ಮತಾಂತರದ ಒತ್ತಡ : ಒಂದೇ ಕುಟುಂಬದ ನಾಲ್ವರು ಸಾವು
ಮಂಗಳೂರು : ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವನಪ್ಪಿರುವ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.. ಇವರ ಸಾವಿಗೆ ಬಲವಂತದ ಮತಾಂತರವೇ ಕಾರಣವೆಂಬುದು ಪತ್ತೆಯಾಗಿದೆ..
ಮಂಗಳೂರಿನ ಮೋರ್ಗನ್ಸ್ ಗೇಟ್ ನಲ್ಲಿ ಡಿ.8 ರಂದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹೆಂಡತಿ ಮಕ್ಕಳನ್ನ ಕೊಂದು ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.. ಮೃತ ವಿಜಯಲಕ್ಷ್ಮಿಯನ್ನು ನೂರ್ ಜಹಾನ್ ಎಂಬಾಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಬಹಳ ಪ್ರಯತ್ನ ಮಾಡಿದ್ದಳು ಎನ್ನಲಾಗಿದೆ.. ನೂರ್ ಜಹಾನ್ ಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ..
ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿದ್ದ ನೂರ್ ಜಹಾನ್ ಎಂಬಾಕೆಯ ಮನೆಯಲ್ಲಿ ಮೃತ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದರು. ವಿಜಯಲಕ್ಷ್ಮಿ ಹಾಗೂ ಗಂಡನ ನಡುವೆ ಪದೆ ಪದೇ ಗಲಾಟೆಯಾಗುತ್ತಿತ್ತು.. ಅದನ್ನೇ ಲಾಭಮಾಡಿಕೊಂದಿದ್ದ ನೂರ್ ಜಹಾನ್ ಪತಿ ನಾಗೇಶ್ಗೆ ಡೈವೋರ್ಸ್ ಕೊಡು. ನಂತರ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸುತ್ತೇನೆಂದು ಒತ್ತಡ ಹೇರಿದ್ದಾಳೆ ಎನ್ನಲಾಗಿದೆ. ಅಲ್ಲದೇ ವಿಜಯಲಕ್ಷ್ಮಿ ಮುದುವೆಗೂ ಮುನ್ನವೂ ಕೂಡ ಇದೇ ರೀತಿ ಇಸ್ಲಾಂಗೆ ಮತಾಂತರ ಆಗಲು ತುಂಬಾ ಒತ್ತಾಯ ಮಾಡಿದ್ದಳಂತೆ ಈ ನೂರ್ ಜಹಾನ್.
ಅಷ್ಟೇ ಅಲ್ದೇ ವಿಜಯಲಕ್ಷ್ಮಿ ಫೋಟೋ ಬಳಸಿ ಮುಸ್ಲಿಂ ಹುಡುಗನ ಹುಡುಕಾಟವನ್ನೂ ಕೂಡ ನಡೆಸಿದ್ದಳು. ಇದೇ ವಿಚಾರವಾಗಿ ನಾಗೇಶ್ ಮತ್ತು ವಿಜಯಲಕ್ಷ್ಮಿ ಮಧ್ಯೆ ಗಲಾಟೆಯಾಗಿ ಹೆಂಡತಿ ಮಕ್ಕಳನ್ನು ಕೊಲೆ ಮಾಡಿರುವ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಶ್ ತನ್ನ ಹೆಂಡತಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮಗ , ಮಗಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ .