Bangalore – ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಿಕೊಳ್ಳಲು ಶೈಲಜಾ ಸೋಮಣ್ಣ ಕರೆ
ಬೆಂಗಳೂರು:ಅ-28; ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕನ್ನಡಿಗರು ಸಂಕಲ್ಪ ತೊಡಬೇಕೆಂದು ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ ಕರೆ ನೀಡಿದರು.
ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಇಂದು ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂ.ಸಿ.ಬಡಾವಣೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ಬಳಿ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಸಮಾರಂಭದಲ್ಲಿ ಭಾಗವಹಿಸಿ ಕನ್ನಡದ ಸಂಕಲ್ಪ ವಿಧಿಯನ್ನು ಬೋಧಿಸಿ ಮಾತನಾಡಿದ ಅವರು ಕನ್ನಡ ಸಂಸ್ಕೃತಿ ಬಹಳ ಹಿರಿದಾದುದು, ಈ ಭವ್ಯ ಪರಂಪರೆಯ ವಾರಸುದಾರರಾದ ನಾವು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ನಾವೆಲ್ಲ ಆದರ್ಶರಾಗಬೇಕೆಂದ ಅವರು ಕನ್ನಡ, ಕನ್ನಡಿಗ, ಕರ್ನಾಟಕದ ಹಿತರಕ್ಷಣೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದರು.

ಇಂದು ನಾಡಿನಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಕೋಟಿ ಕಂಠಗಳಲ್ಲಿ ಕನ್ನಡದ ಕಂಪು-ಇಂಪುಗಳ ಮೂಲಕ ಕನ್ನಡದ ಹಿರಿಮೆ-ಗರಿಮೆ ಮುಗಿಲೆತ್ತರಕ್ಕೆ ಹಾರುವ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೋಟಿ ಕಂಠಗಳ ಗಾಯನವು ನಮಗೆಲ್ಲ ಸ್ಪೂರ್ತಿಯನ್ನು ನೀಡಿದೆ ಎಂದರು.
ಕನ್ನಡ ಚಳುವಳಿ ಮುಖಂಡ ಪಾಲನೇತ್ರ, ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ ಗೌಡ, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಸಿ.ದಾಸೇಗೌಡ, ಮೋಹನ್ ಕುಮಾರ್, ವಿ.ವಾಗೀಶ್, ಎಂ.ರಾಮಪ್ಪ, ಗಂಗಭೈರಯ್ಯ, ರೂಪಾ ಲಿಂಗೇಶ್, ಪಲ್ಲವಿ ಚೆನ್ನಪ್ಪ, ಜಯರತ್ನ ಮುಂತಾದವರು ಉಪಸ್ಥಿತರಿದ್ದರು.








