Hijab | ಇಲ್ಲಿ ಕೇಸರಿ ಶಾಲು ಅಥವಾ ಹಿಜಬ್ನ ಪ್ರಶ್ನೆಯಲ್ಲ, ನಾವೆಲ್ಲರೂ ಸರಿಸಮಾನರು surayya-anjum-spoke-aboute-hijab-controversy saaksha tv
ಬೆಂಗಳೂರು : ಇಲ್ಲಿ ಕೇಸರಿ ಶಾಲು ಅಥವಾ ಹಿಜಬ್ನ ಪ್ರಶ್ನೆಯಲ್ಲ, ನಾವೆಲ್ಲರೂ ಸರಿಸಮಾನರು. ಯಾವುದೇ ಜಾತಿ ಧರ್ಮಕ್ಕೆ ಒಳಗೊಂಡವರಲ್ಲ.
ಶಿಕ್ಷಣವನ್ನು ಪಡೆಯಲು ಬಂದವರು ಶೈಕ್ಷಣಿಕವಾಗಿ ಎಲ್ಲರೂ ಸಮಾನರು ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಸರಯ್ಯ ಅಂಜುಮ್ ಅವರು, ಈ ಹಿಜಬ್ ನನ್ನ ಧರ್ಮದ ಪ್ರತೀಕ.
ನನ್ನ ಹಿಜಾಬ್ ನನ್ನ ಹಕ್ಕು. ನನ್ನ ದೇಶ ಹಿಜಾಬ್ ಧರಿಸೋಕ್ಕೆ ಅವಕಾಶ ನೀಡಿದೆ. ಈ ದೇಶ ನನಗೆ ನನ್ನದೇ ಧರ್ಮದ ಆಚರಣೆಗೆ ಸಂವಿಧಾನದಲ್ಲಿ ಮುಕ್ತವಾಗಿ ಅವಕಾಶ ಕೊಟ್ಟಿದೆ.
ಆದರೆ ನಮ್ಮ ಸಂವಿಧಾನ ನೀಡಿರುವ ಹಕ್ಕನ್ನ ನಾವು ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ. ನನ್ನ ಧರ್ಮ ನನ್ನ ಮನೆಗೆ ಸೀಮಿತವಾಗಬೇಕು. ಮನೆಯ ಹೊರಗೆ ಹೋಗುವಾಗ ನಾವು ಭಾರತೀಯಳಾಗಿರಬೇಕು ಎಂದಿದ್ದಾರೆ.
ಅಲ್ಲದೇ ಶಿಕ್ಷಣಕ್ಕಿಂತ ಬೇರೆ ದೊಡ್ಡ ಧರ್ಮ ಇದಿಯಾ ಅಂತಾ ಪ್ರಶ್ನಿಸಿರುವ ಅವರು, ನನಗೆ ನನ್ನ ಧರ್ಮಕ್ಕಿಂತಲೂ ನನ್ನ ದೇಶ ಮುಖ್ಯ. ನಾನು ದೇಶವನ್ನು ಪ್ರೀತಿಸ್ತೀನಿ. ನನ್ನ ಧರ್ಮವನ್ನ ಆಚರಣೆ ಮಾಡುತ್ತೇನೆ.
ವಿದ್ಯಾರ್ಥಿಗಳು ಈಗ ಹಿಜಾಬ್ ಧರಿಸಿಯೇ ಶಾಲೆಗೆ ಬರ್ತೀವಿ ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಶಾಲೆಯ ಆಡಳಿತ ಮಂಡಳಿಯವರು ಎಂದೂ ಬುರ್ಖಾ ಅಥವಾ ಹಿಜಬ್ ಧರಿಸಿ ಬರಬೇಡಿ ಎಂದು ಹೇಳಿಲ್ಲ.
ಆದರೆ ತರಗತಿಯ ಒಳಗೆ ನೀವು ಹಿಜಬ್ ಧರಿಸಬೇಡಿ ಎಂದಿದೆ. ಏಕೆಂದರೆ ಬಹಳಷ್ಟು ಹಿಂದೆ ಭಾರತೀಯ ಶಿಕ್ಷಣದಲ್ಲಿ ಸಮವಸ್ತ್ರ ಎಂಬುದನ್ನ ಅಳವಡಿಸಲಾಗಿದೆ.
ಸಮವಸ್ತ್ರ ಎಂಬ ಪದದಲ್ಲಿ ನಾವೆಲ್ಲರೂ ಸಮಾನರು ಎಂಬ ಅರ್ಥವಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇಲ್ಲಿ ಕೇಸರಿ ಶಾಲು ಅಥವಾ ಹಿಜಬ್ನ ಪ್ರಶ್ನೆಯಲ್ಲ. ನಾವೆಲ್ಲರೂ ಸರಿಸಮಾನರು. ಯಾವುದೇ ಜಾತಿ ಧರ್ಮಕ್ಕೆ ಒಳಗೊಂಡವರಲ್ಲ.
ಅಲ್ಲಿ ಶಿಕ್ಷಣವನ್ನು ಪಡೆಯಲು ಬಂದವರು ಶೈಕ್ಷಣಿಕವಾಗಿ ಎಲ್ಲರೂ ಸಮಾನರು. ಇಲ್ಲಿ ಬಡವ ಶ್ರೀಮಂತ ಅಂತಾ ಬೇದ ಭಾವವೂ ಇರಬಾರದು ಎಂಬ ಕಾರಣಕ್ಕೆ ಸಮವಸ್ತ್ರ ಜಾರಿಗೆ ತರಲಾಗಿದೆ.
ನಾವೆಲ್ಲರೂ ಭಾರತೀಯರು, ಕಲಿಯೋಕೆ ಬಂದವರು. ಆದ್ರೆ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರೇರಿತವಾಗಿ ನಾವು ಧರ್ಮವನ್ನು ಎತ್ತಿ ಹಿಡಿಯುತ್ತಿದ್ದೇವೆ. ಇದು ಮುಂದಿನ 10 ವರ್ಷಗಳಲ್ಲಿ ಮಾರಕವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.