ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ರಂಗೇರಿದ್ದು, ಮೊದಲ ಹಂತದ ಕಣದಲ್ಲಿ 247 ಜನ ಉಳಿದಿದ್ದಾರೆ. ಅಲ್ಲದೇ, 53 ಜನರ ನಾಮಪತ್ರ ತಿರಸ್ಕೃತವಾಗಿದೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಏ. 8 ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 6ರಂದು ಇಬ್ಬರು ಸೇರಿದಂತೆ ಇಂದು 52 ನಾಮಪತ್ರ ಹಿಂಪಡೆದಿದ್ದಾರೆ. ಕಣದಲ್ಲಿ ಈಗ 247 ಅಭ್ಯರ್ಥಿಗಳಿದ್ದು, ಅವರ ಪೈಕಿ ಪುರುಷರು 226 ಹಾಗೂ ಮಹಿಳಾ ಅಭ್ಯರ್ಥಿಗಳು 21 ಜನ ಉಳಿದಿದ್ದಾರೆ.
ಉಡುಪಿ-ಚಿಕ್ಕಮಗಳೂರು: 10, ಹಾಸನ: 15, ದಕ್ಷಿಣ ಕನ್ನಡ: 9, ಚಿತ್ರದುರ್ಗ: 20, ತುಮಕೂರು: 18, ಮಂಡ್ಯ: 14, ಮೈಸೂರು: 18, ಚಾಮರಾಜನಗರ: 14, ಬೆಂಗಳೂರು ಗ್ರಾಮೀಣ: 15, ಬೆಂಗಳೂರು ಉತ್ತರ: 21, ಬೆಂಗಳೂರು ಕೇಂದ್ರ: 24, ಬೆಂಗಳೂರು ದಕ್ಷಿಣ: 22, ಚಿಕ್ಕಬಳ್ಳಾಪುರ: 29, ಕೋಲಾರ: 18 ಜನರು ಕಣದಲ್ಲಿ ಉಳಿದಿದ್ದಾರೆ.