Bidar | ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ಸಂಭ್ರಮಾಚರಣೆ
ಬೀದರ್ : ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷದ ಸಂಭ್ರಮಾಚರಣೆ ಹಾಗೂ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಜನಪದ ಉತ್ಸವದ ಭವ್ಯ ಮೆರವಣಿಗೆಗೆ ಚಾಲನೆ ದೊರಕಿದೆ.
ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಚರ್ಮದ ಹಲಗಿ ಭಾರಿಸುವ ಮೂಲಕ ಭವ್ಯ ಮೆರವಣಿಗೆ ಚಾಲನೆ ನೀಡಿ ಶುಭ ಹಾರೈಕೆ ಹಾರೈಸಿದರು.

ಸುಮಾರು ಎರಡೂ ಸಾವಿರ ಮೇಲ್ಪಟ್ಟು ಕಲಾವಿದರು ವಿವಿಧ ವೇಶ ಭೂಷಣ ಆಧರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ನಗರದ ಅಂಬೇಡ್ಕರ್ ವೃತದಲ್ಲಿ ಮೆರವಣಿಗೆಗೆ ಚಾಲನೆ ಸಿಕ್ಕಿದ್ದು, ಅಂಬೇಡ್ಕರ್ ವೃತದಿಂದ ನಗರದ ಪೂಜ್ಯ ಚೆನ್ನಬಸವ ಪಟ್ಟ ದೇವ ಜಿಲ್ಲಾ ರಂಗಮಂದಿರದ ವರೆಗೆ ವಿವಿಧ, ಭಂಗಿಯ ಕುಣಿತ ಮೂಲಕ ಮೆರವಣಿಗೆ ಸಾಗುತ್ತಿದೆ.
ಈ ಸಂಧರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಹಿರಿಯ ಪತ್ರಕರ್ತ ಶೀವಶರಣಪ್ಪಾ ವಾಲಿ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.








