೆ. ಕೂಡಲೇ
ಸ್ಥಳೀಯರು ಅಗ್ನಿಶಾಮಕ ದಳ, ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸುಮಾರು ಎಂಟು ತಂಡಗಳು ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ ಬೆಂಕಿಯ ತೀವ್ರತೆ ವಿಪರೀತವಾಗಿದ್ದ ಪರಿಣಾಮ ರಕ್ಷಣೆ ಕಷ್ಟವಾಯಿತು ಎಂದು ವರದಿಯಾಗಿದೆ. 11 workers burned to death Fire in Hyderabad