ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ, ಬೆಳೆ ಪರಿಹಾರ ಡಬಲ್
ರಾಜ್ಯ ಸರ್ಕಾರವು ಬೆಳೆಹಾನಿ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರದ ಜೊತೆಗೆ ಹೆಚ್ಚುವರಿ ಪರಿಹಾರ ನೀಡಲು ತೀರ್ಮಾನಿಸಿದೆ. ಈ ಮೂಲಕ ರಾಜ್ಯ ಸರ್ಕಾರ ( Karnataka Government ) ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಇದರಿಂದ ನೆರೆ ಸಂತ್ರಸ್ತರಿಗೆ SDRF ದರಕ್ಕಿಂತ ಹೆಚ್ಚಿಗೆ ಸಿಗಲಿದೆ. 2021ನೇ ಜುಲೈ ನಿಂದ ನವೆಂಬರ್ ವರೆಗೆ ಉಂಟಾದ ನೆರೆ ಹಾವಳಿಯಿಂದ 12.52 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಂಡ ರೈತರಿಗೆ ಪರಿಹಾರ ದೊರೆಯಲಿದೆ.
ಮಳೆಯಾಶ್ರಿತ ಬೆಳೆ ಪರಿಹಾರಕ್ಕಾಗಿ ಎಸ್ ಡಿ ಆರ್ ಎಪ್ ಮಾರ್ಗಸೂಚಿ ಪ್ರಕಾರ 6,800 ನೀಡಿದರೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 6800 ನೀಡಿ ಒಟ್ಟು 13600 ರೂ ಪರಿಹಾರ ಧನ ನೀಡಲಿದೆ. ನೀರಾವರಿ ಬೆಳೆ ಪರಿಹಾರಕ್ಕೆ ರೂ.13,500 ಎಸ್ ಡಿ ಆರ್ ಎಫ್ ಮಾರ್ಗಸೂಚಿ ದರವನ್ನ ರಾಜ್ಯ ಸರ್ಕಾರದ ದುಪ್ಪಟ್ಟುಗೊಳಿಸಿ ರೂ.25,500 ನಿಗದಿ ಪಡಿಸಿದೆ. ತೋಟಗಾರಿಕೆ ಬೆಳೆಹಾನಿ ಪರಿಹಾರಕ್ಕೆ 18,000 ಇದ್ದಂತ ಪರಿಹಾರಕ್ಕೆ ರೂ.10 ಸಾವಿರ ಸೇರಿಸಿ 28 ಸಾವಿರಕ್ಕೆ ಪರಿಷ್ಕರಿಸಲಾಗಿದೆ..
ಸಂತ್ರಸ್ತರ ನೆರವಿಗೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ;
Chief Minister @BSBommai headed State Government's significant decision to benefit distressed farmers. pic.twitter.com/cA4hiSMQoQ
— CM of Karnataka (@CMofKarnataka) December 28, 2021