ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

IND v SL: ಭಾರತದ ಮುಂದೆ ಮಂಡಿಯೂರಿದ ಲಂಕಾ: ಸೆಮೀಸ್‌ಗೆ ಎಂಟ್ರಿಕೊಟ್ಟ ರೋಹಿತ್‌ ಪಡೆ

ಟೀಂ ಇಂಡಿಯಾಕ್ಕೆ 302 ರನ್‌ಗಳ ಭಾರೀ ಅಂತರದ ಜಯ

C Dinesh by C Dinesh
November 2, 2023
in Uncategorized
Team India

Team India

Share on FacebookShare on TwitterShare on WhatsappShare on Telegram

ಮೊಹಮ್ಮದ್‌ ಶಮಿ(5/18), ಮೊಹಮ್ಮದ್‌ ಸಿರಾಜ್‌(3/16) ಅವರುಗಳ ಆಕ್ರಮಣಕಾರಿ ಬೌಲಿಂಗ್‌ ಹಾಗೂ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಶ್ರೀಲಂಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಭಾರತ 302 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿತು.

ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತರು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ 50 ಓವರ್‌ಗಳಲ್ಲಿ 357/8 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಈ ಕಠಿಣ ಟಾರ್ಗೆಟ್‌ ಚೇಸ್‌ ಮಾಡಿದ ಶ್ರೀಲಂಕಾ, ಬ್ಯಾಟ್ಸಮನ್‌ಗಳ ವೈಫಲ್ಯದಿಂದಾಗಿ 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಈ ಗೆಲುವಿನೊಂದಿಗೆ ರೋಹಿತ್‌ ಶರ್ಮ ಸಾರಥ್ಯದ ಟೀಂ ಇಂಡಿಯಾ, ಪ್ರಸಕ್ತ ಏಕದಿನ ವಿಶ್ವಕಪ್‌ನ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿದೆ.

Virat and Gill

ಗಿಲ್‌, ಕೊಹ್ಲಿ, ಶ್ರೇಯಸ್‌ ಅಬ್ಬರ:
ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ಮೊದಲ ಓವರ್‌ನಲ್ಲೇ ರೋಹಿತ್‌ ಶರ್ಮ(4) ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆದರೆ 2ನೇ ವಿಕೆಟ್‌ಗೆ ಜೊತೆಯಾದ ಶುಭ್ಮನ್‌ ಗಿಲ್‌(92 ರನ್‌, 92 ಬಾಲ್‌, 11 ಬೌಂಡರಿ, 2 ಸಿಕ್ಸ್‌) ಹಾಗೂ ವಿರಾಟ್‌ ಕೊಹ್ಲಿ(88 ರನ್‌, 94 ಬಾಲ್‌, 11 ಬೌಂಡರಿ) ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಲಂಕಾದ ಬೌಲಿಂಗ್‌ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 189 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಬಳಿಕ 2ನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್‌ ಅಯ್ಯರ್‌(82 ರನ್‌, 56 ಬಾಲ್‌, 3 ಬೌಂಡರಿ, 6 ಸಿಕ್ಸ್‌) ಸ್ಪೋಟಕ ಬ್ಯಾಟಿಂಗ್‌ನಿಂದ ತಂಡದ ಮೊತ್ತವನ್ನ 350ರ ಗಡಿದಾಟುವಂತೆ ಮಾಡಿದರು. ಉಳಿದಂತೆ ರವೀಂದ್ರ ಜಡೇಜಾ(35), ಕೆಎಲ್‌ ರಾಹುಲ್‌(21), ಸೂರ್ಯಕುಮಾರ್‌ ಯಾದವ್‌(12) ರೋಹಿತ್‌ ಶರ್ಮ(4) ಮೊಹಮ್ಮದ್‌ ಶಮಿ(2) ಉಪಯುಕ್ತ ರನ್‌ಗಳಿಸಿದರು. ಶ್ರೀಲಂಕಾ ಪರ ಚಾಣಾಕ್ಷ ಬೌಲಿಂಗ್‌ ದಾಳಿ ನಡೆಸಿದ ಮಧುಶಂಕ(5/80) ಅದ್ಭುತ ಬೌಲಿಂಗ್‌ನಿಂದ ಮಿಂಚಿದರೆ. ಚಮೀರಾ ಏಕೈಕ ವಿಕೆಟ್‌ ಪಡೆದುಕೊಂಡರು.

Related posts

bhoorame-video-song-released-directed-by-aj-shetty-saakshattv

saakshatv film- ‘ಭೂರಮೆ’ ವಿಡಿಯೋ ಸಾಂಗ್ ರಿಲೀಸ್…ಹೇಗಿದೆ ಎಜೆ ಶೆಟ್ಟಿ ಹೊಸ ಸಾಹಸ?

July 23, 2026
premada-oorali-movie-eru-peru-hrudaya-song-release-saakshattv

saakshatvfilm- ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ “ಪ್ರೇಮದ ಊರಲಿ..!

July 23, 2026

Mohammed Shami

ಭಾರತದ ಬೌಲಿಂಗ್‌ ಕಮಾಲ್‌:
ಭಾರತದ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನದಿಂದ ಮಿಂಚಿದರೆ. ಬೌಲರ್‌ಗಳು ಸಹ ಆಕ್ರಮಣಕಾರಿ ಬೌಲಿಂಗ್‌ನಿಂದ ಶ್ರೀಲಂಕಾ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಿಂದ ಲಂಕಾ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ ಭಾರತೀಯ ಬೌಲರ್‌ಗಳು ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಪ್ರಮುಖವಾಗಿ ಜಸ್ಪ್ರೀತ್‌ ಬುಮ್ರ(1/8) ಲಂಕಾ ಬ್ಯಾಟಿಂಗ್‌ ವೈಫಲ್ಯಕ್ಕೆ ಮುನ್ನಡಿ ಬರೆದರೆ. ನಂತರ ಮೊಹಮ್ಮದ್‌ ಶಮಿ(5/18), ಮೊಹಮ್ಮದ್‌ ಸಿರಾಜ್‌(3/16) ಅತ್ಯುತ್ತಮ ದಾಳಿ ನಡೆಸಿದರು. ಉಳಿದಂತೆ ರವೀಂದ್ರ ಜಡೇಜಾ(1/4) ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. ಲಂಕಾ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಮೊಹಮ್ಮದ್‌ ಶಮಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Team India

ಸೆಮೀಸ್‌ಗೆ ಮೊದಲ ಎಂಟ್ರಿ:
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಅಜೇಯ ಗೆಲುವಿನ ಓಟ ಮುಂದುವರಿಸಿರುವ ಭಾರತ, ಸತತ 7 ಪಂದ್ಯಗಳಲ್ಲಿ ಗೆದ್ದುಬೀಗಿದೆ. ಈ ಗೆಲುವಿನೊಂದಿಗೆ ಆಡಿರುವ 7 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಪಾಯಿಂಟ್ಸ್‌ ಪಡೆಯುವ ಮೂಲಕ ಟೂರ್ನಿಯ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

IND v SL, Team India, Sri Lanka, Mohammad Shami, Mohammad Siraj, ODI Cricket

Tags: IND v SLmohammad shamiMohammad SirajODI cricketSri Lankateam india
ShareTweetSendShare
Join us on:

Related Posts

bhoorame-video-song-released-directed-by-aj-shetty-saakshattv

saakshatv film- ‘ಭೂರಮೆ’ ವಿಡಿಯೋ ಸಾಂಗ್ ರಿಲೀಸ್…ಹೇಗಿದೆ ಎಜೆ ಶೆಟ್ಟಿ ಹೊಸ ಸಾಹಸ?

by admin
July 23, 2026
0

ಕಿಸ್, ಕಬ್ಜ ಹಾಗೂ ಬಘೀರ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಭೂರಮೆ ಎಂಬ ಚೆಂದದ ಹಾಡಿನ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಎಜೆ ಶೆಟ್ಟಿ ‌ಡೈರೆಕ್ಟರ್...

premada-oorali-movie-eru-peru-hrudaya-song-release-saakshattv

saakshatvfilm- ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ “ಪ್ರೇಮದ ಊರಲಿ..!

by admin
July 23, 2026
0

ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ "ಪ್ರೇಮದ ಊರಲಿ" ಚಿತ್ರದಿಂದ ಮತ್ತೊಂದು ಪ್ರೀತಿ ತುಂಬಿದ ಹಾಡು ಏರುಪೇರು ಹೃದಯಾ ಬಿಡುಗಡೆಯಾಗಿದೆ. ಶ್ರೀರಾಮ್ ಮತ್ತು ರಮಿಕಾ...

devara hesaralli pramana madutthene.. nagendra prasad kannada film

Saakshafilm – ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್!

by admin
July 23, 2026
0

ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್! ಬೆಂಗಳೂರು: ಖ್ಯಾತ ಸಾಹಿತಿ ಹಾಗೂ ನಟ ಡಾ. ವಿ. ನಾಗೇಂದ್ರ ಪ್ರಸಾದ್...

astrology

Astro- ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

by admin
July 22, 2026
0

ಯಾವುದಾದರೂ ಅಮವಾಸೆಯಂದು ಆಥವಾ ಶುಕ್ರವಾರದಂದು ಈ ಪರಿಹಾರವನ್ನು ನೀವು ಪಾಲಿಸಿ ಹವ್ಯಾಸ ತಿಂಗಳಿಗೊಮ್ಮೆ ಬರುವ ಈ ಅಮವಾಸ್ಯೆ ಬಹಳ ಶಕ್ತಿಯುತವಾಗಿರುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಕೂಡ ಯಾವುದೇ...

jai hanuman

Astro – ಈ ವಿಶೇಷ ಅಲಂಕಾರದಲ್ಲಿ ನಂಬಿದ ಭಕ್ತರನ್ನು ಕಾಪಾಡುವ ಆಂಜನೇಯ ಸ್ವಾಮಿಯ ದರ್ಶನ ಪಡೆದರೆ ಇಷ್ಟಾರ್ಥಗಳು ಸಿದ್ದಿಯಾಗಿ ಕಾರ್ಯ ಸಾಧನೆಯಾಗುತ್ತೆ..!!

by admin
July 21, 2026
0

ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram