ಸಿಎಂ ಸಾಗುವ ದಾರಿಯಲ್ಲಿ ಅಣಕು ಬ್ಯಾನರ್ ಪ್ರದರ್ಶನ
ಚಿಕ್ಕಮಗಳೂರು: ಇಂದು (ಮಂಗಳವಾರ) ಶೃಂಗೇರಿಗೆ ಭೇಟಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಅವರು ಮುಜುಗರ ಪಡುವಂತಹ ಘಟನೆ ನಡೆದಿದೆ.
ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ಶೃಂಗೇರಿಗೆ ಭೇಟಿ ನೀಡಿದ್ದು, ಈ ವೇಳೆ ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು. ನೂರು ಬೆಡ್ ಆಸ್ಪತ್ರೆ ಮಣಜೂರಾತಿ ಕಡತವು 15 ವರ್ಷಗಳಾದರೂ ಪ್ರಗತಿಯಲ್ಲಿದೆ. ತೀವ್ರ ಅನಾರೋಗ್ಯ ಸಂಧರ್ಭದಲ್ಲಿ ಸುಮಾರು ನೂರು ಬೆಡ್ ಕಿಲೋಮಿಟರ್ ದೂರದ ಆಸ್ಪತ್ರಗೆ ತೆರಳಬೇಕಾಗುವುದರಿಂದ, ದಯವಿಟ್ಟು ತಮ್ಮ ಸುರಕ್ಷತೆಯ ದೃಷ್ಟಿಯಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ ಎಂದು ಶೃಂಗೇರಿಯ ಹಲವೆಡೆ ಅಣಕವಾಡುತ್ತಿರುವ ಬ್ಯಾನರ್ ಗಳ ಪ್ರದರ್ಶನ ಮಾಡಲಾಗಿದೆ.
ಈ ರೀತಿಯ ಬ್ಯಾನರ್ ಗಳನ್ನು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಅವಳಡಿಸಿದೆ. ಅಲ್ಲದೇ ಈ ಸಮಿತಿ ಶೃಂಗೇರಿಯಲ್ಲಿ ಆಸ್ಪತ್ರೆ ಬೇಕು ಎಂದು ಸಿಎಂ ಬೊಮ್ಮಾಯಿಯವರಿಗೆ ಮನವಿ ನೀಡಿದ್ದು, ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಆಸ್ಪತ್ರೆಗೆ ಜಾಗ ಕೊಟ್ಟು, ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.








