ಕೊರೊನಾಗೂ ಡೋಂಟ್ ಕೇರ್ : ರೂಲ್ಸ್ ಬ್ರೇಕ್ ಮಾಡಿ ರಾಮುಲು ಕ್ಯಾಂಪೇನ್
ಬಳ್ಳಾರಿ : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸರ್ಕಾರ ಕೊರೊನಾಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಆದ್ರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕೊರೊನಾ ನಿಯಮದ ಪ್ರಕಾರ ಕೇವಲ ಐದೇ ಜನ ಸೇರಿಸಿ ಚುನಾವಣಾ ಪ್ರಚಾರ ಮಾಡುವಂತೆ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ರಾಮುಲು, ಬಳ್ಳಾರಿಯ ವಿವಿಧ ವಾರ್ಡ್ಗಳಲ್ಲಿ ಗುಂಪು ಗುಂಪಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಅಂದಹಾಗೆ ಬಳ್ಳಾರಿಯಲ್ಲಿ ಪ್ರತಿ ದಿನ ಕೊರೊನಾ ಸ್ಫೋಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರಲ್ಲಿ ಅರಿವು ಮೂಡಿಸಬೇಕಾಗಿರುವ ಸಚಿವರೇ ಈ ರೀತಿ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.
ಸಾರ್ವಜನಿಕರಿಗೆ ರೂಲ್ಸ್ ಫಾಲೋ ಮಾಡಿ ಅಂತ ಬೊಬ್ಬೆ ಹೊಡೆಯುವ ಸರ್ಕಾರಕ್ಕೆ ರೂಲ್ಸ್ ಬ್ರೇಕ್ ಮಾಡಿದ್ರೆ ಜನರಿಗೆ ದಂಡ ವಸೂಲಿ ಮಾಡೋ ಅಧಿಕಾರಿಗಳಿಗೆ ರಾಮುಲು ಪ್ರಚಾರ ಮಾಡುತ್ತಿರುವುದು ಕಾಣುತ್ತಿಲ್ವಾ ಅನ್ನೋದು ಇದೀಗ ಜನರ ಪ್ರಶ್ನೆಯಾಗಿದೆ.