ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಾಹಿತ್ಯ ಸರ್ಕಲ್:‌ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅಡಿಗರು ಮತ್ತು ಬೇಂದ್ರೆಯವರ ಪ್ರತಿಕ್ರಿಯೆ

Namratha Rao by Namratha Rao
October 31, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸಾಹಿತ್ಯ ಸರ್ಕಲ್:‌ ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅಡಿಗರು ಮತ್ತು ಬೇಂದ್ರೆಯವರ ಪ್ರತಿಕ್ರಿಯೆ:

 

Related posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

June 17, 2026
ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

June 17, 2026

ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯ ಈ ಕಾಲಘಟ್ಟದಲ್ಲಿ ಅಡಿಗರು ಬದುಕಿದ್ದರೆ ಅವರ ನಿಲುವೇನಿರುತ್ತಿತ್ತು ಎನ್ನುವ ಊಹೆಯನ್ನು ಕೆಲವರು ಮಾಡುತ್ತಿದ್ದಾರೆ. ಈ ಊಹೆಯಿಂದ ಅವರನ್ನು ನಾವು ಹೇಗೆ ಪರಿಭಾವಿಸಿಕೊಂಡಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ತುರ್ತು ಪರಿಸ್ಥಿತಿ ಹೇರಲ್ಪಟ್ಟ ಕಾಲಕ್ಕೆ ಅಡಿಗರು ಪಕ್ಕಾ ಜನಸಂಘಿಯಾಗಿದ್ದರು. ಅವರು ತುರ್ತು ಪರಿಸ್ಥಿತಿಯ ಹೇರಿಕೆಯ ಪರವಾಗಿದ್ದರು ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆ ಸಮಯದಲ್ಲಿ ನಾಡಿನ ತುಂಬೆಲ್ಲ ಸಂಚರಿಸಿ ಅವರು ಸಭೆಗಳನ್ನುದ್ದೇಶಿಸಿ ಘನ ಘೋರ ಭಾಷಣ ಮಾಡಿದ ದಾಖಲೆಗಳಿವೆ. ಹಾಗೆ ಪ್ರತಿ ಸಲ ಭಾಷಣ ಮಾಡುವಾಗಲೂ ಅವರನ್ನು ಬಂಧಿಸಲಾಗುತ್ತದೆ ಎಂದು ಸ್ವತಃ ಅವರು ಮತ್ತು ಅವರ ಅನುಯಾಯಿಗಳು ನಂಬಿದ್ದರು ಮತ್ತು ಅದಕ್ಕಾಗಿ ಕಾದಿದ್ದರು. ಆದರೆ ಆಗಿನ ಮುಖ್ಯ ಮಂತ್ರಿ ದೇವರಾಜ್ ಅರಸ್ ಬಹಳ ಬುದ್ಧಿವಂತಿಕೆಯಿಂದ ಅವರನ್ನು ಬಂಧಿಸಲೇ ಇಲ್ಲ. Because he was not a threat. ಇದು ಅವರಿಗೆ ಸ್ವಲ್ಪ ಮುಖಭಂಗವನ್ನೂ ಉಂಟು ಮಾಡಿತ್ತು.

 

ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರು ಎನ್ನುವ ಕಾರಣವನ್ನು ಮುಂದೊಡ್ಡಿ ಅವರು ಇಂದು ಬದುಕಿದ್ದರೆ  ಮೋದಿ ಆಡಳಿತ ಜಾರಿ ಮಾಡಿದ ಈ ಅಘೋಷಿತ ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದರು ಎಂದು ಅನಿಸುವುದಿಲ್ಲ. ಆದ್ವಾನಿ ಈಗಲೂ ಬದುಕಿದ್ದಾರೆ, ಅವರೂ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಬಂಧಿಸಲ್ಪಟ್ಟು ಜೈಲು ಸೇರಿದವರು, ಆದರೆ ಇಂದಿನ ಸರಕಾರದ ವಿರುದ್ಧ ಒಂದಾದರೂ ಹೇಳಿಕೆಯನ್ನು ಅವರು ನೀಡಿದ್ದಾರೆಯೆ. ಹಾಗೆಯೇ ಅಡಿಗರೂ ಬಿಜೆಪಿಯ ಸದಸ್ಯರಾಗಿ ಚುನಾವಣೆ ಸ್ಪರ್ಧಿಸಿದವರು ನಂತರ ಅವರ ನಿಧನದವರೆಗೂ ಅದೇ ಸಿದ್ದಾಂತಕ್ಕೆ ಜೋತು ಬಿದ್ದವರು ಮತ್ತು ಅವರ ಕಾವ್ಯ ಹೆಚ್ಚು ಹೆಚ್ಚು ಬಲ ಪಂಥೀಯವಾಗುತ್ತ ಕೋಮು ಭಾವನೆಯನ್ನು ಉದ್ರೇಕಿಸುವ ‘ಮತ್ತೆ ಮೊಳಗಲಿ ಇಲ್ಲಿ ಪಾಂಚಜನ್ಯ’ ದಂತಹ ಕವಿತೆಯನ್ನು ಬರೆಯುವವರೆಗೆ ಹೋಗಿ ತಲುಪಿತ್ತು. 

 

ಈ ಹಿನ್ನೆಲೆಯಲ್ಲಿ ಅಡಿಗರು ಬದುಕಿದ್ದರೆ ಇಂದಿನ ಸರಕಾರದ ವಿರುದ್ಧವಾಗಿ ಒಂದು ಮಾತನ್ನಾದರೂ ಆಡುತ್ತಿದ್ದರು ಎಂದು ಸಹ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಬೇಂದ್ರೆ ಬದುಕಿದ್ದರೆ ವಿರೋಧಿಸುತ್ತಿದ್ದರು ಎಂದೆನಿಸುತ್ತದೆ. ವಿಪರ್ಯಾಸವೆಂದರೆ ಬೇಂದ್ರೆ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ್ದರು. ತುರ್ತು ಪರಿಸ್ಥಿತಿ ಘೋಷಣೆ ಹಿಂದೆ ಕೋಮು ಭಾವನೆ ಉದ್ರೇಕಿಸುವ ಉದ್ದೇಶ ಇರಲಿಲ್ಲವಾಗಿತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲಾಗಲಿ ಯಾವುದೇ ಕೋಮಿನ ಧಾರ್ಮಿಕ ಚಟುವಟಿಕೆಗಳ ಮೇಲಾಗಲಿ ಯಾವ ನಿರ್ಭಂದವನ್ನು ಹೇರುವ ಉದ್ದೇಶವೂ ಇರಲಿಲ್ಲ. ಹಾಗಾಗಿ ಅದನ್ನು ಕೇವಲ ರಾಜಕೀಯ ಆಯಾಮದಲ್ಲಿ ಮಾತ್ರ ನೋಡಿದವರ ಸಂಖ್ಯೆ ಹೆಚ್ಚಿತ್ತು. ಅದೇ ಕಾರಣಕ್ಕಾಗಿ ನಂತರದ ಚುನಾವಣೆಯಲ್ಲಿ Cow belt ನ ಹೊರಗೆ ಇಂದಿರಾಗೆ ಸೋಲಾಗಿರಲಿಲ್ಲ. ಮಹರಾಷ್ಟ್ರ ಮತ್ತು ದಕ್ಷಿಣದ ಎಲ್ಲ ರಾಜ್ಯಗಳೂ ಇಂದಿರಾ ಪರವಾಗಿಯೇ Solid  ಆಗಿ ಮತ ಚಲಾಯಿಸಿದ್ದವು.

 

ಕಾರಂತರ ʻಬೆಟ್ಟದ ಜೀವ’ ಕಾದಂಬರಿ ಎನ್ನುವ ಸದಾಕಾಲದ ವಿಸ್ಮಯ: 

 

ಲಂಕೇಶರು ಅಂದಂತೆ ’ಕಾರಂತರು ತಮ್ಮ ಕಾದಂಬರಿಗಳಲ್ಲಿ ಬದುಕನ್ನು ದಾಖಲಿಸುತ್ತಲೇ ಅದನ್ನೊಂದು ಅದ್ಭುತ ಕಲಾಕೃತಿಯನ್ನಾಗಿ ಮಾಡುತ್ತಾರೆ’  ಬೆಟ್ಟದ ಜೀವ ಅವರ ಅಂತಹ  ಕೃತಿಗಳಲ್ಲಿ ಒಂದು. ಮೇಲು ನೋಟಕ್ಕೆ ಇದು ಕಗ್ಗಾಡಿನಲ್ಲಿ ಬದುಕಿದ ಒಂದು ಕುಟುಂಬದ ಜೀವನದ ದಾಖಲೆಯಂತೆ ಕಂಡು ಬಂದರೂ ಒಂಟಿತನ ಬಹಿರಂಗ ಹಾಗೂ ಅಂತರಂಗವನ್ನು ಕಾಡುವ ಪರಿಯನ್ನು ನಿರ್ವಹಿಸಿದ ರೀತಿ ಇದನ್ನು ಒಂದು ಉತ್ತಮ ಕಲಾಕೃತಿಯನ್ನಾಗಿ ಮಾಡಿದೆ.

 

 ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಪಶ್ಚಿಮ ಘಟ್ಟದ ಬೆಟ್ಟದ ಸಾಲಿನ ಒಂಟಿ ಮನೆಯಲ್ಲಿ ಬದುಕುತ್ತಿರುವ ಒಂದು ವೃದ್ದ ದಂಪತಿಗಳ ಬದುಕಿನ ಕಥೆ ಇದು. ಇಂತಹ ಪ್ರದೇಶಗಳಲ್ಲಿ ಎರಡು ಮೂರು ಕಿಲೋಮೀಟರ ಅಂತರದಲ್ಲಿಯೂ ಮನುಷ್ಯರ ಇನ್ನೊಂದು ವಾಸಸ್ಥಳ ಸಿಗುವುದು ವಿರಳ. ಈಗಲೂ ಈ ಪ್ರದೇಶದಲ್ಲಿ ಇಂತಹದ್ದೇ ವಾತಾವರಣದಲ್ಲಿ ಬದುಕುತ್ತಿರುವವರನ್ನು ಅಪರೂಪಕ್ಕಾದರೂ ಕಾಣಬಹುದು. ನನ್ನ ಹತ್ತಿರದ ಸಂಬಂಧಿಯೊಬ್ಬ ಈಗಲೂ ಒಂಟಿಯಾಗಿ ಕಾಡಿನ ನಡುವಿನ ಮನೆಯಲ್ಲಿ ಕಾಲ ಕಳೆಯುತ್ತಿರುವುದನ್ನು ನಾನು ಬಲ್ಲೆ. ಹೆಂಡತಿ ಸತ್ತು ಹದಿನೈದು ವರ್ಷವಾಗಿದೆ. ಮಗ ಮತ್ತು ಮಗಳು ಬೇರೆ ಊರಿನಲ್ಲಿ ತಮ್ಮ ತಮ್ಮ ಸಂಸಾರದೊಂದಿಗೆ ಇದ್ದಾರೆ. ಒಂದೆರಡು ಮೈಲುಗಳ ಆಸುಪಾಸಿನಲ್ಲಿ ಕೇವಲ ಕಾಡು ಹೊರತಾಗಿ ಬೇರೆ ಮನೆಗಳಿಲ್ಲ. ತನಗೆ ಬಾಯಿ ತೆರೆದು ಮಾತನಾಡುವುದೇ ಮರೆತು ಹೋಗಿದೆ ಎನ್ನುತ್ತಾನೆ. ಹಾಗಾಗಿ ಅಪರೂಪಕ್ಕೊಮ್ಮೆ ನೆಂಟರ ಮನೆಗೆ ಹೋದರೆ ಏನು ಮಾತನಾಡುವುದು ಎಂದು ತೋಚದೆ ಅಲ್ಲಿಯೂ ಬಾಯಿ ಮುಚ್ಚಿ ಸುಮ್ಮನೆ ಕುಳಿತು ಬಿಡುತ್ತೇನೆ ಎಂದು ಈಗ ಕೆಲವು ವರ್ಷಗಳ ಹಿಂದೆ ಸಿಕ್ಕಾಗ ನನ್ನ ಹತ್ತಿರ ಹೇಳಿ ಕೊಂಡಿದ್ದ. ಮನುಷ್ಯರ ಮುಖ ನೋಡಲೆಂದೇ ಎರಡು ಕಿಲೋಮೀಟರ್ ದೂರದ ಊರಿಗೆ ವಾರಕ್ಕೊಮ್ಮೆ ಹೋಗಿ ಬರುತ್ತಾನಂತೆ. ನಗರದಲ್ಲಿ ಹುಟ್ಟಿ ಬೆಳೆದವರಿಗೆ ಮಾತ್ರವಲ್ಲ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೇ ಅವನ ಈ ಬದುಕಿನ ಸ್ಥಿತಿ ವಿಚಿತ್ರವೆನಿಸಿತು. ನಗರದಲ್ಲಿ ಜನಸಾಗರದ ಮಧ್ಯೆಯೆ ಇದ್ದು ಒಂಟಿತನ ಅನುಭವಿಸುವುದು ಮತ್ತೊಂದು ರೀತಿ. 

 

ಇರಲಿ. ಈಗ ಕಾರಂತರ ’ಬೆಟ್ಟದ ಜೀವ’ ಕಾದಂಬರಿಯ ವಿಷಯಕ್ಕೆ ಬರುವುದಾದರೆ – ಅರವತ್ತು ದಾಟಿದ ಗೋಪಾಲಯ್ಯ ಮತ್ತು ಅವನ ಹೆಂಡತಿ ಶಂಕರಿ ಪಶ್ಚಿಮ ಘಟ್ಟದ ಬೆಟ್ಟದ ಸಾಲಿನಲ್ಲಿ ಅಡಿಕೆ ತೋಟ ಮಾಡಿಕೊಂಡು ಒಂಟಿ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸುತ್ತಮುತ್ತ ಆಸುಪಾಸಿನ ಎರಡು ಮೂರು ಮೈಲುಗಳ ಅಂತರದಲ್ಲಿ  ಮತ್ತೊಂದು ಮನುಷ್ಯ ವಸತಿ ಇಲ್ಲ. ನಾಲ್ಕೂ ದಿಕ್ಕಿನಲ್ಲೂ ಗುಡ್ಡ ಹತ್ತಿ ಇಳಿದು ಕಾಡು ದಾಟಿದ ಮೇಲೆಯೆ ಇನ್ನೊಂದು ಮನೆ ಗೋಚರವಾಗುವುದು. ಅಷ್ಟು ದುರ್ಗಮ ಪ್ರದೇಶ ಅದು. ಮಗಳು ಮದುವೆಯಾಗಿ ಮೊದಲ ಹೆರಿಗೆಯ ಸಮಯದಲ್ಲಿ ಖಾಯಿಲೆಯಿಂದ ಸತ್ತು ಎಷ್ಟೋ ವರ್ಷಗಳಾಗಿವೆ. ಮಗ ಕಾಲೇಜು ಶಿಕ್ಷಣ ಮುಗಿಸಿದವನು ಮನೆಗೆ ತಿರುಗಿ ಬಂದಿಲ್ಲ. ಹದಿನೈದು ವರ್ಷ ಕಳೆದಿದೆ. ಅವನು ಎಲ್ಲಿದ್ದಾನೆ ಎನ್ನುವುದು ಈ ವೃದ್ದ ತಂದೆ ತಾಯಿಗಳಿಗೆ ತಿಳಿದಿಲ್ಲ. ಈ ಕೊರಗು ಅವರನ್ನು ಪ್ರತಿ ಕ್ಷಣವೂ ಕಾಡುತ್ತಿದೆ. ಆದರೂ ಗೋಪಾಲಯ್ಯ ಜೀವನೋತ್ಸಾಹವನ್ನು ಕಳೆದು ಕೊಳ್ಳದೆ ಕೃಷಿಯಲ್ಲಿ ತೊಡಗಿಸಿಕೊಂಡು ದಿನಕ್ಕೊಂದು ಸಾಹಸ ಮೆರೆಯುತ್ತಿದ್ದಾರೆ. ಬಹು ಧೀಮಂತ ಬದುಕು ಅವರದು. ಮೇಲ್ಮೇಲೆ ಗಂಡ ಹೆಂಡತಿ ಇಬ್ಬರೂ ನವ ದಂಪತಿಗಳಂತೆ ವಿನೋದದಿಂದ ದಿನ ಕಳೆಯುತ್ತಿರುವಂತೆ ಕಂಡರೂ ಮಕ್ಕಳ ಅಗಲಿಕೆಯ ನೋವು ಪ್ರತಿ ಗಳಿಗೆಯೂ ಅವರನ್ನು ಅಂತರಂಗದಲ್ಲಿ ಕೊರೆಯುತ್ತಿರುವುದನ್ನು ಕಾರಂತರು ಚಿತ್ರಿಸಿದ ರೀತಿ ಅನನ್ಯವಾದುದು. ಬಾಹ್ಯ ಬದುಕಿನ ಒಂಟಿತನ ಬೇಸರವನ್ನಷ್ಟೇ ಉಂಟು ಮಾಡಿದರೆ ಕರುಳ ಕುಡಿಗಳ ಅಗಲಿಕೆಯಿಂದ ಉಂಟಾದ ಒಂಟಿತನದ ಆಂತರ್ಯದ ಬೇಗೆ ಎಡೆಬಿಡದೆ ಶೇಷ ಬದುಕಿನುದ್ದಕ್ಕೂ ಮನುಷ್ಯನ ಬದುಕನ್ನು ಹೈರಾಣುಗೊಳಿಸುತ್ತದೆ. ಹೀಗೆ ಅವರ ಬದುಕಿನ ಅಂತರಂಗ ಬಹಿರಂಗಗಳೆರಡನ್ನೂ ಆವರಿಸಿದ ಒಂಟಿತನದ ಕಲಾತ್ಮಕ ಅನಾವರಣವೇ ಈ ಕಾದಂಬರಿಯ ವಿಶೇಷ.

ಬೇಂದ್ರೆ ಎಂಬ ಪೊಯೆಟ್‌ ಆಫ್‌ ಪ್ಲೆಂಟಿ:

 

ಬೇಂದ್ರೆ ಬದುಕಿದ್ದರೆ ಈಗ ನೂರಿಪ್ಪತೈದು ತುಂಬುತ್ತಿತ್ತು. ಬೇಂದ್ರೆಯವರ ಬಗ್ಗೆ ಎಷ್ಟೆಲ್ಲಾ ಜನ ಎಷ್ಟೆಲ್ಲಾ ಸಂಗತಿಗಳನ್ನು ಹೇಳಿ ಆಗಿದೆ. ಹೇಳಲಿಕ್ಕೆ ಇನ್ನು ಏನೂ ಉಳಿದಿಲ್ಲ ಅಂದುಕೊಂಡಂತೆ ಮತ್ತಷ್ಟು ಹೊಸ ವಿಷಯಗಳು ಅವರ ಬಗ್ಗೆ, ಅವರ ಬರಹದ ಬಗ್ಗೆ ಹೊರಬರುತ್ತಲೇ ಇವೆ. He was a poet of plenty. ಅಲ್ಲದೆ ಅವರ ವ್ಯಕ್ತಿತ್ವದ ಬಗ್ಗೆ ಒಂದು ನಿಗೂಢತೆ ಅಂದರೆ ಅವರನ್ನು ಪೂರ್ತಿಯಾಗಿ ಅರಿಯಲು ಸಾಧ್ಯವಾಗದ ಒಂದು ಅಪರಿಚಿತ ಭಾಗ ಅವರ ದೈನಂದಿನ ವ್ಯವಹಾರಿಕ ಮಾತುಕತೆಗಳಲ್ಲಿ ನಿರಂತರವಾಗಿ ಅವರು ಬದುಕಿದಷ್ಟೂ ಕಾಲ ಹೊರಬರುತ್ತಲೇ ಇತ್ತು. ಈ ಅರ್ಥದಲ್ಲಿಯೂ He was a person of plenty. ಬೇಂದ್ರೆಯವರ ಬಗ್ಗೆ ನಮಗೆ ಎಲ್ಲ ತಿಳಿಯಿತು ಅಂದುಕೊಳ್ಳುತ್ತಿದ್ದಂತೆ ಅವರ ಒಂದು ಚತೋರೋಕ್ತಿಯೋ ಅಥವಾ ಒಂದು ಕವಿತೆಯೋ ನಾವು ಆವರೆಗೆ ಕಂಡಿರದ ಬೇಂದ್ರೆಯನ್ನು ತೋರಿಸಿ ಬೆರಗು ಮಾಡಿಬಿಡುತ್ತದೆ. ಇದು ಬೇಂದ್ರೆಯವರ ನಿಜವಾದ ಮಾಂತ್ರಿಕತೆ. ಅವರ ಈ ಮಾಂತ್ರಿಕತೆಗೆ ಮರುಳಾಗದ ಕನ್ನಡ ಓದುಗನಿರಲಿಕ್ಕಿಲ್ಲ.

 

ಅವರು ಅನೇಕ ಸಲ ಕವಿತೆಗಳನ್ನು ಕನಸಿನಲ್ಲಿ ಪಡೆದುಕೊಂಡೆ ಎನ್ನುತ್ತಾರೆ. ಇದು ಅವರ ಕವಿತೆಗಳ ಸುತ್ತಲೂ ನಾವು ಅರಿಯದ ಒಂದು ನಿಗೂಢತೆಯನ್ನು ಸೃಷ್ಟಿ ಮಾಡಿರುವುದೂ ಉಂಟು. ಕನಸು ಎಂದೆಂದೂ ನಿಗೂಢ ತಾನೆ. ಹಾಗೆಯೇ ಇನ್ನೊಂದು ಕುತೂಹಲದ ಸಂಗತಿಯೆಂದರೆ ಅವರು ತಾನು ಹಿಂದಿನ ಜನ್ಮದಲ್ಲಿ ಕವಿ ಕಾಳಿದಾಸನಾಗಿದ್ದೆ ಎಂದು ನಂಬಿದ್ದರಂತೆ. ಜಗತ್ತಿನ ಯಾವುದೇ ಭಾಷೆಯ ಅತ್ಯುತ್ತಮ ಕವಿಯ ಹೋಲಿಕೆಯಲ್ಲಿ ಸರಿಸಮನಾಗಿ ನಿಲ್ಲುವ ಬೇಂದ್ರೆ ಕನ್ನಡಕ್ಕೆ ದೊರೆತಿದ್ದು ಈ ನೆಲದ ಭಾಗ್ಯ.

 

-ಶ್ರೀಪಾದ ಹೆಗಡೆ, 

ನಿವೃತ್ತ ಬಿಎಸ್‌ಎನ್‌ಎಲ್‌ ಉದ್ಯೋಗಿ, ಸಾಹಿತ್ಯಾಸಕ್ತರು ಹಾಗೂ ಹವ್ಯಾಸಿ ಬರಹಗಾರರು, 

ಬೆಂಗಳೂರು

Tags: #saakshatvadigabiopicskaranthalifestorypoliticsspecial article
ShareTweetSendShare
Join us on:

Related Posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

RSS ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ; ಪಾರದರ್ಶಕತೆ ಕುರಿತು ಮಹತ್ವದ ಹೇಳಿಕೆ

by Shwetha
June 17, 2026
0

ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಯಾವುದೇ ಸಂಘ-ಸಂಸ್ಥೆ ದೇಶದ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram