Bangalore | ಮಸೀದಿ ಪ್ರೆಸಿಡೆಂಟ್ ಹುದ್ದೆಗಾಗಿ ಆಯೂಬ್ ಖಾನ್ ಹತ್ಯೆ
ಬೆಂಗಳೂರು : ಚಾಕು ಇರಿತಕ್ಕೆ ಒಳಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ನಗರದ ಟಿಪ್ಪುನಗರ ವಾರ್ಡ್ ನ ಮಾಜಿ ಕಾರ್ಪೋರೇಟರ್ ನಜೀಮಾ ಅವರ ಪತಿ ಆಯೂಬ್ ಖಾನ್ ಇಂದು ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ.
ಮಸೀದಿ ಪ್ರೆಸಿಡೆಂಟ್ ಹುದ್ದೆ ವಿಚಾರವಾಗಿ ಆಯೂಬ್ ಖಾನ್ ಮತ್ತು ಆಯೂಬ್ ಸಹೋದರನ ಮಗ ಮತೀನ್ ಖಾನ್ ನಡುವೆ ಗಲಾಟೆ ಆಗಿತ್ತಂತೆ.
ಆರು ತಿಂಗಳ ಹಿಂದೆ ಒಮ್ಮೆ ಮತೀನ್ ಖಾನ್ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ.
ಆದ್ರೆ ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಚಾಕು ಹಿಡಿದು ಆಯೂಬ್ ಮನೆ ಬಳಿ ಬಂದ ಮತೀನ್ ಗಲಾಟೆ ಆರಂಭಿಸಿ ಚಾಕು ಇರಿದಿದ್ದಾನೆ ಎಂದು ಆಯೂಬ್ ಪತ್ನಿ ನಜೀಮಾ ಖಾನಂ ದಾಖಲಿಸಿರುವ ದೂರಿನಲ್ಲಿದೆ.
ಸದ್ಯ ಈ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣಾ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ತನಿಖೆ ಆರಂಭಿಸಿದ್ದಾರೆ
ನಿನ್ನೆ ಚಾಕುವಿನಿಂದ ಇರಿತದಿಂದ ತೀವ್ರ ಗಾಯಗೊಂಡಿದ್ದ ಆಯೂಬ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಹೊಟ್ಟೆ ಭಾಗದಲ್ಲಿ ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.