ADVERTISEMENT
Thursday, April 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

100 % ಫ್ಯಾಮಿಲಿ ಪೂರ್ತಿ ನೋಡ್ಲೇ ಬೇಕಾದ ಸಿನಿಮಾ “100”

Namratha Rao by Namratha Rao
November 19, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

100 % ಫ್ಯಾಮಿಲಿ ಪೂರ್ತಿ ನೋಡ್ಲೇ ಬೇಕಾದ ಸಿನಿಮಾ “100”

100 % ಸಸ್ಪೆನ್ಸ್ ಥ್ರಿಲ್ಲಿಂಗ್ ನಿಂದ ಭರಪೂರ , ಅಧ್ಬುತ ಸಿನಿಮಾ

Related posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

April 2, 2026
ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

April 2, 2026

100 ಸಿನಿಮಾ ರಿವೀವ್..!

ರಮೇಶ್ ಅರವಿಂದ್ ಸಿನಿಮಾ ಅಂದ್ರೆ ಜನ ಹೊಸದೇನೋ ನಿರೀಕ್ಷೆ ಮಾಡಿಯೇ ಇರುತ್ತಾರೆ.. ಹಾಗೇ ರಮೇಶ್ ಅರವಿಂದ್ ಅವರು ಜನರ ನಿರೀಕ್ಷೆಯನ್ನ ರೀಚ್ ಮಾಡೋದ್ರಲ್ಲೂ ಯಾವತ್ತೂ ಹಿಂದೆ ಬಿದ್ದಿಲ್ಲ.. ಅದ್ರಲ್ಲೂ ಅವರದ್ದೇ ನಿರ್ದೇಶದ ಸಿನಿಮಾಗಳು ಅಂದ್ರೆ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚೇ ಇರುತ್ತೆ..100 film

ಅದೇ ರೀತಿಯ ಎಲ್ಲಾ ಒಂದು ನಿರೀಕ್ಷೆ ಮುಟ್ಟಿರುವಂತಹ ಈಗಿನ ಜನರೇಷನ್ ನಲ್ಲಿ , ಹಾಟ್ ಟಾಪಿಕ್ ಆಗಿರುವ ನೈಜತೆ ಎಳೆಯನ್ನ ಇಟ್ಕೊಂಡು ರಮೇಶ್ ಅರವಿಂದ್ ಅವರು “100” ಸಿನಿಮಾವನ್ನ ಪ್ರೇಕ್ಷಕರ ಮುಂದೆ ತಂದಿದ್ದಾರೆ.. ಈ ಸಿನಿಮಾ ಮೂಲಕ ಈಗಿನ ಜನರೇಷನ್ ನಲ್ಲಿ ಯುವಕರು , ಮಕ್ಕಳು , ಟೀನೇಜರ್ಸ್ , ವಯಸ್ಕರೂ ಕೂಡ ಯಾವ ರೀತಿ ಸೋಷಿಯಲ್ ಮೀಡಿಯಾದಿಂದ ಸಮಸ್ಯೆಗೆ ಒಳಗಾಗ್ತಿದ್ದಾರೆ ಅನ್ನೋದನ್ನ ಬಹಳ ಅಚ್ಚುಕಟ್ಟಾಗಿ ಜನರಿಗೆ  ತೋರಿಸಲಾಗಿದೆ..

ರಮೇಶ್ ಅರವಿಂದ್  ಅವರ ನಿರ್ದೇಶಕ್ಕೆ 100 /100 ಮಾರ್ಕ್ಸ್ ಕೊಡಬೇಕು.. ಈ ಸಿನಿಮಾದ ಸ್ಕ್ರೀನ್ ಪ್ಲೇ ಅಂತೂ ನಿಕ್ಕೂ ಸಖತ್ತಾಗಿದೆ.. ಕ್ಷಣಕ್ಷಣಕ್ಕೂ ಥ್ರಿಲ್ ಹೆಚ್ಚಿಸೋ ಜೊತೆಗೆ ಮುಂದೇನೋ ಅನ್ನೋ ಕ್ಯೂರಿಯಾಸಿಟಿ ಕಾಡ್ತಿರುತ್ತೆ.. ಅಂದ್ಹಾಗೆ   ಈ ಸಿನಿಮಾ ತಮಿಳಿನ ತಿರುಟ್ಟೆ ಪಯಲೆ ರೀಮೇಕ್ ಆಗಿದೆ..    100 film

ರಚಿತಾ ರಾಮ್ ಅವರು ಮೊದಲ ಬಾರಿಗೇ ಯಾರಿಗೂ ನಾಯಕಿಯಾಗದೇ ಈ ಸಿನಿಮಾದಲ್ಲಿ ಒಬ್ಬ ಆದರ್ಶ ಹಾಗೂ ಅಣ್ಣನ ಪ್ರೀತಿಯ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ.. ಈ ಸಿನಿಮಾದಲ್ಲಿ ರಚ್ಚು ಒಂದು ಒಳ್ಲೆಯ ರೋಲ್ ನಿಭಾಯಿಸಿದ್ದಾರೆ.. ಮತ್ತೊಂದ್ ಕಡೆ ನಟಿ ಪೂರ್ಣ ಅವರ ನಟನೆ ಬಗ್ಗೆಯೂ ನೋ ಕಮೆಂಟ್ಸ್.. ಒಬ್ಬ ಆದರ್ಶ ಪತ್ನಿ, ತಾಯಿ , ಸೊಸೆ , ಅತ್ತಿಗೆ ಪಾತ್ರದಲ್ಲಿ ಪೂರ್ಣ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ..

ಡಾರ್ಕ್ ವೆಬ್ ನೇ ದುನಿಯಾ ಮಾಡಿಕೊಂಡು , ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರನ್ನ ಪರಿಚಯ ಮಾಡಿಕೊಂಡು , ಅವರನ್ನ ಪ್ರೀತಿ ನಾಟಕದಲ್ಲಿ ಯಾಮಾರಿಸುತ್ತಾ, ಮೋಸ ಮಾಡಿ ಕೊನೆಗೆ ಆ ಹುಡುಗಿಯನ್ನೇ ಬ್ಲಾಕ್ ಮೇಲ್ ಮಾಡುವುದನ್ನೇ ದಂಧೆಯಾಗಿಸಿಕೊಂಡಿದ್ದ ವಿಲ್ಲನ್ ಆಗಿ , ಸೈಕೋ ಪಾತ್ರದಲ್ಲಿ ವಿಶ್ವ ಕರ್ಣ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ಯಾಮಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.. ನಿಜ ಹೇಳೋದಾದ್ರೆ ಸಿನಿಮಾದಲ್ಲಿ ವಿಶ್ವ ನಟನೆ ಕ್ಷಣ ಕ್ಷಣಕ್ಕೂ ಆತನ ಮೇಲಿನ ಸಿಟ್ಟನ್ನ ಹೆಚ್ಚಿಸುತ್ತಲೇ ಹೋಗುತ್ತೆ.. ಅದೇ ಒಬ್ಬ ವಿಲ್ಲನ್ ನಟನೆಗೆ ಬೇಕಾಗಿರೋ ಕ್ರೆಡಿಟ್… ವಿಶ್ವ  ಈ ಸಿನಿಮಾದಲ್ಲಿ ಹರ್ಷನಾಗಿ ಕಾಣಿಸಿಕೊಂಡಿದ್ದಾರೆ.. ಟೆಕ್ನಾಲಜಿ ಮಾಸ್ಟರ್ ಮೈಂಡ್…  ಹೇಗೆ ಟೆಕ್ನಾಲಜಿಯನ್ನೇ ಅರೆದು ಕುಡಿದು ಅದನ್ನ ಯಾವೆಲ್ಲಾ ರೀತಿಯಲ್ಲಿ ಬಳಸಿಕೊಂಡು ಹೇಗೆ ದುಡ್ಡು ಮಾಡಬಹುದು ಅನ್ನೋ ಕಲೆಯನ್ನ ಕರಗತ ಮಾಡಿಕೊಂಡು ಅದ್ಹೇಗೆ ಹುಡುಗಿಯರನ್ನ ತಮ್ಮ ಬಲೆಗೆ ಸಿಲುಕಿಸುತ್ತಾರೆ.. ತನ್ನ ಟ್ಯಾಕಲೆಂಟ್ ನಿಂದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕಢೇಳಿದಷ್ಟು ಹಣಕ್ಕೆ ಕೆಲಸ ಗಿಟ್ಟಿಸಿಕೊಳ್ಳುವ ಸಾಮರ್ಥ್ಯವೇ ಇದ್ರು ಹುಡುಗಿಯರನ್ನ ಮೋಸ ಮಾಡಿಕೊಂಡು ಡಾರ್ಕ್ ವೆಬ್ ನೇ ಅಡಿಕ್ಷನ್ ಮಾಡಿಕೊಂಡಿದ್ದ ಸೈಕೋ ಸೈಬರ್ ಅಪರಾಧಿಯಾಗಿ ಹರ್ಷನ ನಟನೆಯೂ ಅಧ್ಬುತವಾಗಿದೆ.. ಇದ್ರಿಂದ ರಮೆಶ್ ಅರವಿಂದ್ ಅವರಿಗೆ ಯಾವ ರೀತಿ ತೊಂದರೆಯಾಗುತ್ತೆ.. ಹರ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಆಫೀಸರ್ ವಿಷ್ಣು ಮುಖಾಮುಖಿಯಾದಾಗ ಯಾವ ರೀತಿ ಕಾಳಗವಿರುತ್ತೆ ಅನ್ನೋದನ್ನ ಸಿನಿಮಾ ನೋಡಿಯೇ ಆನಂದಿಸಬೇಕು..

 

ಕ್ಷಣಕ್ಷಣಕ್ಕೂ ರಮೇಶ್ ಅವರ ಬದಲಾದ ರೂಪ ಸಿನಿಮಾದಲ್ಲಿ ಕಾಣಸಿಗುತ್ತೆ. ಸಿನಿಮಾದ ಎಡಿಟಾರ್ ಆಕಾಶ್ ಶ್ರೀವಾತ್ಸ ಅವರ ಕೆಲಸವೂ ಅಧ್ಬುತವಾಗಿದೆ.. ಅದು ಸ್ಕ್ರೀನ್ ಮೇಲೆ ಅಚ್ಚುಕಟ್ಟಾಗಿ ಕಾಣಿಸುತ್ತೆ.. ಸಿನಿಮಾವನ್ನ ಅದ್ಧೂರಿಯಾಗಿ ಸೂರಜ್ ಪ್ರೊಡಕ್ಷನ್ ಬ್ಯಾನರ್ ನ ಅಡಿ ರಮೇಶ್ ರೆಡ್ಡಿ , ಉಮಾ ನಿರ್ಮಾಣ ಮಾಡಿದ್ದಾರೆ..

ರಾಜು ತಾಳಿಕೋಟೆ, ಶೋಭ್ ರಾಜ್ ಅವರ ಸ್ವಲ್ಪ ಕಾಮಿಡಿ , ಸ್ವಲ್ಪ ವಿಲ್ಲನೇಸ್ಟಿಕ್ ಅವತಾರ , ಹಿರಿಯ ಪೊಲೀಸ್ ಅಧಿಕಾರಿಯಾಗಿ  ಪ್ರಕಾಶ್ ಬೆಲ್ವಾಡಿ ಅವರ ನಟನೆ, ಬೇಬಿಸ್ಮಯ, ಮಾಲತಿ ಸುಧೀರ್ ಅವರ ನಟನೆ ಅದ್ಭುತವಾಗಿದೆ..    ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಕ್ಯಾಮೆರಾ ಮ್ಯಾಜಿಕ್ ಆನ್ ಸ್ಕ್ರೀನ್ ಮೇಲೆ ಮೋಡಿ ಮಾಡಿದೆ..  ಧನಂಜಯ ಕೊರಿಯಾಗ್ರಾಫಿ , ಶ್ರೀನಿವಾಸ್ ಕಲಾಲ್ ಸಂಕಲನ , ಜಾಲಿ ಬಾಸ್ಟಿನ್, ಡಾ.ರವಿವರ್ಮ ಸಾಹಸ, ಗುರು ಕಶ್ಯಪ್ ಸಂಭಾಷಣೆ ಸಿನಿಮಾದ ಮೆರಗು ಹೆಚ್ಚಿಸಿದೆ..

ಸೋಷಿಯಲ್ ಮೀಡಿಯಾ , ಫೇಸ್ ಬುಕ್ , ಇನ್ಸ್ಟಾ, ವಾಟ್ಸಾಪ್ , ಟ್ವಿಟ್ಟರ್ ಇವೆಲ್ಲದ್ರಿಂದ ಒಳ್ಳೆಯದ್ದೂ ತುಂಬಾನೆ ಇದ್ರೂ ಕೆಲವೊಮ್ಮೆ ಇದೇ ಪ್ಲಾಟ್ ಫಾರ್ಮ್ ಗಳ ಮೂಲಕ   ಎಷ್ಟೆಲ್ಲಾ ತೊಂದರೆಗಳಾಗುತ್ವೆ , ಟೆಕ್ನಾಲಜಿ ಬೆಳದಂತೆ ಅಭಿವೃದ್ಧಿಯ ಜೊತೆಗೆ ದೊಡ್ಡ ತೊಂದರೆಗಳು ಕಾಡುತ್ವೆ ಅನ್ನೋದನ್ನ ನಾವೀ ಸಿನಿಮಾ ಮೂಲಕ ನೋಡಿ ತಿಳಿದದುಕೊಳ್ಳಬಹುದು..

ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ  ಅಸಹಾಯಕ ಸ್ಥಿತಿಗೆ ತಲುಪಿದಾಗ ಅನಿವಾರ್ಯತೆಯಿಂದ ತೆಗೆದುಕೊಳ್ಳುವ ನಿರ್ಧಾರ ಕಥೆಯ ದಿಕ್ಕನ್ನೇ ಬದಲಾಯಿಸಿಬಿಡುತ್ತೆ.. ಅಬ್ಬಬ್ಬಾ ಇದೊಂದು ಸಖತ್ ಥ್ರಿಲ್ಲರ್ , ಸಸ್ಪೆನ್ಸ್ ಕಥೆ ಅಂತ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬರುತ್ತಾ ನಿಮಗೆ ಅನ್ಸುತ್ತೆ.. ಮಾತ್ ಮಾತಿಗೂ ಸಿನಿಮಾದಲ್ಲಿ ಟ್ವಿಸ್ಟ್ ಇದೆ..

ಅದ್ರಲ್ಲೂ  ಪವರ್ ಫುಲ್  ರವಿ ಬಸ್ರೂರು ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜೊತೆ ರಮೇಶ್ ಅವರ ಥ್ರಿಲ್ಲಿಂಗ್ ನಟನೆ  ಚೆರ್ರಿ ಆನ್ ದ ಟಾಪ್… ರಮೇಶ್ ಅರವಿಂದ್ ಅವರು ಭಿನ್ನ ವಿಭಿನ್ನ ಒಮ್ಮೆ ಪ್ರಾಮಾಣಿಕ ನಿಷ್ಠಾವಂತ ಪೊಲೀಸ್ ಆಫಿಸರ್ ಆದ್ರೆ , ಮತ್ತೊಮ್ಮೆ ಫ್ಯಾಮಿಲಿ ಮ್ಯಾನ್ , ಹೆಂಡತಿಯನ್ನ ಜೀವಕ್ಕಿಂದ ಹೆಚ್ಚು ಪ್ರೀತಿಸೋ ಗಂಡನಾಗಿ , ಮಗಳನ್ನ ಪ್ರಾಣದಂತೆ ನೋಡಿಕೊಳ್ಳುವ ಅಪ್ಪನಾಗಿ , ತಂಗಿಯ ಕಣ್ಣಲ್ಲಿ ನೀರು ಬಾರದಂತೆ ನೋಡಿಕೊಳ್ಳುವ ಅಣ್ಣನಾಗಿ , ಮತ್ತೆ ಕೆಲವೊಮ್ಮೆ ಖುದ್ದು ವಿಲ್ಲನ್  ಆಗಿಯೂ ಸಿನಿಮಾದಲ್ಲಿ ಅಧ್ಬುತ ನಟನೆ ಮಾಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ಯುವತಿಯರ ಸರಣಿ ಆತ್ಮಹತ್ಯೆಯಿಂದ  ಕಥೆ ಪ್ರಾರಂಭವಾಗಿ , ಆ ಹುಡುಗಿಯರ ಕೊಲೆಗೆ ಕಾರಣನಾಗಿದ್ದ ಸೈಕೋ ಅಂತ್ಯದಲ್ಲಿ ಈ ರೋಮಾಂಚನಕಾರಿ ಸಿನಿಮಾ ಮುಗಿಯುತ್ತೆ.. ತಮಿಳಿನ ಸಿನಿಮಾದ ರೀಮೇಕ್ ಆದ್ರೂ ಶೇ 50 ರಷ್ಟು ಭಾಗಗಳನ್ನ ಬದಲಾವಣೆ ಮಾಡಲಾಗಿದೆ..

ಸಿನಿಮಾದಲ್ಲಿ ಈಗಿನ ಜನರೇಷನ್ , ಸೋಷಿಯಲ್ ಮೀಡಿಯಾ ಅಡಿಕ್ಷನ್ ,   ಫೋನ್ ಟ್ಯಾಪಿಂಗ್ , ಹ್ಯಾಕಿಂಗ್ ,  ಬ್ಲಾಕ್ ಮೇಲಿಂಗ್ ಈ ರೀತಿಯಾದ ಈಗಿನ  ಹಾಟ್ ಟಾಪಿಕ್ ಗಳನ್ನೇ ಇಟ್ಟುಕೊಂಡು ಅದನ್ನ ಸ್ಕ್ರೀನ್ ಪ್ಲೇ ನಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ ರಮೇಶ್ ಅರವಿಂದ್ ಅವರು..

ಒಟ್ಟಾರೆಯಾಗಿ ಸಿನಿಮಾದ ಕಥೆ, ಸಿನಿಮಾದ ಸ್ಕ್ರೀನ್ ಪ್ಲೇ , ತಂತ್ರಜ್ಞಾನ ತಂಡದ ಅದ್ಭುತ ಕೆಲಸ , ರವಿ ಬಸ್ರೂರು ಮ್ಯೂಸಿಕ್ , ರಮೇಶ್ ಅರವಿಂದ್ ಅವರ ನಿರ್ದೇಶನ , ನಟನೆ , ಅದ್ಭುತ ಎಡಿಟಿಂಗ್ ನಿಂದ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ..

