ಗುಡಿಸಿಲಿಗೆ ಬೆಂಕಿ ಬಿದ್ದು ಒಂದೇ ಕುಟುಂಬದ 7 ಮಂದಿ ಸಜೀವ ದಹನ
ಗುಡಿಸಿನಲ್ಲಿ ವಾಸಿಸುತ್ತಿದದ್ದ ಐವರು ಮಕ್ಕಳು ಸರಿದಂತೆ ಒಂದೇ ಕುಟುಂಬದ ಏಳು ಮಂದಿ ಬೆಂಕಿ ಅಫಘಾತದಲ್ಲಿ ಸುಟ್ಟು ಕರಕಲಾಗಿರುವ ಘಟನೆ ಪಂಜಾಬ್ ರಾಜ್ಯದಲ್ಲಿ ನಡೆದಿದೆ.
ಪಂಜಾಬ್ ನ ಲುಧಿಯಾನ ನಗರದ ಕೈಗಾರಿಕಾ ನಗರದಲ್ಲಿರುವ ಕೊಳೆಗೇರಿಯ ಗುಡಿಸಿನಲ್ಲಿ ಬೆಂಕಿ ಕಾಣಿಸಿಕೊಂಡು ಈ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಗುಡಿಸಲಿಲ್ಲಿ ಇರದಿದ್ದ ಕುಟುಂಬದ ಒಬ್ಬ ಸದಸ್ಯ ಮಾತ್ರ ಬದುಕುಳಿದಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಮೀಪದ ಕಸದ ತೊಟ್ಟಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು ಇಲ್ಲಿಂದ ಗುಡಿಸಿಲಿಗೆ ಬೆಂಕಿ ತಗುಲಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತಪಟ್ಟವರನ್ನ ಬಿಹಾರದಿಂದ ವಲಸೆ ಬಂದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸಿದಾಗ ಅವರು ಮಲಗಿದ್ದರು ಎಂದು ಲುಧಿಯಾನದ ಸಹಾಯಕ ಪೊಲೀಸ್ ಆಯುಕ್ತ (ಪೂರ್ವ) ಸುರೀಂದರ್ ಸಿಂಗ್ ಹೇಳಿದ್ದಾರೆ.