ಹಿಂದಿ ಬಿಗ್ ಬಾಸ್ ನಿರೂಪಕರು ಚೇಂಜ್ : ಸಲ್ಲು ಜಾಗಕ್ಕೆ ಕರಣ್ – ಕಾರಣ ಏನು..? ‘ಬ್ಯಾಡ್ ಬಾಯ್’ ಕಥೆಯೇನು..?
ಭಾರತೀಯ ಕಿರುತೆರೆಯಲ್ಲಿ ಎಲ್ಲಾ ಬಾಷೆಗಳಲ್ಲೂ ಅತಿ ಹೆಚ್ಚು ಜನಪ್ರಿಯತೆ ಗಳಿಸಿ ಜನರ ಫೇವರೇಟ್ ಆಗಿರುವ ಶೋ ಅಂದ್ರೆ ಬಿಗ್ ಬಾಸ್.. ಅದ್ರಲ್ಲೂ ಹಿಂದಿಯ ಬಿಗ್ ಬಾಸ್ ಅಂತು ಒಂದು ರೇಂಜ್ ನಲ್ಲಿದೆ.. ಈಗಾಗಲೇ 14 ಸೀಸನ್ ಗಳು ಬಂದಾಗಿದ್ದು, ಬಾಲಿವುಡ್ ನ ‘ಬ್ಯಾಡ್ ಬಾಯ್ ‘ ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದಾರೆ..
ಕನ್ನಡದಲ್ಲಿ ಹೇಗೆ ಕಿಚ್ಚ ಸುದೀಪ್ ನಿರೂಪಣೆ ಮೇಲೆ ಕ್ರೇಜ್ ಇದ್ಯೋ ಅಷ್ಟೇ ಹುಚ್ಚು ಸಲ್ಲು ನಿರೂಪಣೆ ಮೇಲಿದೆ.. ಆದ್ರೆ ಇದೀಗ ಹಿಂದಿ ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಗೊತ್ತಾಗಿದೆ.. ಅದೇನೆಂದ್ರೆ ಬಿಗ್ ಬಾಸ್ ಸೀಸನ್ 15 ರ ನಿರೂಪಕರಾಗಿ ಸಲ್ಲು ಬದಲಾಗಿ ನಿರ್ಮಾಪಕ ಕರಣ್ ಜೋಹರ್ ನಿರೂಪಣೆ ಮಾಡಲಿದ್ದಾರೆ.
ಹೌದು ಬಿಗ್ ಬಾಸ್ ಸೀಸನ್ 15 ಅನ್ನು ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್ ಬಾಸ್ 15ನೇ ಸೀಸನ್ ಗೆ ತಯಾರಿ ನಡೆಯುತ್ತಿದ್ದು ಈಗಾಗಲೇ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಬಿಗ್ ಬಾಸ್ ಹೊಸ ಆವೃತ್ತಿಯ ಟೀಸರ್ ಅನ್ನು ವೂಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಹಾಗಾದರೆ ಸಲ್ಮಾನ್ ಖಾನ್ ಬಿಗ್ ಬಾಸ್ ಶೋನಿಂದ ಔಟ್ ಆದ್ರಾ ಅಂತ ಅಚ್ಚರಿ ಪಡಬೇಡಿ. ಕರಣ್ ಜೋಹರ್ ನಡೆಸಿಕೊಡುವುದು ಒಟಿಟಿ ಪ್ಲಾಟ್ ಫಾರ್ಮ್ ವೋಟ್ ನಲ್ಲಿ. ರಿಯಾಲಿಟಿ ಶೋನ ಒಟಿಟಿ ಆವೃತ್ತಿಯನ್ನು ನಡೆಸಿಕೊಡುವ ಜವಾಬ್ದಾರಿಯನ್ನು ಕರಣ್ ವಹಿಸಿಕೊಂಡಿದ್ದಾರೆ. ಈ ಮೊದಲು ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದ ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹಜಾನ್ ಗಿಲ್ ಈ ಸೀಸನ್ ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೀಗ ಕರಣ್ ಫೈನಲ್ ಆಗಿ ಶೋ ನಿರೂಪಣೆ ಮಾಡಲಿದ್ದಾರೆಂಬ ಸುದ್ದಿ ಬಹಿರಂಗವಾಗಿದ್ದು, ಬಹುತೇಕರು ನಿರಾಸೆಗೊಂಡಿದ್ದಾರೆ.
ಅಶ್ಲೀಲ ಚಿತ್ರದಲ್ಲಿ ಕಾಣಿಸಿಕೊಳ್ಳಲು ಶಿಲ್ಪಾ ಸಹೋದರಿ ಒಪ್ಪಿದ್ರಾ…?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಣ್ ‘ ಬಿಗ್ ಬಾಸ್ ಒಟಿಟಿ ಖಂಡಿತವಾಗಿಯೂ ಯಶಸ್ಸು ಕಾಣುತ್ತೆ. ನನ್ನ ತಾಯಿಯ ಕನಸು ನನಸಾಗಿದೆ. ರಿಯಾಲಿಟಿ ಮತ್ತಷ್ಟು ರೋಚಕವಾಗಿರಲಿದೆ. ವೀಕೆಂಡ್ ಕಾರ್ಯಕ್ರಮವನ್ನು ತನ್ನದೆ ಶೈಲಿಯಲ್ಲಿ ನಡೆಸಿಕೊಡುತ್ತೇನೆ’ ಎಂದು ಹೇಳಿದ್ದಾರೆ.
ಅಂದ್ಹಾಗೆ ಕರಣ್ ಜೋಹರ್ ಒಟಿಟಿ ಆವೃತ್ತಿಯಲ್ಲಿ ನಿರೂಪಣೆ ಮಾಡಲಿದ್ದಾರೆ.. ನಂತರ ಕಾರ್ಯಕ್ರಮವು ಟಿವಿಯಲ್ಲಿ ಪ್ರಸಾರವಾಗಲಿದೆ. ಟಿವಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ ಎಂದಿದ್ದಾರೆ. ಕರಣ್ ಜೋಹರ್ ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಜನಪ್ರಿಯತೆ ಗಳಿಸಿದ್ದಾರೆ.. ಅವರಿಗೆ ಸಿಕ್ಕಾಪಟ್ಟೆ ಹೈಪ್ ತಂದುಕೊಟ್ಟಿದ್ದು ಮಾತ್ರ ಕಾಫಿ ವಿತ್ ಕರಣ್ ಶೋ.
ಇತ್ತೀಚಿಗೆ ಬಿಗ್ ಬಾಸ್ ಹೊಸ ಸೀಸನ್ ನ ಟೀಸರ್ ಹಂಚಿಕೊಂಡು, ಹೊಸ ಫಾರ್ಮೆಟ್ ಅನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಡಿಜಿಟಲ್ ನಲ್ಲಿ ಬಿಗ್ ಬಾಸ್ 6 ವಾರಗಳು ಮುಂದಿರಲಿದೆ. ಬಳಿಕ ಟಿವಿಯಲ್ಲಿ ಪ್ರಸಾರವಾಗಲಿದೆ. ಡಿಜಿಟಲ್ ನಲ್ಲಿ ಪ್ರೇಕ್ಷಕರು ನೋಡುವುದು ಮಾತ್ರವಲ್ಲದೆ ಟಾಸ್ಕ್ ಗಳಲ್ಲೂ ಭಾಗಿಯಾಗಬಹುದು. ಈ ಬಾರಿಯ ಹೊಸ ರೀತಿಯ ಬಿಗ್ ಬಾಸ್ ಹೇಗಿರಲಿದೆ ಎನ್ನುವ ಪ್ರೇಕ್ಷಕರಲ್ಲೂ ಕುತೂಹಲ ಮನೆ ಮಾಡಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.