ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ : ಮನೆಗೆ ಬೆಂಕಿ bagalakote
ಬಾಗಲಕೋಟೆ : ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿರುವ ಘಟನೆ ಹುನಗುಂಡ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಬಸಮ್ಮ ಮಾದರ ಮೃತ ಯುವತಿಯಾಗಿದ್ದಾರೆ.
ಬಸಮ್ಮ, ರಂಜಿತ್ ಎಂಬ ಯುವಕನ್ನು ಪ್ರೀತಿಸುತ್ತಿದ್ದು, ಯುವತಿಯ ಪೋಷಕರು ಬೇರೆ ಮದುವೆ ಮಾಡಿದ್ದರು.
ಆದ್ರೆ ಬಸಮ್ಮಳ ಪ್ರೇಮ ವಿಚಾರಗೊತ್ತಾಗಿ ಗಂಡನ ಮನೆಯವರು ಯುವತಿಯನ್ನು ತವರು ಮನೆಗೆ ವಾಪಸ್ ಕಳುಹಿಸಿದ್ದರು.
ಬಳಿಕ ಯುವತಿ ಪೋಷಕರು ರಂಜಿತ್ ಗೆ ಕೊಟ್ಟು ಮದುವೆ ಮಾಡಿದ್ದರು.
ಅಂತರ್ಜಾತಿ ಹಿನ್ನೆಲೆ ಹುಡುಗನ ಮನೆಯವರು ಬೇರೆ ಮನೆ ಮಾಡಿದ್ದರು. ಆದ್ರೆ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಬಸಮ್ಮ ಶವ ಪತ್ತೆಯಾಗಿದೆ.
ಇತ್ತ ಬಸಮ್ಮ ನೇಣು ಹಾಕಿಕೊಳ್ಳಲು ರಂಜಿತ್ ಹಾಗೂ ಮನೆಯವರೇ ಕಾರಣ ಎಂದು ಯುವತಿಯ ಪೋಷಕರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.