ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣಾ ಆಯೋಗ ಮಹತ್ವದ ಸ್ಪಷ್ಟನೆ ನೀಡಿದೆ. ಹಲವು ಬಾರಿ ಇವಿಎಂ ಕಾರ್ಯವೈಖರಿ ಬಗ್ಗೆ ಆರೋಪ ಮಾಡ್ತಿದ್ದ ರಾಜಕೀಯ ಪಕ್ಷಗಳ ಕುರಿತು, ಈಗಾಗಲೇ ಇವಿಎಂ ಹ್ಯಾಕಿಂಗ್ ಅಸಾಧ್ಯ ಎಂದು ಸಾಭೀತಾಗಿದೆ. ಮುಂದಿನ ಯಾವುದೇ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ತಿಳಿಸಿದ್ದಾರೆ. ಇವಿಎಂಗಳ ಕಾರ್ಯವೈಖರಿ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಇದ್ದಾಗಲೇ ಈ ಸ್ಪಷ್ಟನೆ ನೀಡಿದ್ದು, ಮುಂಬರುವ ಇಪ್ಪತ್ತು ವರ್ಷಗಳ ಕಾಲ ಇದೇ ಇವಿಎಂ ಗಳನ್ನು ಬಳಸಬಹುದು ಎಂದಿದ್ದಾರೆ. ಈ ಮೂಲಕ ಮತ್ತೆ ಬ್ಯಾಲೆಟ್ ಪೇಪರ್ ಎಲೆಕ್ಷನ್ ಬೇಕು, ಇವಿಎಂ ಬೇಡವೇ ಬೇಡ ಎನ್ನುತ್ತಿದ್ದ ರಾಜಕೀಯ ಪಕ್ಷಗಳಿಗೆ ಹಿನ್ನಡೆಯಾದಂತಾಗಿದೆ.
fifaworldcup -ಕ್ರೀಡಾಪತ್ರಕರ್ತ ಬಿತ್ತಿದ್ದ ಫಿಫಾ ಬೀಜ..! ಫಿಫಾ ವಿಶ್ವಕಪ್ ಟ್ರೋಫಿಯ ಮೂಲಕ ಹೆಮ್ಮರವಾಗಿ ಬೆಳೆಸಿದ್ದ ವಕೀಲ..! ಫುಟ್ಬಾಲ್ ಕ್ರೀಡೆಯ ಇತಿಹಾಸವನ್ನೇ ಬದಲಾಯಿಸಿದ್ದ #229ರ ರೋಚಕ ಕಥೆ..!
fifa founders first meeting # 229...! ಇದು ಪ್ಯಾರಿಸ್ ನಗರದ ಐತಿಹಾಸಿಕ ರೂ ಸೇಂಟ್ - ಹೋನೋರೆ ರಸ್ತೆಯಲ್ಲಿರುವ ಹೆಸರಿಲ್ಲದ ಹಳೆಯ ಕಟ್ಟಡದ ಡೋರ್...