ಸಿನಿಮಾದಲ್ಲಿ ಸೆಂಟಿಮೆಂಟ್ ಇದೆ.. ಕಾಮಿಡಿಯಿದೆ.. ಕೊಂಚ ಲವ್ ಸೀನ್ಸ್ ಇದೆ. ಭರಪೂರ ಥ್ರಿಲ್ಲಿಂಗ್ , ಆಕ್ಷನ್ ಸೀನ್ಸ್ ಇದೆ.. ಟ್ವಿಸ್ಟ್ ಗಳಿಂದ ತುಂಬಿದೆ.. ನೈಜತೆ ಈ ಸಿನಿಮಾದ ಮೌಲ್ಯ ದುಪ್ಪಟ್ಟಾಗಿಸಿದೆ.. ಇದಿಷ್ಟು ಸಿನಿಮಾದ ರಿವೀವ್…. ಆದ್ರೆ ಈ ಸಿನಿಮಾ ತಪ್ಪದೇ ವೀಕ್ಷಣೆ ಮಾಡ್ಲೇ ಬೇಕಾದ ಚಿತ್ರ..  ಥಿಯೇಟರ್ ನಲ್ಲಿ ಕುಟುಂಬ ಸಮೇತ ನೋಡಬಹುದಾದ ಒಂದು ಅದ್ಭುತ ಸಿನಿಮಾ.. ಇದು ಸಾಕ್ಷಾ ಟಿವಿ ರಿವೀವ್..

100 ಸಿನಿಮಾಗೆ ಈ ಎಲ್ಲಾ ಅಂಶಗಳಿಂದ 9/10 ಕ್ಕೆ ಅಂಕಗಳನ್ನ ಆರಾಮಾಗಿ ಕೊಡಬಹುದು.. ನೀವು ಸಿನಿಮಾ ನೋಡಿ ಡಿಸೈಡ್ ಮಾಡಿ ನೀವು ಈ ಸಿನಿಮಾಗೆ ಎಷ್ಟ್ ಮಾರ್ಕ್ಸ್ ಕೊಡ್ತೀರಾ…

Tags: #saakshatv100 kannada filmramesh aravindriview
ShareTweetSendShare
Join us on:

Related Posts

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ

by Shwetha
April 2, 2026
0

ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್‌ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

ಸಿಮ್ ಕಾರ್ಡ್ ವ್ಯಾಲಿಡಿಟಿ ಮುಗಿದು ಎಷ್ಟು ದಿನಕ್ಕೆ ನಿಮ್ಮ ನಂಬರ್ ಬಂದ್ ಆಗುತ್ತೆ ಟ್ರಾಯ್ ನಿಯಮಗಳ ಅಸಲಿ ಸತ್ಯ ಇಲ್ಲಿದೆ

by Shwetha
April 2, 2026
0

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯುವುದು ಅಸಾಧ್ಯ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಬಹುತೇಕರು ತಮ್ಮ ಫೋನ್‌ಗಳಲ್ಲಿ ಎರಡು ಸಿಮ್...

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

ನೀತಿ ಸಂಹಿತೆ ಬಳಿಕ ಒಳಮೀಸಲಾತಿ ಜಾರಿ: ಸಚಿವ ಮುನಿಯಪ್ಪ

by Shwetha
April 2, 2026
0

ರಾಜ್ಯದಲ್ಲಿ ನೀತಿ ಸಂಹಿತೆ ಮುಗಿದ ತಕ್ಷಣ ಒಳಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಆಹಾರ ಸಚಿವ K. H. ಮುನಿಯಪ್ಪ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ...

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

ಶೆಲ್ ಪೆಟ್ರೋಲ್ ದರ ಏರಿಕೆ; ಜನತೆಗೆ ಮತ್ತೆ ಶಾಕ್

by Shwetha
April 2, 2026
0

ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಮೂರನೇ ಬಾರಿ...

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

ದೀದಿಗೆ ಮುಸ್ಲಿಮರ ಮತ ಬೇಕು ಆದರೆ ಅಭಿವೃದ್ಧಿ ಬೇಡ ಪಶ್ಚಿಮ ಬಂಗಾಳ ಚುನಾವಣಾ ಕಣದಲ್ಲಿ ಹುಮಾಯೂನ್ ಕಬೀರ್ ತೀವ್ರ ವಾಗ್ದಾಳಿ

by Shwetha
April 2, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ರಾಜಕೀಯ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದರೆ, ವಿರೋಧ ಪಕ್ಷಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram