ನವದೆಹಲಿ: ದೇಶದೆಲ್ಲೆಡೆ ಕೊರೊನಾ ನಡುವೆ 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು..
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಸಲ್ಲಿಸಿದ ಪ್ರತಿಯೊಬ್ಬರಿಗೂ ನಮನ ಸಲ್ಲಿಸುವ ಸಂದರ್ಭ ಇದು. ಅನೇಕರ ಬಲಿದಾನಗಳ ಪರಿಣಾಮ ಭಾರತ ಸ್ವಾತಂತ್ರವಾಗಿದೆ. ಇಂದು ಕೊರೊನಾದಿಂದಾಗಿ ಮಕ್ಕಳು ನಮ್ಮ ಕಣ್ಣೆದುರು ಕಾಣುತ್ತಿಲ್ಲ. ಆದರೆ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ ಆದಷ್ಟು ಬೇಗ ಎಲ್ಲವೂ ಸರಿ ಹೋಗಲಿದೆ. ವೈದ್ಯರು, ನರ್ಸ್ ಸೇರಿದಂತೆ ಕೊರೊನಾ ವಾರಿಯರ್ಸ್ಗೆ ನಮನ ಸಲ್ಲಿಸುವ ಸಮಯ ಇದು, ದೇಶವನ್ನು ಆರೋಗ್ಯವಾಗಿಡಲು ಸಾಕಷ್ಟು ಮಂದಿ ಪ್ರಾಣವನ್ನು ತೆತ್ತಿದ್ದಾರೆ. ಅವರಿ ಅಭಿನಂದನೆ ಸಲ್ಲಿಸಲೇಬೇಕು ಎಂದು ಕೊರೊನಾ ವಾರಿಯರ್ಸ್ ಗಳನ್ನು ಮೋದಿ ಅಭಿನಂದಿಸಿದರು.
ಸಂಕಲ್ಪ ಮಾಡುವ ಅಗತ್ಯವಿದೆ,ಮುಂದಿನ ವರ್ಷ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತೇವೆ, ಮುಂದಿನ ಎರಡು ವರ್ಷಗಳಿಗೆ ದೊಡ್ಡ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ. ಹೊಸ ಪರ್ವದ ರೀತಿಯಲ್ಲಿ ಆಚರಣೆ ಮಾಡೋಣ. ನಮ್ಮ ಪೂರ್ವಜರು ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಭಾರತದ ಪರಂಪರೆ, ಸಂಸ್ಕೃತಿಯನ್ನು ಹಾಳು ಮಾಡಲು ಸಾಕಷ್ಟು ಮಂದಿ ಕೆಲಸ ಮಾಡಿದ್ದರು. ಆದರೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದೆ. 30 ಕೋಟಿ ಜನರು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಾರೆ ಎನ್ನುವ ನಂಬಿಕೆ ಇದೆ. ಭಾರತ ಒಮ್ಮೆ ನಿರ್ಧರಿಸಿದರೇ ಅದನ್ನು ಮಾಡಿ ತೋರಿಸುತ್ತೆ ಎಂದು ಆತ್ಮ ನಿರ್ಭರ್ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ.