Mohammed siraj | ಆ 9 ವಿಕೆಟ್ಸ್ ನನ್ನ ಹಣೆಬರಹ ಬದಲಿಸಿತು
ಮೊಹಮ್ಮದ್ ಸಿರಾಜ್ .. ಸದ್ಯ ಟೀಂ ಇಂಡಿಯಾ ಸ್ಟಾರ್ ವೇಗಿಯಾಗಿ ಬೆಳೆಯುತ್ತಿದ್ದಾರೆ.
2017ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸಿರಾಜ್, ತಂಡದಲ್ಲಿ ಖಾಯಂ ಸದಸ್ಯರಾಗಿದ್ದಾರೆ.
ಸಿರಾಜ್ ಐಪಿಎಲ್ ನಲ್ಲಿ ಆರ್ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ 2022 ರ ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ಸಿರಾಜ್ ಆರ್ಸಿಬಿ ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ್ದು, ಕೆಲವ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ.
“ನನ್ನ ವೃತ್ತಿಯ ವಿಷಯದಲ್ಲಿ ನನ್ನ ತಾಯಿ ಮತ್ತು ತಂದೆ ಯಾವಾಗಲೂ ಜಗಳವಾಡುತ್ತಿದ್ದರು. ನಾನು ಕೆಲಸ ಮಾಡಬೇಕು, ಇಲ್ಲಾ ಓದಬೇಕು ಎನ್ನುವ ವಿಚಾರವಾಗಿ ಜಗಳವಾಗಿತ್ತು.
ಆದರೆ ನನ್ನ ಗಮನವೆಲ್ಲಾ ಕ್ರಿಕೆಟ್ ಮೇಲಿತ್ತು. ಈ ವಿಷಯವನ್ನು ಅಪ್ಪನಿಗೆ ಹೇಗೆ ಹೇಳಬೇಕೊ ಎಂಬುದು ಗೊತ್ತಾಗುತ್ತಿರಲಿಲ್ಲ. ಹೀಗೆ ಜಳವಾಗುತ್ತಿರುವಾಗ ನನ್ನ ಮಾವ ಮನಗೆ ಬಂದರು.
ಅವರಿಗೆ ಕ್ರಿಕೆಟ್ ಕ್ಲಬ್ ಇತ್ತು. ನಮ್ಮ ಮನೆಯವರು ಹೇಳಿದ್ದನೆಲ್ಲಾ ಕೇಳಿದ ನನ್ನ ಮಾವ, ನಾನು ಅವನನ್ನು ( ಸಿರಾಜ್) ಕ್ಲಬ್ಗೆ ಕರೆದುಕೊಂಡು ಹೋಗುತ್ತೇನೆ.
ಸಿರಾಜ್ ಅಲ್ಲಿಗೆ ಬಂದು ಕ್ರಿಕೆಟ್ ಆಡುತ್ತಾನೆ ಆಮೇಲೆ ಏನು ಮಾಡಬೇಕೆಂದು ನಿರ್ಧರಿಸೋಣ ಎಂದರು. ಅದಕ್ಕೆ ನಾನು ಓಕೆ ಎಂದೆ. ಆಡಿದ ಮೊದಲ ಪಂದ್ಯದಲ್ಲಿ ಒಂಬತ್ತು ವಿಕೆಟ್ ಕಬಳಿಸಿದೆ. ನನ್ನ ಪ್ರದರ್ಶನ ನೋಡಿದ ಚಿಕ್ಕಪ್ಪ ಆಶ್ವರ್ಯಗೊಂಡಿದ್ದರು.
ತಕ್ಷಣ ಅಪ್ಪನಿಗೆ ಫೋನ್ ಮಾಡಿ.. ಅವನಿಗೆ ಓದು.. ಕೆಲಸ ಮಾಡುವಂತೆ ಬಲವಂತ ಮಾಡಬೇಡಿ.. ಅವರಿಗೆ ಇಷ್ಟವಾದದ್ದನ್ನು ಮಾಡಲಿ. ಸಿರಾಜ್ ಜೊತೆ ನಾನಿರುತ್ತೇನೆ.. ಎಲ್ಲ ಖರ್ಚನ್ನು ಭರಿಸುತ್ತೇನೆ ಎಂದು ನನ್ನ ಕೈಗೆ ಐನೂರು ರೂಪಾಯಿ ಇಟ್ಟರು.
ಆ ಐದು ನೂರಿನಲ್ಲಿ ನನ್ನ ಮನೆಯವರಿಗೆ ಮುನ್ನೂರು ರೂಪಾಯಿ ಕೊಟ್ಟು ಉಳಿದ ಇನ್ನೂರು ರೂಪಾಯಿ ನನ್ನ ಬಳಿ ಇಟ್ಟುಕೊಂಡಿದ್ದೆ.
ಒಂದು ರೀತಿಯಲ್ಲಿ ನಾನು ಕ್ರಿಕೆಟ್ಗೆ ಬರಲು ಪರೋಕ್ಷವಾಗಿ ನನ್ನ ಮಾವ ಕಾರಣವಾಗಿದ್ದರೆ.. ಆ 9 ವಿಕೆಟ್ಗಳು ಕೂಡ ಕಾರಣವಾಗಿವೆ. ವಾಸ್ತವವಾಗಿ, ಆ ಒಂಬತ್ತು ವಿಕೆಟ್ ಗಳು ನನ್ನ ಹಣೆಬರಹವನ್ನು ಬದಲಿಸಿವೆ ಎಂದು ಸಿರಾಜ್ ತಿಳಿಸಿದ್ದಾರೆ.









