ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಐಪಿಎಲ್ 2021 | ಅಬುದಾಭಿಯಲ್ಲಿ ರಾಜಸ್ಥಾನ್ `ರಾಯಲ್’ ಆಟ

Namratha Rao by Namratha Rao
October 3, 2021
in IPL 2021, Newsbeat, ಐಪಿಎಲ್ 2021
Rajasthan saaksha tv
Share on FacebookShare on TwitterShare on WhatsappShare on Telegram

ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಎಲ್ಲವೂ ಇತ್ತು. ಬೌಂಡರಿಗಳ ಸುರಿಮಳೆ ಆಯಿತು. ಸಿಕ್ಸರ್​​ಗಳು ಸಿಡಿದವು. ರುತುರಾಜ್​​ ಶತಕದ ಸಂಭ್ರಮ ನೋಡಲು ಸಿಕ್ಕಿತ್ತು. ರಾಜಸ್ಥಾನದ ಅಬ್ಬರದ ಆರಂಭ, ಯಶಸ್ವಿ ಜೈಸ್ವಾಲ್​​ ಸ್ಪೋಟಕ ಬ್ಯಾಟಿಂಗ್​​​​… ಟಿ20 ಆಟಕ್ಕೆ ಏನು ಬೇಕಿತ್ತೋ ಅದೆಲ್ಲವೂ ನೋಡಲು ಸಿಕ್ಕಿತ್ತು.  ಒಟ್ಟು 18 ಸಿಕ್ಸರ್​​ಗಳು ಸಿಡಿದರೆ,  ಎರಡೂ ಇನ್ನಿಂಗ್ಸ್​​ಗಳಿಂದ 33 ಫೋರ್​​ಗಳು ದಾಖಲಾಗಿದ್ದವು.

ಅಬುಧಾಭಿಯಲ್ಲಿ ಟಾಸ್​ಗೆದ್ದ ರಾಜಸ್ಥಾನ ರಾಯಲ್ಸ್​​ ಚೆನ್ನೈ ಸೂಪರ್​​ ಕಿಂಗ್ಸ್​ ತಂಡವನ್ನು ಮೊದಲು ಬ್ಯಾಟಿಂಗ್​​ಗೆ ಇಳಿಸಿತು.  ಫಾಫ್​ ಡು ಪ್ಲೆಸಿಸ್​​ ಮತ್ತು ರುತುರಾಜ್​​ ಗಾಯಕ್ವಾಡ್​​​ ಎಂದಿನಂತೆ ಉತ್ತಮ ಆರಂಭ ತಂದುಕೊಟ್ಟರು. ಮೊದಲ ವಿಕೆಟ್​​ಗೆ ಈ ಜೋಡಿ 47 ರನ್​​ಗಳ ಜೊತೆಯಾಟ ತಂದುಕೊಟ್ಟಿತು.  19 ಎಸೆತಗಳಲ್ಲಿ  25 ರನ್​ಗಳಿಸಿದ ಫಾಫ್​​ ತೆವಾಟಿಯ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಎಡವಿ ಸ್ಟಂಪ್​​ ಔಟ್​​ ಆದರು. ಭಡ್ತಿ ಪಡೆದು ಬಂದ ಸುರೇಶ್​​​ ರೈನಾ ಮತ್ತೆ ವೈಫಲ್ಯ ಅನುಭವಿಸಿ 3 ರನ್​ಗಳಿಗೆ ತೆವಾಟಿಯಾಗೆ ವಿಕೆಟ್​​ ಒಪ್ಪಿಸಿದರು.

Related posts

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

August 8, 2026
ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

August 8, 2026

ರುತುರಾಜ್​​ ಗಾಯಕ್ವಾಡ್​​ ಜೊತೆ ಸೇರಿದ ಮೊಯಿನ್​​ ಅಲಿ ಉತ್ತಮ ಜೊತೆಯಾಟ ಕಟ್ಟಿದರು.  ರುತುರಾಜ್​​ ಅರ್ಧಶತಕದ ಸಂಭ್ರಮ ಕೂಡ ಆಚರಿಸಿಕೊಂಡರು. ಆದರೆ ಮೊಯಿನ್​ ಅಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಸ್ಟಂಪ್​​ಔಟ್​​ ಆದರು.  ಅಂಬಟಿ ರಾಯಡು ಕೂಡ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ.

ರುತುರಾಜ್​​ ಜೊತೆ ಸೇರಿದ ಜಡೇಜಾ ಉತ್ತಮ ಜೊತೆಯಾಟ ಕಟ್ಟಿದರು. ರುತುರಾಜ್​​​​​​ ಬೌಂಡರಿ, ಸಿಕ್ಸರ್​​ಗಳ ಮೂಲಕ ಅಬ್ಬರಿಸಿದರು. ಜಡೇಜಾ ಕೂಡ ಸ್ಲಾಗ್​​ ಓಫವರನ ಎಲ್ಲಾ ಲಾಭ ಪಡೆದುಕೊಂಡು.  ಈ ಜೋಡಿ  ಅಬ್ಬರದ 55ರನ್​​ಗಳ ಜೊತೆಯಾಟ ಆಡಿತು.  ಇನ್ನಿಂಗ್ಸ್​​ನ ಕೊನೆಯ ಎಸೆತದಲ್ಲಿ ಸಿಕ್ಸರ್​​ ಮೂಲಕ ರುತುರಾಜ್​​ ಶತಕದ ಸಂಭ್ರಮವನ್ನು ಕೂಡ ಆಚರಿಸಿದರು. ಜಡೇಜಾ 15 ಎಸೆತಗಳಲ್ಲಿ ಅಜೇಯ 32 ರನ್​​ಗಳಿಸಿದರು. 9 ಬೌಂಡರಿ ಮತ್ತು 5 ಸಿಕ್ಸರ್​​ ನೆರವಿನಿಂದ ರುತುರಾಜ್​​ 60 ಎಸೆತಗಳಲ್ಲಿ ಅಜೇಯ 101ರನ್​​ಗಳಿಸಿದರು. ನಿಗದಿತ 20 ಓವರುಗಳಲ್ಲಿ ಚೆನ್ನೈ 4 ವಿಕೆಟ್​​ ಕಳೆದುಕೊಂಡು 189 ರನ್​​ಗಳಿಸಿತ್ತು.

Rajasthan saaksha tv

ಗುರಿ ಬೆನ್ನಟ್ಟ ಹೊರಟ ರಾಯಲ್ಸ್​​ಗೆ ಎವಿನ್​​ ಲೆವಿಸ್​​ ಮತ್ತು ಯಶಸ್ವಿ ಜೈಸ್ವಾಲ್​​ ವಿಸ್ಪೋಟಕ ಆರಂಭ ತಂದುಕೊಟ್ಟರು.  ಕೇವಲ 24 ಎಸೆತಗಳಲ್ಲಿ 50 ರನ್​​ಗಳ ಜೊತೆಯಾಟ ಬಂದಿತ್ತು. ಪವರ್​ ಪ್ಲೇ- ಮುಗಿಯುವರಷ್ಟರಲ್ಲಿ ರಾಜಸ್ಥಾನ ಮೊತ್ತ80 ರನ್​​ಗಳಾಗಿತ್ತು. ಲೆವಿಸ್​ 12 ಎಸೆತಗಳಲ್ಲಿ 27 ರನ್​​ಗಳಿಸಿ ಔಟಾದರು. ಸ್ಪೋಟಕ ಆಟ ಆಡಿದ ಜೈಸ್ವಾಲ್​ 6 ಫೋರ್​​, 3 ಸಿಕ್ಸರ್​ ನೆರವಿನಿಂದ ಕೇವಲ 21 ಎಸೆತಗಳಲ್ಲಿ 50 ರನ್​​ಗಳಿಸಿ ಆಸೀಫ್​​ಗೆ ವಿಕೆಟ್​​ ಒಪ್ಪಿಸಿದರು.

ಸಂಜುಸ್ಯಾಮ್ಸನ್​​ ಮತ್ತು ಶಿವಂ ದುಬೆ ಅಬ್ಬರದ ಆಟವನ್ನು ಕೈ ಬಿಡಲಿಲ್ಲ. ಅದರಲ್ಲೂ ದುಬೆ ಸಿಕ್ಸರ್​​ಗಳ ಮೂಲಕ ಅಟ್ಟಹಾಸ ಮೆರೆದರು.  ಚೆನ್ನೈ ಬೌಲರ್​​ಗಳು ದಿಕ್ಕು ತಪ್ಪಿದರು. ಸ್ಲೋವರ್​ ಬಾಲ್​​​ಗಳು ಅಂದುಕೊಂಡ ಜಾಗದಲ್ಲಿ ಬೀಳಲಿಲ್ಲ. ಸ್ಪಿನ್​​​​​ ಆಗಲೇ ಇಲ್ಲ. ಚೆನ್ನೈ ದಿಕ್ಕು ತಪ್ಪಿತ್ತು. ನೋಡ ನೋಡುತ್ತಿದ್ದಂತೆ ದುಬೆ 31 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು.

ಇನ್ನೇನು ದುಬೆ ಮತ್ತು ಸ್ಯಾಮ್ಸನ್​​ ರಾಯಲ್ಸ್​​ ತಂಡವನ್ನು ಗೆಲ್ಲಿಸಿಯೇ ಬಿಟ್ಟರು ಅನ್ನುವ ಹೊತ್ತಿಗೆ ಥಾಕೂರ್​​​​ 28 ರನ್​​ಗಳಿಸಿದ್ದ ಸ್ಯಾಮ್ಸನ್​​ ವಿಕೆಟ್​ ಕಬಳಿಸಿದರು. ಆದರೆ ದುಬೆ ಜೊತೆ ಸೇರಿದ ಗ್ಲೆನ್​​ ಫಿಲಿಪ್ಸ್​​ ಗೆಲುವಿಗೆ ಬೇಕಾಗಿದ್ದ ರನ್​​ ಗಳಿಸಿಕೊಟ್ಟರು. ರಾಯಲ್ಸ್​​​​​​​​ 19.3 ಓವರುಗಳಲ್ಲಿ 3 ವಿಕೆಟ್​​ ಕಳೆದುಕೊಂಡು ಗುರಿ ತಲುಪಿತು. 7 ವಿಕೆಟ್​​ಗಳ ಜಯ ಸಾಧಿಸಿದ ರಾಯಲ್ಸ್​​ ಪ್ಲೇ-ಆಫ್​​ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಚೆನ್ನೈ ಸೋತರೂ ಅಗ್ರಸ್ಥಾನದಿಂದ ಕೆಳಗೆ ಇಳಿಯಲಿಲ್ಲ.

Tags: #Saaksha TVcskipl 2021rr
ShareTweetSendShare
Join us on:

Related Posts

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

by Shwetha
August 8, 2026
0

ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ಅನುಸರಿಸಿದ ಹಾದಿ...

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

by Shwetha
August 8, 2026
0

ಭಾರತವು ಹಿಂದೂ ರಾಷ್ಟ್ರವಾಗಬಾರದು ಎಂಬ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹಾಗೂ ತೀವ್ರ ವಾಕ್ಸಮರಕ್ಕೆ...

ಸಂಪುಟ ವಿಸ್ತರಣೆಯ ಅಸಮಾಧಾನ ಶೀಘ್ರವೇ ಶಮನವಾಗಲಿದೆ: ಲಕ್ಷ್ಮಣ್ ಸವದಿ

ಸಂಪುಟ ವಿಸ್ತರಣೆಯ ಅಸಮಾಧಾನ ಶೀಘ್ರವೇ ಶಮನವಾಗಲಿದೆ: ಲಕ್ಷ್ಮಣ್ ಸವದಿ

by Shwetha
August 8, 2026
0

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಳಿಕ ವ್ಯಕ್ತವಾಗಿರುವ ಅಸಮಾಧಾನ ಮುಂದಿನ 4–5 ದಿನಗಳಲ್ಲಿ ಶಮನವಾಗಲಿದೆ ಎಂದು ಸಚಿವ ಲಕ್ಷ್ಮಣ್ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಸಿಯಲ್ಲಿ ಮಾತನಾಡಿದ ಅವರು,...

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

ಯುಪಿಐ ವಹಿವಾಟು ಇನ್ಮುಂದೆ ಫ್ರೀ ಅಲ್ವಾ ಕಾಂಗ್ರೆಸ್ ಆರೋಪಕ್ಕೆ ಮೋದಿ ಸರ್ಕಾರದ ಖಡಕ್ ಉತ್ತರ

by Shwetha
August 8, 2026
0

ನವದೆಹಲಿ: ದೇಶದ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ ಬಳಕೆದಾರರಲ್ಲಿ ಮನೆ ಮಾಡಿದ್ದ ಶುಲ್ಕದ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಯುಪಿಐ ವಹಿವಾಟಿನ ಮೇಲೆ ಮರ್ಚೆಂಟ್...

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

by Shwetha
August 8, 2026
0

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ನಡೆಸಿದ ಕೊನೆಯ ಹಂತದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram