ಜಮ್ಮು ಕಾಶ್ಮೀರಕ್ಕೆ 21 ಹೊಸ ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು
ಜಮ್ಮು ಕಾಶ್ಮೀರ, ಸೆಪ್ಟೆಂಬರ್ 28 : ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 21 ಹೊಸ ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಕೇಂದ್ರ ಸರಕಾರ ಘೋಷಿಸಿದೆ. ಉದ್ದೇಶಿತ ಫಲಾನುಭವಿಗಳ ಆರೋಗ್ಯ ರಕ್ಷಣೆಯ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಮಗ್ರ ಸ್ವಾಸ್ಥ್ಯ ಮಾದರಿಯನ್ನುನಿರ್ಮಿಸಲು ಇದು ಸಹಕಾರಿಯಾಗಲಿದೆ.
ಆರೋಗ್ಯಕರ ಜೀವನಶೈಲಿ, ಆಹಾರ, ಯೋಗ ಮತ್ತು ಔಷಧೀಯ ಸಸ್ಯಗಳ ಮೂಲಕ ರೋಗಗಳನ್ನು ತಡೆಗಟ್ಟಲು ಸ್ವ-ಆರೈಕೆಗಾಗಿ ಜನಸಾಮಾನ್ಯರಿಗೆ ಅಧಿಕಾರ ನೀಡುವುದರ ಮೂಲಕ ಆಯುಷ್ ಸಹಾಯವಾಗಲಿದೆ. ಈ 21 ಕೇಂದ್ರಗಳನ್ನು ಆಯುಷ್ಮಾನ್ ಭಾರತ್ ಉಪಕ್ರಮದಲ್ಲಿ ಸ್ಥಾಪಿಸಲಾಗಿದೆ.
ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮವು ಅಗತ್ಯವಿರುವವರಿಗೆ ಸೇವೆಗಳನ್ನು ಒದಗಿಸುವುದಲ್ಲದೆ, ಆಯುಷ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸಲು ಇದು ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಭದರ್ವಾದಲ್ಲಿ ಹಾರ್ವೆಸ್ಟ್ ಮ್ಯಾನೇಜ್ಮೆಂಟ್ ಸೆಂಟರ್ನ ಭೂಮಿ ಪೂಜೆಯ ನೆರವೇರಿಸಿದಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಶುಕ್ರವಾರ ಕೇಂದ್ರಾಡಳಿತ ಪ್ರದೇಶದಲ್ಲಿ ಈ 21 ಆಯುಷ್ ಕೇಂದ್ರಗಳನ್ನು ಪ್ರಾರಂಭಿಸಿದರು.
ಕೇಂದ್ರ ರಾಜ್ಯ ಸಚಿವ ಆಯುಷ್ ಶ್ರೀಪಾದ್ ನಾಯಕ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಔಷಧೀಯ ಸಸ್ಯಗಳ ಹಾರ್ವೆಸ್ಟ್ ನಂತರ ನಿರ್ವಹಣಾ ಕೇಂದ್ರವು ಸ್ಥಳೀಯ ಜನರು ಬೆಳೆಸಿದ ಮತ್ತು ಸಂಗ್ರಹಿಸಿದ ಕಚ್ಚಾ ಗಿಡಮೂಲಿಕೆಗಳ ಉತ್ಪನ್ನಗಳನ್ನು ಒಣಗಿಸುವುದು, ವಿಂಗಡಿಸುವುದು, ಸಂಸ್ಕರಣೆ, ಪ್ರಮಾಣೀಕರಣ, ಪ್ಯಾಕೇಜಿಂಗ್ ಮತ್ತು ಸುರಕ್ಷಿತ ಸಂಗ್ರಹಣೆಗಾಗಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಗುಣಮಟ್ಟಕ್ಕೆ ಅನುಸಾರವಾಗಿ ಉತ್ತಮ ಬೆಲೆಯನ್ನು ಪಡೆಯುವುದರ ಜೊತೆ ರೈತರ ಆದಾಯ ವೃದ್ಧಿಸುತ್ತದೆ. ನಾಯಕ್ ತಮ್ಮ ಭಾಷಣದಲ್ಲಿ, ಭದರ್ವಾ ಪ್ರದೇಶದ ಹಾರ್ವೆಸ್ಟ್-ನಂತರದ ನಿರ್ವಹಣಾ ಘಟಕ ಇಲ್ಲಿಯ ಜನರ ಬಹುದಿನಗಳ ಬೇಡಿಕೆಯಾಗಿದ್ದು ಇದು ಅನೇಕ ಹಿಮಾಲಯದ ಔಷಧೀಯ ಸಸ್ಯ ಪ್ರಭೇದಗಳ ಕೃಷಿಗೆ ಪೂರಕವಾಗಲಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಕಾರ್ಯಕ್ರಮವನ್ನು ಜಾರಿಗೆ ತರುವಲ್ಲಿ ಕೇಂದ್ರಾಡಳಿತ ಅಧಿಕಾರಿಗಳ ಪ್ರಯತ್ನವನ್ನು ಸಚಿವರು ಶ್ಲಾಘಿಸಿದರು.