BIGGBOSS 8 : ಹೈಡ್ರಾಮಾ – ಪ್ರಿಯಾಂಕಾ ಹಟದಿಂದ ಹಸಿವಿನಿಂದ ಪರದಾಡಿದ ಸದಸ್ಯರು – ಕಣ್ಣೀರಿಟ್ಟ ಪ್ರಿಯಾಂಕಾ..!
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿರುವ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ನೀಡಿದ್ದ ಟಾಸ್ಕ್ ವೇಳೆ ಕಣ್ಣೀರಿಟ್ಟಿದ್ದಾರೆ. ಹೌದು… ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನನಗೆ ಅನ್ಯಾಯವಾಗಿದೆ ಎಂದು ಪ್ರಿಯಾಂಕಾ ಆರೋಪ ಮಾಡಿದ್ದಾರೆ. ಈ ಮುನಿಸು ದೊಡ್ಡ ಹೈಡ್ರಾಮಾಗೆ ಕಾರಣವಾಗಿದೆ.
ಅಂದ್ಹಾಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಈ ಟಾಸ್ಕ್ ನಲ್ಲಿ ಕೈ-ಕಾಲು ಬಳಸದೇ ತೇವಳಿಕೊಂಡು ಬರೀ ತಲೆಯಿಂದ ಬಾಲ್ ಅನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಿಸಬೇಕಿತ್ತು. ಇದರಲ್ಲಿ ಪ್ರಶಾಂತ್ ಸಂಬರಗಿ, ಅರವಿಂದ್, ಪ್ರಿಯಾಂಕಾ ಭಾಗವಹಿಸಿದರು. ಆಗ ಅರವಿಂದ್ ಆಕಸ್ಮಿಕವಾಗಿ ಪ್ರಿಯಾಂಕಾ ಅವರ ಕೋರ್ಟ್ನಲ್ಲಿದ್ದ ಬಾಲ್ ಅನ್ನು ತಳ್ಳಿದರು. ಇದರಿಂದ ಕೋಪಗೊಂಡ ಪ್ರಿಯಾಂಕಾ ಆಟವನ್ನು ಮುಂದವರಿಸಲಿಲ್ಲ.
ಆದರೆ, ಅರವಿಂದ್ ಮತ್ತು ಪ್ರಶಾಂತ್ ಮುಗಿಸಿದರು. ಅಂತಿಮವಾಗಿ ತೀರ್ಪುಗಾರರಾಗಿದ್ದ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್, ವೈಷ್ಣವಿ ಗೌಡ ಅವರು ಅರವಿಂದ್ ಗೆ ಮೊದಲ ಸ್ಥಾನ ಹಾಗೂ ಪ್ರಿಯಾಂಕಾಗೆ ಮೂರನೇ ಸ್ಥಾನ ನೀಡಿದರು. ಇದು ಪ್ರಿಯಾಂಕಾಗೆ ಬೇಸರ ತರಿಸಿತು. ಆಗ ಪ್ರಿಯಾಂಕಾ ನಾನು ಮೂರನೇ ಸ್ಥಾನವನ್ನು ಒಪ್ಪಿಕೊಳ್ಳಲ್ಲ ಎಂದು ರೊಚ್ಚಿಗೆದ್ದಿದ್ದಾರೆ.
ನಾನು ತಳ್ಳುತ್ತಿದ್ದ ಬಾಲ್ ಅನ್ನು ಅರವಿಂದ್ ಬೇರೆಡೆಗೆ ತಳ್ಳಿದ್ದಾರೆ. ಇದರಿಂದ ನನಗೆ ಮೋಸವಾಗಿದೆ. ಈ ತೀರ್ಪನ್ನು ನಾನು ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಲ್ಯಾಗ್ ಮಂಜು ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ.
ನನಗೆ ನ್ಯಾಯ ಸಿಗುವವರೆಗೂ ನಾನು ಮೂರನೇ ಸ್ಥಾನ ಒಪ್ಪಿಕೊಳ್ಳಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಇದ್ರಿಂದಾಗಿ ಮನೆ ಮಂದಿಯೆಲ್ಲ ಊಟವಿಲ್ಲದೇ ಹಸಿವಿನಿಂದ ನರಳಾಡಬೇಕಾಯ್ತು. ಇನ್ನೂ ಬಿಗ್ ಬಾಸ್ ಟಾಸ್ಕ್ ನ ಪ್ರಕಾರ ಗೇಮ್ ಮುಗಿಯುವವರೆಗೂ ಊಟ ಮಾಡುವಂತೆ ಇರಲಿಲ್ಲ. ಇದ್ರಿಂದ ಪ್ರಿಯಾಂಕಾ ಮಾಡಿದ ತಪ್ಪಿನಿಂದ ಮನೆ ಮಂದಿ ಹಸಿವಿನಿಂದ ಪರದಾಡುವಂತಾಗಿತ್ತು.
ತುಂಬಾ ಹೊತ್ತಾದಮೇಲೆ ಕಡೆಗೂ ಪ್ರಿಯಾಂಕಾ ತಮ್ಮ ಸೋಲನ್ನ ಒಪ್ಪಿಕೊಂಡು ಹೋಗಿ 3ನೇ ಸ್ಥಾನದಲ್ಲಿ ಕುಳಿತರು. ಇನ್ನೂ ಆಟ ಮುಕ್ತಾಯವಾಗುತ್ತಿದ್ದಂತೆ ಕೊನೇ ಬೋಗಿಯಲ್ಲಿರುವ ಪ್ರಿಯಾಂಕಾ ಮತ್ತು ದಿವ್ಯಾ ಸುರೇಶ್ ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆದರು. ಇದಾದ ನಂತರ ಪ್ರಿಯಾಂಕಾ ಕಣ್ಣೀರಿಟ್ಟಿದ್ದಾರೆ.