Congress | ಅಭಿವೃದ್ಧಿಯನ್ನು ಅಧಃಪತನಡೆಗೆ ಕೊಂಡೊಯ್ಯುತ್ತಿರುವುದೇ BJP ಸಾಧನೆ
ಬೆಂಗಳೂರು : ಅಭಿವೃದ್ಧಿಯನ್ನು ಅಧಃಪತನಡೆಗೆ ಕೊಂಡೊಯ್ಯುತ್ತಿರುವುದೇ ಬಿಜೆಪಿ ಸಾಧನೆ ಎಂದು ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಗುತ್ತಿಗೆ ಕೆಲಸಗಳ ಮೇಲೆ 18% GST ತೆರಿಗೆ ವಿಧಿಸಿದೆ ಕೇಂದ್ರ ಸರ್ಕಾರ, ಬಿಜೆಪಿ ಸರ್ಕಾರದ ಕಮಿಷನ್ 40% ಒಟ್ಟು 58% ಖರ್ಚು! ಇನ್ನುಳಿದ ಮೊತ್ತದಲ್ಲಿ ಕಾಮಗಾರಿ ಮಾಡಬೇಕಾದ ಅನಿವಾರ್ಯತೆ! ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಸಾಧ್ಯವೇ? ಅಭಿವೃದ್ಧಿಯನ್ನು ಅಧಃಪತನಡೆಗೆ ಕೊಂಡೊಯ್ಯುತ್ತಿರುವುದೇ ಬಿಜೆಪಿ ಸಾಧನೆ.
ಲಾಕ್ಡೌನ್ ನಂತರ ಜನತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ನಿರುದ್ಯೋಗ ದಾಖಲೆ ಮಟ್ಟಕ್ಕೇರಿದೆ. ಇದರ ನಡುವೆ ಬೆಲೆ ಏರಿಕೆಯ ಗಾಯ, ಆ ಗಾಯಕ್ಕೆ GST ತೆರಿಗೆಯ ಬರೆ. ಬಿಜೆಪಿ ಸರ್ಕಾರ ಜನರ ಮೈಯ್ಯಲ್ಲಿರುವ ಕೊನೆಯ ರಕ್ತದ ಹನಿಯನ್ನೂ ಬಿಡದಂತೆ ಹೀರಲು ನಿರ್ಧರಿಸಿದೆ. ಬಿಜೆಪಿಯ #ದುಬಾರಿದುನಿಯಾ ದಲ್ಲಿ ಹಸಿವಿನಿಂದ ಸಾವು ಸಂಭವಿಸುತ್ತವೆ.
ಲಾಕ್ಡೌನ್ ನಂತರ ಜನತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ, ನಿರುದ್ಯೋಗ ದಾಖಲೆ ಮಟ್ಟಕ್ಕೇರಿದೆ.
ಇದರ ನಡುವೆ ಬೆಲೆ ಏರಿಕೆಯ ಗಾಯ, ಆ ಗಾಯಕ್ಕೆ GST ತೆರಿಗೆಯ ಬರೆ.
ಬಿಜೆಪಿ ಸರ್ಕಾರ ಜನರ ಮೈಯ್ಯಲ್ಲಿರುವ ಕೊನೆಯ ರಕ್ತದ ಹನಿಯನ್ನೂ ಬಿಡದಂತೆ ಹೀರಲು ನಿರ್ಧರಿಸಿದೆ.
ಬಿಜೆಪಿಯ #ದುಬಾರಿದುನಿಯಾ ದಲ್ಲಿ ಹಸಿವಿನಿಂದ ಸಾವು ಸಂಭವಿಸುತ್ತವೆ.
— Karnataka Congress (@INCKarnataka) July 19, 2022
ನಳಿನ್ ಕುಮಾರ್ ಕಟೀಲ್ ಅವರೇ, ಬಿಟ್ ಕಾಯಿನ್ ಪರಿಚಯವಾದ ಮೇಲೆ ಡಾಲರ್, ರೂಪಾಯಿಗಳನ್ನು ಮರೆತೇಬಿಟ್ರಾ?! 2013ರಲ್ಲಿ ನೀವೇ ಆಡಿದ ಮಾತು ನೆನಪಿದೆಯೇ? ಒಂದು ಡಾಲರ್ಗೆ 15 ರೂಪಾಯಿ ಆಗುವ ಬದಲು 80 ರೂಪಾಯಿಯಾಗಿದೆ. ಈಗ ಡಾಲರ್ ಬಗ್ಗೆ ಮಾತನಾಡದಿರಲು ಗಂಟಲಲ್ಲಿ ಬಿಟ್ ಕಾಯಿನ್ ಸಿಕ್ಕಿಕೊಂಡಿದೆಯೇ!?
ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂಬ ಘೋಷಣೆಯ ಗೊಂದಲ ಬಗೆಹರಿಸುವಲ್ಲಿ ಸರ್ಕಾರಕ್ಕೆ ಇನ್ನೂ ಸಾಧ್ಯವಾಗದಿರುವುದೇಕೆ? 25 ಬಿಜೆಪಿ ಸಂಸದರಿದ್ದೂ, ಡಬಲ್ ಇಂಜಿನ್ ಸರ್ಕಾರಗಳಿದ್ದೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆಯ ಕೊರತೆ ಇರುವುದು ನಾಚಿಕೆಗೇಡು. ಬಸವರಾಜ ಬೊಮ್ಮಾಯಿ ಅವರೇ, ಸ್ಪಷ್ಟತೆಗೆ ಬರಲು ಇನ್ನೆಷ್ಟು ಸಮಯ ಬೇಕು ಎಂದು ಪ್ರಶ್ನಿಸಿದೆ.
ಇದನ್ನೂ ಓದಿ : Kareena Kapoor : ಸೈಫ್ ಅಲಿ ಖಾನ್ ಈಗಾಗಲೇ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ : ಪ್ರೆಗ್ನೆನ್ಸಿ ವದಂತಿಗೆ ತೆರೆ ಎಳೆದ ಬೇಬೋ..!!!








