ನನ್ನ ಆಟ ಇನ್ನೂ ಮುಗಿದಿಲ್ಲ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ತಂಡ ಸಂಕಷ್ಟದಲ್ಲಿದ್ದಾಗ ಶಹಬಾಜ್ ಅಹ್ಮದ್ ಜತೆಗೂಡಿ ಇನ್ನಿಂಗ್ಸ್ ಕಟ್ಟಿದರು. ಅಲ್ಲದೇ ಸಂಚಲನ ಗೆಲುವಿನಲ್ಲಿ ಡಿಕೆ ಪ್ರಮುಖ ಪಾತ್ರವಹಿಸಿ ಅಭಿಮಾನಿಗಳಿಂದಿ ಡಿ ಕೆ ಸಾಬ್ ಅಂತಾ ಕರೆಸಿಕೊಳ್ಳುತ್ತಿದ್ದಾರೆ.
ಅಂದಹಾಗೆ ದಿನೇಶ್ ಕಾರ್ತಿಕ್ ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದವರು. ಆದ್ರೆ ಆ ತಂಡದ ಪರ ಡಿಕೆ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೂ ಮೆಗಾ ಹರಾಜಿನಲ್ಲಿ ಡಿ.ಕೆ.ಗೆ ರಾಯಲ್ ಆರ್ ಸಿಬಿ ರೂಪಾಯಿ 5 ಕೋಟಿ 50 ಲಕ್ಷ ಕೊಟ್ಟು ಖರೀದಿಸಿತ್ತು.
ಅದಕ್ಕೆ ತಕ್ಕಂತೆ ದಿನೇಶ್ ಕಾರ್ತಿಕ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆರ್ ಸಿಬಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಈ ಋತುವಿನಲ್ಲಿ ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ, ಅವರು ಪಂಜಾಬ್ ವಿರುದ್ಧ 32 , ಕೆಕೆಆರ್ ವಿರುದ್ಧ 14 ಮತ್ತು ರಾಜಸ್ಥಾನ ವಿರುದ್ಧ 44 ಗಳಿಸಿದ್ದಾರೆ. ವಿಶೇಷ ಏನಂದರೇ ದಿನೇಶ್ ಈ ಮೂರು ಮ್ಯಾಚ್ ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಈ ಕ್ರಮದಲ್ಲಿ ಮಂಗಳವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಬ್ಯಾಟಿಂಗ್ ಗೆ ಕ್ರಿಕೆಟ್ ಪಂಡಿತರು ಕ್ಲೀನ್ ಬೌಲ್ಡ್ ಆಗಿದ್ದಾರೆ.
ದಿನೇಶ್ ಕಾರ್ತಿಕ್ ಅತ್ಯುತ್ತಮ ಮ್ಯಾಚ್ ಫಿನಿಷರ್ ಎನ್ನುತ್ತಾ ಹೊಗಳುತ್ತಿದ್ದಾರೆ. ಇನ್ನು ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ದಿನೇಶ್ ಕಾರ್ತಿಕ್, ಕ್ರಿಕೆಟಿಗನಾನಿ ನನ್ನ ಆಟ ಇನ್ನೂ ಮುಗಿದಿಲ್ಲ ಎಂದಿದ್ದಾರೆ. ಆ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ಮತ್ತಷ್ಟು ಅಬ್ಬರಿಸುವ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ನಾನು ಸ್ವಲ್ಪ ಚೆನ್ನಾಗಿ ಆಡಿದ್ದರೆ ಚೆನ್ನಾಗಿತ್ತು. ಹೀಗಾಗಿ ಈ ಬಾರಿ ಹೇಗಾದರೂ ಮಾಡಿ ಮಿಂಚಬೇಕು ಎಂಬ ಪ್ಲಾನ್ ಹಾಕಿಕೊಂಡಿದ್ದೇನೆ.
ನಾನು ನೆಟ್ಸ್ನಲ್ಲಿ ಕಷ್ಟಪಡುತ್ತಿದ್ದೇನೆ. ನನಗೆ ತರಬೇತಿ ನೀಡಿದ ವ್ಯಕ್ತಿ ಈ ಎಲ್ಲಾ ಶ್ರೇಯಗಳಿಗೆ ಅರ್ಹರು. ವಾಸ್ತವವಾಗಿ ಪ್ರತಿ ಬಾರಿಯೂ .. ನನಗೇ ನಾನೇ ‘ನಿನ್ನ ಕೆಲಸ ಮುಗಿದಿಲ್ಲ’ ಎಂದು ಹೇಳಿಕೊಳ್ಳುತ್ತೇನೆ.
ನಾನು ಇನ್ನೂ ಕ್ರಿಕೆಟ್ ಆಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ. ಟೀಕೆಗಳಿಗೆ ಬ್ಯಾಟ್ ನಿಂದ ಉತ್ತರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. dinesh-karthik-says-was-telling-himself-i-am-not-done-yet