ನಾವು ಕರ್ನಾಟಕ ರಾಜ್ಯವನ್ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು: ಡಿಕೆಶಿ
ಬೆಂಗಳೂರು: ನಾವು ಕರ್ನಾಟಕ ರಾಜ್ಯವನ್ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ನಾವು ಬೈ ಎಲೆಕ್ಷನ್ ನಲ್ಲಿ ಉತ್ತಮ ಕೆಲಸ ಮಾಡಿದ್ದೀವಿ. ರಾಹುಲ್ ಗಾಂಧಿಗೆ ನಾನು ಒಂದು ಮಾತನ್ನ ಹೇಳಲು ಬಯಸುತ್ತೇನೆ. ನಾನು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗ್ತೇನೆ. ಎಐಸಿಸಿ ಏನು ನಿರ್ಧಾರ ಮಾಡುತ್ತೆ, ಸೋನಿಯಾ ಜಿ ಹಾಗೂ ನೀವು ಏನು ನಿರ್ಧಾರ ಮಾಡ್ತೀರಿ ಅದನ್ನ ನಾನು ತಲೆ ಬಾಗಿ, ನೆರವೇರಿಸುವೆ.
ಹಾಗೇ ಷೇರಿಂಗ್ ಅಂಡ್ ಕೇರಿಂಗ್ ಇಲ್ಲದೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಕರ್ನಾಟಕ ರಾಜ್ಯವನ್ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು. ನಾವು ಮಾಡಲು ಸಾಕಷ್ಟು ಕೆಲಸ ಇದೆ. ನಾನು ನಮ್ಮ ಯಾವ ನಾಯಕರಿಗೂ ನಿದ್ದೆ ಮಾಡಲು ಬಿಟ್ಟಿಲ್ಲ. ನಿರುದ್ಯೋಗಿಗಳಿಗಾಗಿ ನಾವು ರ್ಯಾಲಿ ಮಾಡುತ್ತೇವೆ.
ಅಲ್ಲದೇ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಮಾಡ್ತಿವಿ. ತಿಂಗಳಲ್ಲಿ 15 ದಿನ ಕರ್ನಾಟಕದಲ್ಲಿ ಇರೋದಾಗಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ನಾವು ಗೆದ್ದೇ ಗೆಲ್ತೀವಿ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದರು ಮಾತನಾಡುತ್ತಾ ಡಿಕೆ ಶಿವಕುಮಾರ್ ಅವರು ಈ ಆಶಾಭಾವ ವ್ಯಕ್ತಪಡಿಸಿದರು