ಸೇತುವೆಯಿಂದ ನರ್ಮದಾ ನದಿಗೆ ಬಿದ್ದ ಬಸ್ 12 ಮಂದಿ ಸಾವು …
ಮಹಾರಾಷ್ಟ್ರಕ್ಕೆ ತೆರಳುತಿದ್ದ ಬಸ್ ನರ್ಮದಾ ನದಿಗೆ ಬಿದ್ದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 15 ಮಂದಿಯನ್ನ ರಕ್ಷಿಸಲಾಗಿದೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಎಂಎಸ್ಆರ್ಟಿಸಿ) ಸೇರಿದ ಬಸ್ ಮಧ್ಯಪ್ರದೇಶದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿತ್ತು. ಈ ವೇಳೆ ಧಾರ್ ಮತ್ತು ಖಾರ್ಗೋನ್ ಗಡಿಯ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ ನಂ.3 ರಲ್ಲಿ (ಆಗ್ರಾ-ಮುಂಬೈ ರಸ್ತೆ) ಸೇತುವೆ ಮುರಿದು ಬಿದ್ದ ಪರಿಣಾಮ ಬಸ್ ನದಿಗೆ ಬಿದ್ದಿದೆ.
Deepest condolences to the people who died in the fall of a bus full of passengers in the Narmada river #MadhyaPradesh .#BusAccident pic.twitter.com/BArWozmpm0
— 𝓚𝓞𝓜𝓐𝓛 𝓢𝓗𝓐𝓡𝓜𝓐 (@Komal_Sharma11) July 18, 2022
30 ರಿಂದ 32 ಜನರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. 12 ಮಂದಿ ಸಾವನ್ನಪ್ಪಿದ್ದು, 15 ಮಂದಿಯನ್ನ ರಕ್ಷಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಕೋರಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ. ನದಿಯ ಪ್ರವಾಹ ಹೆಚ್ಚಾಗಿರುವುದರಿಂದ ಕಾರ್ಯಚರಣೆಗೆ ತಡವಾಗುತ್ತಿದೆ.
Very sad #breakingnews
12 killed in #MadhyaPradesh, bus falls into #Narmada river at Khargone, May their departed souls rest in peace, "Om Shanti" #heatwave Chan #yks2022tayfa नर्मदा नदी Odia #BusAccident pic.twitter.com/OVr4feORll— Amrita Singh (@AmritaSin1) July 18, 2022