ADVERTISEMENT
Wednesday, September 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಸಾಮಾಜಿಕ ಜಾಲತಾಣ ಆಮ್ಲಜನಕ..!?

Namratha Rao by Namratha Rao
January 4, 2022
in Life Style, Newsbeat, ಜೀವನಶೈಲಿ
Social Media Saaksha Tv
Share on FacebookShare on TwitterShare on WhatsappShare on Telegram

ಸಾಮಾಜಿಕ ಜಾಲತಾಣ ಆಮ್ಲಜನಕ..!? Saaksha Tv

ಸಾಮಾಜಿಕ ಜಾಲತಾಣ ಜೀವನಕ್ಕೆ ಆಮ್ಲಜನಕ ಇದ್ದ ಹಾಗೆಯೇ? ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂಬ ಎರಡು ಉತ್ತರ ನೀಡಬೇಕಾಗುತ್ತದೆ. ಕಾರಣ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ. ಒಂದು ರೀತಿ ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ, ಆದರೆ ಕೆಲವೊಂದು ಸಲ ಅದೆ ಊಟವಾಗಿ ಬಿಡುತ್ತದೆ. ಆಮ್ಲಜನಕ ಇಲ್ಲದಿದ್ದರೆ ನಮಗೆ ಹೇಗೆ ಬದುಕಲು ಅಸಾಧ್ಯವೊ ಹಾಗೆ ಸಾಮಾಜಿಕ ಜಾಲತಾಣ ಇಲ್ಲದಿದ್ದರೆ ಬದುಕು ಅಸಾಧ್ಯ ಅನ್ನೊ ಮಟ್ಟಿಗೆ ಇರುವ ಕೆಲವೊಂದು ವರ್ಗವನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾತಾಣಗಳಲ್ಲಿ ಸಕ್ರಿಯವಾಗಿ ಇರದ ವ್ಯಕ್ತಿಯನ್ನು ಕಾಣಲು ಅಸಾಧ್ಯ ಎನ್ನುವ ಮಟ್ಟಿಗೆ ನಾವು ಬಂದು ತಲುಪಿದ್ದೇವೆ. ಒಬ್ಬ ವ್ಯಕ್ತಿ ಕಡೆಪಕ್ಷ ವಾಟ್ಸಪ್‌ನ್ನಾದರು ಉಪಯೋಗಿಸುತ್ತಿರುತ್ತಾನೆ.

Related posts

ಕೆಪಿಎಸ್ ಸಿ ಹಗರಣದ ಕಿಂಗ್ ಪಿನ್ ಗಳೆಲ್ಲಾ ಬಿಜೆಪಿಯವರೇ: ಕೇಸರಿ ಪಡೆಯ ಬಣ್ಣ ಬಯಲು ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ!

ಕೆಪಿಎಸ್ ಸಿ ಹಗರಣದ ಕಿಂಗ್ ಪಿನ್ ಗಳೆಲ್ಲಾ ಬಿಜೆಪಿಯವರೇ: ಕೇಸರಿ ಪಡೆಯ ಬಣ್ಣ ಬಯಲು ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ!

September 2, 2026
ಸೆಪ್ಟೆಂಬರ್ 12 ಕ್ಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಡಿಕೆ ಶಿವಕುಮಾರ್ ಕುರ್ಚಿಗೆ ಕಂಟಕ ಎಂದ ಜೆಡಿಎಸ್ ಶಾಸಕ

ಸೆಪ್ಟೆಂಬರ್ 12 ಕ್ಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಡಿಕೆ ಶಿವಕುಮಾರ್ ಕುರ್ಚಿಗೆ ಕಂಟಕ ಎಂದ ಜೆಡಿಎಸ್ ಶಾಸಕ

September 2, 2026

ನಾವು ಪೇಸ್‌ಬುಕ್, ಇನ್‌ಸ್ಟಾಗ್ರಮ್‌ನ್ನು ನೋಡಿದಾಗ ಅದರಲ್ಲಿ ಜಗತ್ತಿನ ಎಲ್ಲ ಮಾಹಿತಿಗಳು ನಮಗೆ ದೊರೆಯುತ್ತವೆ. ಕೆಲವೊಂದು ಸಲ ಇದರಲ್ಲಿ ಬರುವ ವಿಷಯಗಳು ಸತ್ಯ ಎಂಬ ಭ್ರಮೆಗೆ ಒಳಗಾಗಿರುತ್ತೇವೆ. ಅದು ಕೆಲವೊಂದು ಸಲ ಸತ್ಯವಾಗಬಹು ಅಥವಾ ಸುಳ್ಳು ವಾಗಿರಬಹುದು. ಹೇಗೆಂದರೆ ಪ್ರಸಿದ್ಧ ವ್ಯಕ್ತಿಗಳ ಚಿತ್ರ, ಹೆಸರನ್ನು ಹಾಕಿ ಅವರ ಕುರಿತು ನಿಮಗೆ ತಿಳಿಯದ ಮಾಹಿತಿ ಎಂಬ ಪೋಸ್ಟ್ಗಳನ್ನು ನಾವು ನೋಡಿದ್ದೇವೆ. ಇದು ಕೆವೊಂದು ಸಾರಿ ಸತ್ಯವಾಗಿರಬಹುದು ಅಥವಾ ಮಿಥ್ಯವಾಗಿರಬಹುದು. ಇದು ಕೆಲವೊಬ್ಬರಿಗೆ ವೃತ್ತಿಯಾಗಿರುತ್ತದೆ, ಈ ತರಹದ ಸುದ್ಧಿಗಳನ್ನು ಹಬ್ಬಿಸೊದು ಇದೆ ಅವರಿಗೆ ಆಮ್ಲಜನಕವಾಗಿದೆ. ಇನ್ನೂ ಯುಟ್ಯೂಬ್‌ನ್ನು ತೆಗೆದುಕೊಂಡರೆ ಸಾಕಷ್ಟು ಚಾನಲ್‌ಗಳನ್ನು ನಾವು ನೋಡಬಹುದು, ಅದರಲ್ಲಿ ಲೈಕ್, ಸಬ್ಸೆ÷್ಕçöÊಬ್ ಮಾಡುವುದರಿಂದ ಇಂತಿಷ್ಟು ಸಬ್ಸೆ÷್ಕçöÊಬ್ ಆದರೆ ಹಣವನ್ನು ನೀಡುತ್ತಾರೆ. ಇದನ್ನು ವೃತ್ತಿಯಾಗಿಸಿಕೊಂಡವರು ಸಾಕಷ್ಟು ಜನರ ಪಾಲಿಗೆ ಇದು ಆಮ್ಲಜನಕ. ಇನ್ನೂ ವೆಬ್‌ಪೋರ್ಟಲ್, ಬ್ಲಾಗ್‌ಗಳು ಕೂಡ ನಾವು ಕಾಣಬಹದು ಇದು ಕೂಡ ಆಮ್ಲಜನಕವೇ!..

Social Media Saaksha tv

ಇನ್ನೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೋಡಿದರೆ ಆನ್‌ಲೈನ್ ಜರ್ನಲಿಸಂ/ ಸೋಶಿಯಲ್ ಮಿಡಿಯಾ ಫ್ಲಾಟ್‌ಫಾರಂ ಎಂಬ ಹೆಸರುಗಳನ್ನು ನೋಡಬಹದು. ಪತ್ರಿಕೆಗಳು ಮನೆ ಮನೆಗೆ ತಲುಪುವುದಲ್ಲದೆ ಆನ್‌ಲೈನ್‌ನಲ್ಲಿಯು ಲಭ್ಯವಾಗುತ್ತದೆ. ಮನೆಗೆ ಬರುವ ಮುಂಚೆ ನಮ್ಮ ಕೈಯಲ್ಲಿ ಪತ್ರಿಕೆ ಬಂದಿರುತ್ತದೆ ಆನ್‌ಲೈನ್‌ನಲ್ಲಿ. ಇದು ಕೂಡ ಸ್ವಲ್ಪ ಮಟ್ಟಿಗೆ ಆಮ್ಲಜನಕ, ಮತ್ತು ನ್ಯೂಸ್ ಚಾನಲ್, ರೇಡಿಯೋಗಳು ಕೂಡ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುವುದಾದರೆ ಪತ್ರಿಕೆಗಳು ತಮ್ಮ ಪತ್ರಿಕೆಯ ಹೆಸರಿನ ಪೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್‌ರ್ ಖಾತೆಯನ್ನು ಹೊಂದಿವೆ. ಇದರಿಂದ ಮರುದಿನ ಪತ್ರಿಕೆಯಲ್ಲಿ ಬರಬೇಕಾದ ಸುದ್ದಿ ಇಂದೆ ಸಾಮಾಜಿಕ ಜಾಲತಾಣದಲ್ಲಿ ಅವರ ಪೇಜ್‌ನಲ್ಲಿ ಕಾಣಬಹುದು. ಇದು ಕೂಡ ಅವರಿಗೆ ಲಾಭದಾಯಕವಾಗಿದೆ.

ಮಾಧ್ಯಮ ಕ್ಷೇತ್ರಕ್ಕೆ ಬಂದರೆ ಎಲ್ಲ ತರಹದ ಮಾಧ್ಯಮ ಉದಾ: ನ್ಯೂಸ್ ಚಾನಲ್ಸ್, ಮನರಂಜನಾ ಜಾನಲ್‌ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಗಳನ್ನು ಹೊಂದಿವೆ. ಯುಟ್ಯುಬ್‌ನಲ್ಲಿ ನ್ಯೂಸ್ ಚಾನಲ್‌ಗಳು ತಮ್ಮ ಚಾನಲ್‌ನ ಎಲ್ಲ ಕಾರ್ಯಕ್ರಮಗಳು ಲೈವ್ ಆಗಿ ಬರುತ್ತವೆ. ಇದರಿಂದ ಟಿ.ಆರ್.ಪಿ ನೋಡುಗರ ಸಂಖ್ಯೆ ಹೆಚ್ಚಿಸಿಕೊಂಡು ಸಬ್‌ಸ್ಕೆçöÊಬ್ ಹೆಚ್ಚಾಗಿ ಹಣಗಳಿಸಬಹುದು. ಸದ್ಯ ನ್ಯೂಸ್ ೧sಣ  ಚಾನಲ್ ತನ್ನ ಕಾರ್ಯಾರಂಭ ಮಾಡಿ ಸಧ್ಯಕ್ಕೆ ಟಿವಿ ಮಾಧ್ಯಮವಾಗಿ ಬೆಳೆದು ನಿಲ್ಲುವಷ್ಟು ಸಾಮರ್ಥ್ಯ ಹೊಂದಿದೆ. ಇದು ನ್ಯೂಸ್ ೧sಣ ನಂತಹ ಚನಲ್‌ಗಳಿಗೆ ಆಮ್ಲಜನಕವಾಗಿ ಪರಿಣಮಿಸಿದೆ. ಇನ್ನು ಮನರಂಜನಾ ಚಾನೆಲ್‌ಗಳು ಸಮಾಜಿಕ ಜಾಲತಾಣಗಳಲ್ಲಿ ಸಣ್ಣ ಸಣ್ಣ ತುಣುಕಗಳಾಗಿ ತಮ್ಮ ಕಾರ್ಯಕ್ರಮಗಳನ್ನು ಹಾಕುವುದರಿಂದ ತಮ್ಮ ಚಾನಲ್‌ನ್ನು ನೋಡುವರ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು.

ಜಾಹೀರಾತು ಕ್ಷೇತ್ರದಲ್ಲಂತು ಸಾಮಾಜಿಕ ಜಾಲತಾಣ ಆಮ್ಲಜನಕವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಸದಾ ಸಾಮಜಿಕ ಜಾಲತಾಣದಲ್ಲಿ ಇರುವ ಜಗತ್ತು, ಸ್ವಲ್ಪ ಮಟ್ಟಿಗೆ ಟಿವಿ, ಪತ್ರಿಕೆಗಳನ್ನು ನೂಡುವದು ಕಡಿಮೆಯಾಗಿದೆ ಎನ್ನಬಹುದು. ಇಲ್ಲಿ ಜಾಹಿರಾತು ನೀಡಿದರೆ ಹೆಚ್ಚಿನ ಜನರಿಗೆ ತಲಪುತ್ತದೆ ಎಂಬುವುದ ಜಾಹೀರಾತು ನೀಡುವವರಿಗೆ ಖಡಾಖಂಡಿತವಾಗಿ ಗೊತ್ತಿರುತ್ತದೆ, ಮತ್ತು ಯುವಜನತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗುತ್ತದೆ ಇದರಿಂದ ತಮ್ಮ ಪ್ರೊಡೆಕ್ಟಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ ಲೆಕ್ಕಾಚಾರ ಇದು ಜಾಹಿರಾತು ಕಂಪನಿಗಳಿಗೆ ಒಂದು ರೀತಿ ಆಮ್ಲಜನಕವೆ ಸರಿ. ಮತ್ತು ಆನ್‌ಲೈನ್ ಶಾಪಿಂಗ್ ಮಾಡಲು ಕೂಡ ಇದು ಸಹಾಯಕಾರಿಯಾಗಿದೆ.

ಇನ್ನೊಂದು ಆಯಾಮದ ಪ್ರಕಾರ ನೋಡಿದರೆ ವ್ಯಕ್ತಿಯ ಬೆಳವಣಿಗೆಗು ಇದು ಆಮ್ಲಜನಕವಾಗಿದೆ. ಉದಾ: ಕೆಲವು ವರ್ಷಗಳ ಹಿಂದೆ ಅಂದರೆ ಇತ್ತೀಚಿಗೆ ೨-೩ ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಕುರಿÀಗಾಯಿ ಹುಡುಗ ಹನುಮಂತಪ್ಪ ಯಾರೆಂಬುವುದು ನಮಗೆ ಅರಿವಿರಲಿಲ್ಲ ಆದರೆ ಅವನು ಒಂದೆ ಒಂದು ಹಾಡನ್ನು ಹಾಡಿ ಸಾಮಜಿಕ ಜಾಲತಾಣದಲ್ಲಿ ಅನಾವರಣ ಮಾಡಿದನಷ್ಟೆ ಅವನ ನಸಿಬ್ ಬದಲಾಯಿತು. ಸರಿಗಮಪ ಎಂಬ ಜೀ ಕನ್ನಡದ ದೊಡ್ಡ ಕಾರ್ಯಕ್ರಮದಲ್ಲಿ ಮಿಂಚಿ, ಜಗತ ಪ್ರಸಿದ್ಧಿಯಾದ. ಇವನು ಅಷ್ಟೆ ಅಲ್ಲದೆ ಇತ್ತೀಚಿಗೆ ಬ್ಯಾನ ಆದ ಟಿಕ್ ಟಾಕನಲ್ಲಿ ಸಾಕಷ್ಟು ಜನರು ತಮ್ಮ ಕಲಾ ಕೌಶಲ್ಯವನ್ನು ಮೆರೆದು ಪ್ರಸಿದ್ಧಿಯಾದದನ್ನು ಕಾಣಬಹದು. ಉದಾ: ಸ್ಕೆಂಡಿ ಮೆನ್, ಬಸು ಹಿರೇಮಠ, ಸೋನು ಶ್ರೀನಿವಾಸಗೌಡ ಹೀಗೆ ಹಲವಾರು ಜನ ಯುವಕರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಷ್ಟು ಬೆಳದಿದ್ದಾರೆ. ಮತ್ತು ಶೋಶಿಯಲ್ ಮೀಡಿಯಾ ಪ್ಲೆಟ್‌ಫಾರಂ ಎಂಬ ಹೊಸ ವೇದಿಕೆ ಸಜ್ಜಾಗಿ ಎಲ್ಲ ರಂಗದ ಸಾಕಷ್ಟು ಪ್ರತಿಭೆಗಳಿಗೆ ಇದು ಬೆಳಕಾಗಿದೆ.

ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣವು ನ್ಯೂಸ್, ಮನರಂಜನೆ, ಜಾಹಿರಾತು ,ಮತ್ತು ಪತ್ರಿಕೋದ್ಯಮ ಎಲ್ಲಕ್ಷೇತ್ರಗಳಲ್ಲು ತನ್ನ ಛಾಪನ್ನು ಮೂಡಿಸಿದೆ. ಇದು ಬೆಳೆಯುವ ಸಸಿಗಳಿಗೆ ಒಂದು ಮುಕ್ತ ಅವಕಾಶವನ್ನು ನೀಡುತ್ತಾ ಬಂದಿದೆೆ. ಆದರೆ ಒಂದು ಖೇದರದ ಸಂಗತಿಯAದರೆ, ಮುಖ್ಯವಾಹಿನಿಗಳಾದ ಮತ್ತು ನಮ್ಮ ಮೂಲ ವಾಹಿನಿಗಳಾದ ನಾಟಕ, ಬೀದಿನಾಟಕ ಇವು ಮರೆಮಾಚುತ್ತಿವೆ ಮತ್ತು ಪ್ರತಿಭೆಗಳು ಒಂದು ಕ್ಯಾಮರಾ ಮುಂದೆ ಅನಾವರಣಗೊಳ್ಳುತ್ತಿವೆ ಹೊರತು ಮುಕ್ತವಾಗಿ ಜನರ ಮುಂದೆ ಅನಾವರಣಗೊಳ್ಳುತ್ತಿಲ್ಲ ಎಂಬುವುದು ಬೇಸರದ ಸಂಗತಿ.

ವಿ.ಬಿ.ಹೆಚ್

ShareTweetSendShare
Join us on:

Related Posts

ಕೆಪಿಎಸ್ ಸಿ ಹಗರಣದ ಕಿಂಗ್ ಪಿನ್ ಗಳೆಲ್ಲಾ ಬಿಜೆಪಿಯವರೇ: ಕೇಸರಿ ಪಡೆಯ ಬಣ್ಣ ಬಯಲು ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ!

ಕೆಪಿಎಸ್ ಸಿ ಹಗರಣದ ಕಿಂಗ್ ಪಿನ್ ಗಳೆಲ್ಲಾ ಬಿಜೆಪಿಯವರೇ: ಕೇಸರಿ ಪಡೆಯ ಬಣ್ಣ ಬಯಲು ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ!

by Shwetha
September 2, 2026
0

ಕಲಬುರಗಿ: ಕೆಪಿಎಸ್ ಸಿ ಪರೀಕ್ಷೆ ಅಕ್ರಮದ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ಹಗರಣದಲ್ಲಿ ಸಿಕ್ಕಿಬಿದ್ದಿರುವ ಮಧ್ಯವರ್ತಿಗಳಿಂದ ಹಿಡಿದು ಹಗರಣದ...

