ನೈಟ್ರೈಡರ್ಸ್ ಆಟಕ್ಕೆ ಸುಸ್ತಾದ ರೋಹಿತ್ ಬಳಗ
ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ಏನೇ ಪ್ರಯೋಗ ಮಾಡಿದ್ರೂ ಯಶ ಕಾಣಲಿಲ್ಲ. ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳುವಂತಹ ಫಿನಿಶ್ ಬರಲಿಲ್ಲ.
ಬೌಲಿಂಗ್ನಲ್ಲಿ ಕರಾಮತ್ತು ನಡೆಯಲಿಲ್ಲ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು.
ಬೌಲಿಂಗ್ನಲ್ಲಿ ಲಯ ಕಂಡುಕೊಂಡು ಮುಂಬೈಗೆ ಕಡಿವಾಣ ಹಾಕಿತ್ತು. ಬ್ಯಾಟಿಂಗ್ನಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಮಾಡಿ ಹಾಲಿ ಚಾಂಪಿಯನ್ನರ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
ಮುಂಬೈ ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ಟಾಸ್ ಕೊಲ್ಕತ್ತಾ ಕಡೆ ಮುಖ ಮಾಡಿತ್ತು.
ಮುಂಬೈ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದ ಕೆಕೆಆರ್ಗೆ ಕ್ವಿಂಟಾನ್ ಡಿ ಕಾಕ್ ಮತ್ತು ರೋಹಿತ್ ಶರ್ಮಾ ಇನ್ನಿಲ್ಲದಂತೆ ಕಾಡಿದ್ರು.
ಸಿಕ್ಸರ್, ಬೌಂಡರಿಗಳ ಸುರಿಮಳೆ ಮಾಡಿದ ಈ ಜೋಡಿ ಮೊದಲ ವಿಕೆಟ್ಗೆ 9.2 ಓವರುಗಳಲ್ಲಿ 78 ರನ್ ಸೇರಿಸಿತ್ತು.
ಈ ಹಂತದಲ್ಲಿ ಸುನೀಲ್ ನರೈನ್ 30 ಎಸೆತಗಳಲ್ಲಿ 33 ರನ್ಗಳಿಸಿದ್ದ ರೋಹಿತ್ ವಿಕೆಟ್ ಕಬಳಿಸಿದ್ರು.
ಸೂರ್ಯಕುಮಾರ್ ಯಾದವ್ 5 ರನ್ಗಳಿಸಿ ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ರು.
ಡಿ ಕಾಕ್, ಇಶಾನ್ ಕಿಶನ್ ಜೊತೆ ಸೇರಿಕೊಂಡು ರನ್ ಬೇಟೆ ಮುಂದುವರೆಸಿದ್ರು. ಅಷ್ಟೇ ಅಲ್ಲ ಡಿ ಕಾಕ್ ಅರ್ಧಶತಕದ ಗಡಿ ಕೂಡ ದಾಟಿದ್ರು.
4 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ 55 ರನ್ಗಳಿಸಿದ್ದ ಡಿ ಕಾಕ್ 55 ರನ್ಗಳಿಸಿ ಪ್ರಸಿಧ್ ಕೃಷ್ಣಗೆ 2ನೇ ಬಲಿಯಾದ್ರು.
ಫರ್ಗ್ಯೂಸನ್ 14 ರನ್ಗಳಿಸಿದ್ದ ಕಿಶನ್ ವಿಕೆಟ್ ಹಾರಿಸಿದ್ರು. ಸ್ಲೋಗ್ ಓವರುಗಳಲ್ಲಿ ಕಿರಾನ್ ಪೊಲ್ಲಾರ್ಡ್ ಮತ್ತು ಕೃನಾಲ್ ಪಾಂಡ್ಯ ರನ್ರೇಟ್ ಹೆಚ್ಚಿಸುವ ಪ್ರಯತ್ನ ಮಾಡಿದ್ರು.
ಪೊಲ್ಲಾರ್ಡ್ 21 ರನ್ಗಳಿಗೆ ರನೌಟ್ ಆದ್ರೆ ಕೃನಾಲ್ 12 ರನ್ಗಳಿಸಿ ಔಟಾದ್ರು. ನಿಗದಿತ 20 ಓವರುಗಳಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ ಕಳೆದುಕೊಂಡು 155 ರನ್ಗಳಿಸಿತ್ತು.
ಗುರಿ ಬೆನ್ನಟ್ಟಿದ ಕೆಕೆಆರ್ಗೆ ಸ್ಪೋಟಕ ಆರಂಭ ಸಿಕ್ಕಿತ್ತು. ವೆಂಕಟೇಶ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಮುಂಬೈ ಬೌಲರ್ಗಳನ್ನು ಬೌಂಡರಿ, ಸಿಕ್ಸರ್ಗಳಿಗಟ್ಟಿದ್ರು.
3 ಓವರುಗಳಲ್ಲೇ ಕೆಕೆಆರ್ ಮೊತ್ತ 40ರ ಗಡಿ ದಾಟಿತ್ತು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ 13 ರನ್ಗಳಿಸಿದ್ದ ಗಿಲ್ ರನ್ನು ಕ್ಲೀನ್ ಬೌಲ್ಡ್ ಮಾಡಿದ್ರು.
ಅಯ್ಯರ್ ಜೊತೆ ಸೇರಿಕೊಂಡ ರಾಹುಲ್ ತ್ರಿಪಾಠಿ ಕೂಡ ಬಿರುಸಿನ ಆಟಕ್ಕಿಳಿದ್ರು. ಬೋಲ್ಟ್, ಬುಮ್ರಾ, ಮಿಲ್ನೆ, ಕೃನಾಲ್, ಚಹರ್ ಹೀಗೆ ಯಾರೇ ಬೌಲಿಂಗ್ ಮಾಡಿದ್ರೂ ಸಿಕ್ಸರ್, ಬೌಂಡರಿಗಳು ಸರಾಗವಾಗಿ ಹರಿದುಬಂತು.
ವೆಂಕಟೇಶ್ ಅಯ್ಯರ್ ಕೇವಲ 25 ಎಸೆತಗಳಲ್ಲಿ 4 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ ಕೇವಲ 25 ಎಸೆತಗಳಲ್ಲಿ 50 ರನ್ ಸಿಡಿಸಿದ್ರು. ತ್ರಿಪಾಠಿ 6 ಫೋರ್ 2 ಸಿಕ್ಸರ್ ನೆರವಿನಿಂದ 28 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ರು.
ಈ ಜೋಡಿ 88 ರನ್ಗಳ ಜೊತೆಯಾಟ ಆಡಿತ್ತು. ಅಯ್ಯರ್ 53 ರನ್ಗಳಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಜೊತೆಯಾಟ ಅಂತ್ಯ ಕಂಡಿತು.
ರಾಹುಲ್ ತ್ರಿಪಾಠಿ ಅರ್ಧಶತಕದ ಬಳಿಕವೂ ಸುಮ್ಮನಾಗಲಿಲ್ಲ. ಸಿಕ್ಸರ್, ಬೌಂಡರಿಗಳನ್ನು ಸರಾಗವಾಗಿ ಬಾರಿಸಿದ್ರು. ಆದರೆ ನಾಯಕ ಇಯಾನ್ ಮೊರ್ಗಾನ್ ಬೇಗನೆ ಬುಮ್ರಾಗೆ ವಿಕೆಟ್ ಒಪ್ಪಿಸಿದ್ರು.
- 1 ಓವರುಗಳಲ್ಲಿ ಗುರಿಮುಟ್ಟಿದ ಕೆಕೆಆರ್ ಇನ್ನೂ 23 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ತ್ರಿಪಾಠಿ 42 ಎಸೆತಗಳಲ್ಲಿ ಅಜೇಯ 74 ರನ್ಗಳಿಸಿದರೆ, ರಾಣಾ ಅಜೇಯ 5 ರನ್ಗಳಿಸಿದ್ರು. ಮುಂಬೈ ಪರ ಬುಮ್ರಾ 3 ವಿಕೆಟ್ ಪಡೆದು ಮಿಂಚಿದ್ರು.









