ಹೆಣ್ಣು ಮಕ್ಕಳು ಹಿಂಜರಿಯದೆ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು : ಸುಧಾಮೂರ್ತಿ
ವಿಜಯಪುರ : ಹೆಣ್ಣು ಮಕ್ಕಳು ಹಿಂಜರಿಯದೆ, ಆತ್ಮವಿಶ್ವಾಸದಿಂದ ಸಾಧನೆಯತ್ತ ಮುನ್ನಡೆಯಬೇಕು ಎಂದು ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಡಾ. ಸುಧಾಮೂರ್ತಿ ಹೇಳಿದ್ದಾರೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವ ಸಮಾರಂಭ ಬುಧವಾರ ನಡೆಯಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಡಾಕ್ಟರೆಟ್ ಹಾಗೂ ವಿಶ್ವವಿದ್ಯಾನಿಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪ್ರದಾನ ಮಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ಜಾನಕಿ ಶ್ರೀನಿವಾಸ ಮೂರ್ತಿ, ಸಂಗೀತ ಕ್ಷೇತ್ರದಲ್ಲಿ ಡಾ. ಸುಮಾ ಸುಧೀಂದ್ರ ಹಾಗೂ ಸಮಾಜ ಸೇವೆಯಲ್ಲಿ ಡಾ. ಕಲ್ಪನಾ ಸರೋಜಾ ಅವರಿಗೆ ಗೌರವ ಡೌಕ್ಟರೆಟ್ ನೀಡಿ ಗೌರವಿಸಲಾಯಿತು.
ಕುಲಪತಿ ಪ್ರೊಫೆಸರ್ ಬಿ. ಕೆ. ತುಳಸಿಮಾಲಾ, ಉಳಿದ ವಿದ್ಯಾರ್ಥಿನಿಯರಿಗೆ ಪದಕ ವಿತರಿಸಿ, ಪಿಹೆಚ್ ಡಿ ಪ್ರದಾನ ಮಾಡಿದರು.
ಬಳಿಕ ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದ ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಡಾ. ಸುಧಾಮೂರ್ತಿ, ಪದವಿ ಪಡೆದವರ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಲಿದೆ. ಹೆಣ್ಣು ಮಕ್ಕಳು ಹಿಂಜರಿಯದೆ, ಆತ್ಮವಿಶ್ವಾಸದಿಂದ ಸಾಧನೆಯತ್ತ ಮುನ್ನಡೆಯಬೇಕು ಎಂದರು.
ಬಳಿಕ ಮೂರು ಚಿನ್ನದ ಪದಕ ಪಡೆದ ಸುಜಾತಾ ಮದರಖಂಡಿ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.