ಸೆಪ್ಟೆಂಬರ್ 12 ಕ್ಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಡಿಕೆ ಶಿವಕುಮಾರ್ ಕುರ್ಚಿಗೆ ಕಂಟಕ ಎಂದ ಜೆಡಿಎಸ್ ಶಾಸಕ

ಸೆಪ್ಟೆಂಬರ್ 12 ಕ್ಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ: ಡಿಕೆ ಶಿವಕುಮಾರ್ ಕುರ್ಚಿಗೆ ಕಂಟಕ ಎಂದ ಜೆಡಿಎಸ್ ಶಾಸಕ

by Shwetha
September 2, 2026
0

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಭಾರಿ ಸಂಚಲನ ಸೃಷ್ಟಿಯಾಗಲಿದೆಯೇ? ಹೌದು ಎನ್ನುತ್ತಿವೆ ಶಿಡ್ಲಘಟ್ಟದ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಅವರ ಮಾತುಗಳು. ಸೆಪ್ಟೆಂಬರ್ 12ರಂದು...

ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ವೇಗವಾಗಿ ಬೆಳೆಯುತ್ತಿದೆ: ಪ್ರಧಾನಿ ಮೋದಿ

ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತ ವೇಗವಾಗಿ ಬೆಳೆಯುತ್ತಿದೆ: ಪ್ರಧಾನಿ ಮೋದಿ

by Shwetha
September 2, 2026
0

ಜಾಗತಿಕ ಅನಿಶ್ಚಿತತೆ, ಯುದ್ಧಗಳು ಹಾಗೂ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳ ನಡುವೆಯೂ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ದೇಶವು 7.8% ಆರ್ಥಿಕ ಬೆಳವಣಿಗೆ...

ಸಿದ್ದರಾಮಯ್ಯ ಅಹಿಂದ ಅಬ್ಬರಕ್ಕೆ ಬೆಂಗಳೂರು ಸಜ್ಜು: ಸೆಪ್ಟೆಂಬರ್ 6ಕ್ಕೆ ರಾಜಕೀಯ ಚದುರಂಗದಾಟ ಶುರು-ಸಿದ್ದರಾಮಯ್ಯ ಮತ್ತೆ ಕಿಂಗ್ ಮೇಕರ್ ಆಗಲಿದ್ದಾರಾ!

ಸಿದ್ದರಾಮಯ್ಯ ಅಹಿಂದ ಅಬ್ಬರಕ್ಕೆ ಬೆಂಗಳೂರು ಸಜ್ಜು: ಸೆಪ್ಟೆಂಬರ್ 6ಕ್ಕೆ ರಾಜಕೀಯ ಚದುರಂಗದಾಟ ಶುರು-ಸಿದ್ದರಾಮಯ್ಯ ಮತ್ತೆ ಕಿಂಗ್ ಮೇಕರ್ ಆಗಲಿದ್ದಾರಾ!

by Shwetha
September 2, 2026
0

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಬೃಹತ್...

ಅತ್ತೆಯನ್ನು ನೋಡಿಕೊಳ್ಳುವುದು ಸೊಸೆಯ ಕಡ್ಡಾಯ ಕರ್ತವ್ಯವಲ್ಲ: ಕರ್ನಾಟಕ ಹೈಕೋರ್ಟ್

ಅತ್ತೆಯನ್ನು ನೋಡಿಕೊಳ್ಳುವುದು ಸೊಸೆಯ ಕಡ್ಡಾಯ ಕರ್ತವ್ಯವಲ್ಲ: ಕರ್ನಾಟಕ ಹೈಕೋರ್ಟ್

by Shwetha
September 2, 2026
0

ಮಗ ಮೃತಪಟ್ಟ ಬಳಿಕ ಆತನ ಪತ್ನಿ ತನ್ನ ಅತ್ತೆಯನ್ನು ಕಡ್ಡಾಯವಾಗಿ ನೋಡಿಕೊಳ್ಳಬೇಕು ಎಂಬ ಜವಾಬ್ದಾರಿಯನ್ನು ಕೇವಲ ಕುಟುಂಬದ ಪರಿಸ್ಥಿತಿಯನ್ನು ಆಧರಿಸಿ ಹೇರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram